ಬಿಪಿಎಲ್ ಪಡಿತರ ಚೀಟಿದಾರರಿಗೆ ಹೊಸ ಮಾರ್ಗಸೂಚಿ: ಸರ್ಕಾರದ ಮಹತ್ವದ ನಿರ್ಧಾರ
ಈಗಾಗಲೇ 13 ಲಕ್ಷ ಫಲಾನುಭವಿಗಳು ಇ-ಕೆವೈಸಿ (e-KYC) ಮಾಡದೆ ಪಡಿತರ ಪಡೆಯುತ್ತಿಲ್ಲ. ಹೀಗಾಗಿ ಸರ್ಕಾರ ಇ-ಕೆವೈಸಿ ಕಡ್ಡಾಯಗೊಳಿಸಿ, ಯೋಗ್ಯ ಫಲಾನುಭವಿಗಳಿಗೆ ಮಾತ್ರ ಪಡಿತರ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಿದೆ.
- ಪಡಿತರ ಚೀಟಿ ಪರಿಷ್ಕರಣೆಗೆ ಸಚಿವ ಕೆ.ಎಚ್. ಮುನಿಯಪ್ಪ ಹೊಸ ಮಾರ್ಗಸೂಚಿ
- ಅನರ್ಹ ಬಿಪಿಎಲ್ ಚೀಟಿಗಳನ್ನು ಪತ್ತೆಹಚ್ಚಲು ಕಠಿಣ ಕ್ರಮ
- ಪಡಿತರ ವಿತರಣೆಯಲ್ಲಿ ಇ-ಕೆವೈಸಿ (e-KYC) ಕಡ್ಡಾಯ
ಬೆಂಗಳೂರು (Bengaluru): ರಾಜ್ಯದ ಪಡಿತರ ಚೀಟಿ (Ration Card) ಹೊಂದಿರುವವರಿಗೆ ಮಹತ್ವದ ಸುದ್ದಿ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ (K.H. Muniyappa) ಅವರಿಂದ ಹೊಸ ಮಾರ್ಗಸೂಚಿ ಜಾರಿಗೆ ಬರಲಿದೆ. ಬಿಪಿಎಲ್ (BPL Ration Card) ಪಡಿತರ ಚೀಟಿದಾರರಿಗೆ ಯಾವುದೇ ತೊಂದರೆ ಆಗದಂತೆ ಪಡಿತರ ಪರಿಷ್ಕರಣೆ ನಡೆಸಲು ಸರ್ಕಾರ ಮುಂದಾಗಿದೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಸಚಿವರು ಮಾತನಾಡಿ, ರಾಜ್ಯದ ಅನರ್ಹ ಬಿಪಿಎಲ್ ಚೀಟಿದಾರರನ್ನು ಪತ್ತೆಹಚ್ಚಿ, ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ಸಮರ್ಪಕವಾಗಿ ವಿತರಣೆಯಾಗಬೇಕೆಂದು ಸೂಚಿಸಿದ್ದಾರೆ. ಸರ್ಕಾರ ಈ ಸಂಬಂಧ ಸಮಗ್ರ ಪರಿಶೀಲನೆ ನಡೆಸಲಿದ್ದು, ಅನರ್ಹ ಚೀಟಿದಾರರನ್ನು ಪತ್ತೆ ಹಚ್ಚಲು ವಿಶೇಷ ಕ್ರಮ ಕೈಗೊಳ್ಳಲಾಗುವುದು.
ಈಗಾಗಲೇ 13 ಲಕ್ಷ ಫಲಾನುಭವಿಗಳು ಇ-ಕೆವೈಸಿ (e-KYC) ಮಾಡದೆ ಪಡಿತರ ಪಡೆಯುತ್ತಿಲ್ಲ. ಹೀಗಾಗಿ ಸರ್ಕಾರ ಇ-ಕೆವೈಸಿ ಕಡ್ಡಾಯಗೊಳಿಸಿ, ಯೋಗ್ಯ ಫಲಾನುಭವಿಗಳಿಗೆ ಮಾತ್ರ ಪಡಿತರ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಿದೆ. ಫೆಬ್ರವರಿ 20ರೊಳಗೆ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಥರ್ಮಲ್ ಪ್ರಿಂಟರ್ (Thermal Printer) ಅಳವಡಿಸುವುದಾಗಿ ಸರ್ಕಾರ ತಿಳಿಸಿದೆ.
ಗೃಹಲಕ್ಷ್ಮಿ ಯೋಜನೆ ಬದಲಾವಣೆ? ರಾಜ್ಯ ಸರ್ಕಾರದ ಹೊಸ ನಿರ್ಧಾರ
ಇನ್ನು, ಆಹಾರ ಧಾನ್ಯ ವಿತರಣಾ ವ್ಯವಸ್ಥೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಸರ್ಕಾರ ಹೊಸ ತಂತ್ರಗಳನ್ನು ಜಾರಿಗೆ ತರುವುದಾಗಿದೆ. ಪಡಿತರ ವಿತರಣೆಗೆ ಬಳಸುವ ಲಾರಿಗಳಿಗೆ ಜಿಪಿಎಸ್ (GPS) ಕಡ್ಡಾಯಗೊಳಿಸಿ, ಪರವಾನಗಿ ಪಡೆದ ಅಂಗಡಿಗಳಲ್ಲಿ ಮಾತ್ರ ಸರಬರಾಜು ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.
ಪೆಟ್ರೋಲ್ ಪಂಪ್ (Petrol Pump) ಮತ್ತು ತೂಕದ ಸಾಧನಗಳ ದುರಸ್ತಿಗೆ ಸಂಬಂಧಿಸಿದಂತೆ ಈ ವರ್ಷ 1,821 ಪೆಟ್ರೋಲ್ ಪಂಪ್ಗಳ ತಪಾಸಣೆ ಮಾಡಲಾಗಿದೆ. ಇದರ ಪೈಕಿ 225 ಪ್ರಕರಣಗಳ ಮೇಲೆ ದಂಡ ವಿಧಿಸಿ, ₹5.55 ಲಕ್ಷ ಸಂಗ್ರಹಿಸಲಾಗಿದೆ. ಪಡಿತರ ವಿತರಣಾ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕಗೊಳಿಸಲು ಹೊಸ ತಂತ್ರಜ್ಞಾನವನ್ನು ಅಳವಡಿಸಲು ಸರ್ಕಾರ ಮುಂದಾಗಿದೆ.
New Guidelines for Ration Card, Karnataka Government Major Decision
Our Whatsapp Channel is Live Now 👇