Bengaluru News

ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಪೂರ್ತಿ ದಿನ ಕರೆಂಟ್ ಇರಲ್ಲ! ಇಲ್ಲಿದೆ ಏರಿಯಾಗಳು

ಜೂನ್ 25ರ ಬುಧವಾರ, ತುರ್ತು ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

Publisher: Kannada News Today (Digital Media)

ಬೆಂಗಳೂರು (Bengaluru): ಬೆಸ್ಕಾಂ (BESCOM) ತನ್ನ ಅಧಿಕೃತ ಪ್ರಕಟಣೆಯ ಮೂಲಕ ಜೂನ್ 25ರ ಬುಧವಾರ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಲಿರುವುದಾಗಿ ತಿಳಿಸಿದೆ. ತುರ್ತು ನಿರ್ವಹಣಾ ಕಾರ್ಯಗಳನ್ನು (emergency maintenance work) ಕೈಗೊಳ್ಳಲಾಗುತ್ತಿರುವ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಶೋಭಾ ಇಂದ್ರಪ್ರಸ್ಥ ವಿದ್ಯುತ್ ಉಪಕೇಂದ್ರದಲ್ಲಿ ಕೂಡ ನಿರ್ವಹಣಾ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಶೋಭಾ ಅಪಾರ್ಟ್‌ಮೆಂಟ್, ಗ್ಲೋಬಲ್ ಮಾಲ್‌ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಿಗೂ ವಿದ್ಯುತ್ ವ್ಯತ್ಯಯ ಆಗಲಿದೆ.

ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಪೂರ್ತಿ ದಿನ ಕರೆಂಟ್ ಇರಲ್ಲ! ಇಲ್ಲಿದೆ ಏರಿಯಾಗಳು

ಇದನ್ನೂ ಓದಿ: ಇನ್ಮುಂದೆ ಪಡಿತರ ಚೀಟಿದಾರರಿಗೆ ಆಹಾರ ಕಿಟ್ ವಿತರಣೆ, ಹೊಸ ಯೋಜನೆಗೆ ಸಿದ್ಧತೆ

ತಾಂತ್ರಿಕ ಸಿಬ್ಬಂದಿ (technical staff) ನಿರಂತರ ಕೆಲಸ ಮಾಡುತ್ತಿರುವುದರಿಂದ, ಸುರಕ್ಷಿತ ಹಾಗೂ ನಿರಂತರ ಪೂರೈಕೆಗಾಗಿ ಈ ತಾತ್ಕಾಲಿಕ ತೊಂದರೆ ಅನಿವಾರ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೂರ್ತಿದಿನದ ವಿದ್ಯುತ್ ವ್ಯತ್ಯಯ: ಎಲ್ಲೆಲ್ಲಿ?

ಜೂನ್ 25ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಇಲ್ಲದಿರುವ ಸಾಧ್ಯತೆ ಇದೆ:

Power Outage in Bengaluru

  • ಹಳೇಹಳ್ಳಿ
  • ಮಾರ್ಗೊಂಡನಹಳ್ಳಿ
  • ಕಲ್ಕೆರೆ ರಸ್ತೆ
  • ಬೈರತಿ ಗ್ರಾಮ
  • ಕನಕಶ್ರೀ ಲೇಔಟ್
  • ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ
  • ಗುಬ್ಬಿ ಅಡ್ಡ ರಸ್ತೆ
  • ಕ್ಯಾಲಸನಹಳ್ಳಿ
  • ಪುರವಂಕರ ಅಪಾರ್ಟ್‌ಮೆಂಟ್
  • ಪೂರ್ಣಪ್ರಜ್ಞ
  • ಗವಿಗುಡಿ

ಈ ಪ್ರದೇಶಗಳು ವುರವಂಕಪುರಂ ಪಾಮ್ ಬೀಚ್ ಉಪಕೇಂದ್ರ ವ್ಯಾಪ್ತಿಗೆ ಬರುವುದರಿಂದ, ನಿರ್ವಹಣಾ ಕಾರ್ಯದ ಸಂದರ್ಭದಲ್ಲಿ ವಿದ್ಯುತ್ ಕಟ್ (power outage) ಆಗಲಿದೆ ಎಂದು ಮಾಹಿತಿ.

ಇದನ್ನೂ ಓದಿ: ಬಡ ರೈತರಿಗಾಗಿ ಉಚಿತ ಮೇವು ಕಟಾವು ಯಂತ್ರ! ಬಂಪರ್ ಸಬ್ಸಿಡಿ ಯೋಜನೆ

ಮುಂಜಾಗ್ರತೆ ಹಾಗೂ ಸಾರ್ವಜನಿಕರಿಗೆ ಸಲಹೆ

ಅಡುಗೆ, ಕೆಲಸ ಅಥವಾ ಇನ್ನಾವುದೇ ಕಾರ್ಯಗಳಿಗೆ ಕರೆಂಟ್‌ ಅಗತ್ಯವಿರುವವರು ಈ ಅವಧಿಯಲ್ಲಿ ಮುಂಚಿತವಾಗಿ ಯೋಜನೆ ರೂಪಿಸಿಕೊಳ್ಳುವುದು ಉತ್ತಮ. ವಿದ್ಯುತ್ ವ್ಯತ್ಯಯದಿಂದ ಯಾವುದೇ ತೊಂದರೆ ಆಗದಂತೆ ಬೆಸ್ಕಾಂ ಜನರಿಗೆ ಮುನ್ನೆಚ್ಚರಿಕೆ ನೀಡಿದೆ.

Bengaluru Areas to Face Power Cut on June 25

English Summary

Our Whatsapp Channel is Live Now 👇

Whatsapp Channel

Related Stories