Business NewsIndia News

ದೇಶದ ರೈತರಿಗೆ ಸಂತಸದ ಸುದ್ದಿ, ಇಂತಹ ರೈತರ ಖಾತೆಗೆ 8,000 ರೂಪಾಯಿ ಜಮಾ!

ರೈತ (farmer) ಉದ್ಧಾರ ಆದ್ರೆ ಆ ದೇಶ ಸಹಜವಾಗಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ದಿ (country will develop) ಹೊಂದಲು ಸಾಧ್ಯವಿದೆ. ಯಾಕೆ ಈ ಮಾತನ್ನು ಹೇಳಲಾಗುತ್ತದೆ ಎಂದರೆ, ಒಬ್ಬ ರೈತ ಕಷ್ಟಪಟ್ಟು ದುಡಿದು ಆತ ಬೆಳೆದ ಬೆಳೆಗಳನ್ನು ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಾನೆ. ಆ ಬೆಳೆಗಳನ್ನು ನಾವು ಖರೀದಿ ಮಾಡುತ್ತೇವೆ.

ನಮ್ಮ ನಿತ್ಯದ ಜೀವನಕ್ಕೆ ಬೇಕಾದ ಅಕ್ಕಿಯಿಂದ ಹಿಡಿದು ಬೇಳೆ ಕಾಳುಗಳು ಹೀಗೆ ಪ್ರತಿಯೊಂದು ವಸ್ತುವನ್ನು ಕೂಡ ರೈತ ಬಹಳ ಮುತುವರ್ಜಿಯಿಂದ ಬೆಳೆದರೆ ಮಾತ್ರ ನಾವು ನೆಮ್ಮದಿಯಿಂದ ಊಟ ಮಾಡಲು ಸಾಧ್ಯ.

PM Kisan Yojana New Update on Deposit of Money to Bank Account

ಪಿಯುಸಿ, ಡಿಗ್ರಿ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ; ತಕ್ಷಣ ಅಪ್ಲೈ ಮಾಡಿ

ಆದರೆ ಇತ್ತೀಚಿನ ದಿನಗಳಲ್ಲಿ ಮಳೆಯ ಅಭಾವ ಎನ್ನುವುದು ರೈತರ ಫಸಲಿನ ಮೇಲೆ ತುಸು ಹೆಚ್ಚಾಗಿಯೇ ಪರಿಣಾಮ ಬೀರುತ್ತದೆ. ಇದರಿಂದಾಗಿ ರೈತರು ಸಾಲ (Loan) ಮಾಡಿಕೊಳ್ಳುವುದು ಸಹಜ.

ಇದಕ್ಕಾಗಿ ಸರ್ಕಾರ ರೈತರಿಗೆ ಸಬ್ಸಿಡಿ ಸಾಲವನ್ನು (subsidy loan) ನೀಡುತ್ತದೆ. ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ (low rate of interest) ಒದಗಿಸುವುದರಿಂದ ರೈತರು ಕೃಷಿ ಚಟುವಟಿಕೆಗೆ ತೆಗೆದುಕೊಂಡಿರುವ ಸಾಲವನ್ನು (Loan Re Payment) ತೀರಿಸಲು ಕೂಡ ಸುಲಭವಾಗಿ ಆಗುತ್ತದೆ.

ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆ! (Pradhan mantri Kisan Samman Nidhi Yojana)

ರೈತರಿಗೆ ಆರ್ಥಿಕ ಭದ್ರತೆ (financial security) ಯನ್ನು ಒದಗಿಸಲು, ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ (pm Narendra Modi ji) ಅವರ ನೇತೃತ್ವದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಲ್ಲಿ 2015 ಆರಂಭಿಸಲಾಯಿತು.

ಯೋಜನೆಯ ಅಡಿಯಲ್ಲಿ ಫಲಾನುಭವಿ ರೈತರ ಖಾತೆಗೆ ಪ್ರತಿ ವರ್ಷ 6,000ಗಳನ್ನು ಜಮಾ ಮಾಡಲಾಗುತ್ತಿದೆ. ಈ ಹಣವನ್ನು ಮೂರು ಕಂತುಗಳಲ್ಲಿ ಪ್ರತಿ ಕಂತಿಗೆ 2000 ಗಳಂತೆ ನೇರವಾಗಿ ರೈತರ ಖಾತೆಗೆ (Bank Account) ಜಮಾ ಆಗುತ್ತದೆ.

ದಿನಕ್ಕೆ 4,000 ಆದಾಯ, ಸರಳ ಬಿಸಿನೆಸ್! ಜಾಸ್ತಿ ಬಂಡವಾಳವೂ ಬೇಡ; ಇಲ್ಲಿದೆ ಡೀಟೇಲ್ಸ್

Loanವಾರ್ಷಿಕ ಮೊತ್ತ ಹೆಚ್ಚಿಸಲು ಸರ್ಕಾರದ ನಿರ್ಧಾರ!

ಇಲ್ಲಿಯವರೆಗೆ ಪ್ರತಿ ವರ್ಷ 6,000rs ಗಳನ್ನು ಪಡೆದುಕೊಳ್ಳುತ್ತಿದ್ದ ರೈತರು ಇನ್ನು ಮುಂದೆ ರೂ.8,000ಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ, ಅಂದರೆ ಸರ್ಕಾರ ಕಿಸಾನ್ ಸಮಾನ್ ನಿಧಿ ಯೋಜನೆಯ ಹಣವನ್ನು 2,000 ಗಳಷ್ಟು ಹೆಚ್ಚಿಸಲು ತೀರ್ಮಾನಿಸಿದೆ.

ಚುನಾವಣೆಗೂ ಮೊದಲೇ ಘೋಷಣೆಯಾಗುತ್ತಾ ಹೆಚ್ಚುವರಿ ಹಣ!

2024ರಲ್ಲಿ ಲೋಕಸಭಾ ಚುನಾವಣೆ (loksabha election 2024) ನಡೆಯಲಿದೆ ಇದೆ ಸಂದರ್ಭದಲ್ಲಿ ಅಂದರೆ ಫೆಬ್ರುವರಿ 2024ರಲ್ಲಿ ಮಾನ್ಯ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala sitaraman) ಅವರು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಸಮಯದಲ್ಲಿ ಕಿಸಾನ್ ಯೋಜನೆಯ ಅಡಿಯಲ್ಲಿ ರೈತರಿಗೆ ಸಿಗುತ್ತಿರುವ 6,000 ರೂಪಾಯಿಗಳ ಬದಲು 8,000ಗಳನ್ನು ನೀಡಲು ಬಜೆಟ್ ಮಂಡಿಸಲಿದ್ದಾರೆ.

ಪಿ ಎಂ ಕಿಸಾನ್ ಯೋಜನೆಯ 15 ಕಂತುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅಂದ್ರೆ 30 ಸಾವಿರ ರೂಪಾಯಿಗಳು ಪ್ರತಿಯೊಬ್ಬ ರೈತನಿಗೆ ವರ್ಗಾವಣೆ ಮಾಡಲಾಗಿದೆ. ಇನ್ನು ಮುಂದೆ ಎರಡು ಸಾವಿರ ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಡೆಯುವ ಸಾಧ್ಯತೆ ಇದೆ. ಇದರ ಬಗ್ಗೆ ಸ್ಪಷ್ಟನೆ ಸಿಗಬೇಕು ಅಂದ್ರೆ ಫೆಬ್ರವರಿ ತಿಂಗಳವರೆಗೆ ಕಾಯಲೇಬೇಕು.

ಹೆಣ್ಣು ಮಕ್ಕಳ ಪೋಷಕರಿಗೆ ಸಂತಸದ ಸುದ್ದಿ! ಈ ಯೋಜನೆ ನೀಡುತ್ತೆ ಹಿಚ್ಚಿನ ಬೆನಿಫಿಟ್

ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (How to apply for PMKSNY)

ಪ್ರತಿಯೊಬ್ಬ ರೈತರು ಕೂಡ ಕಿಸಾನ್ ಕಾರ್ಡ್ ಹೊಂದಿರಬೇಕು. ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ವಿವರ, ಮೊಬೈಲ್ ಸಂಖ್ಯೆ, ವಿಳಾಸದ ಪುರಾವೆ ಫೋಟೋ ಈ ಮೊದಲಾದ ದಾಖಲೆಗಳನ್ನು ಕಿಸಾನ್ ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುವುದರ ಮೂಲಕ ಆನ್ಲೈನ್ ನಲ್ಲಿಯೇ ಅರ್ಜಿ ಸಲ್ಲಿಸಬಹುದು.

ಇದುವರೆಗೆ ನೀವು ಬ್ಯಾಂಕ್ಗಳಲ್ಲಿ ನಿಮ್ಮ ಖಾತೆಗೆ ಕೆವೈಸಿ ಮಾಡಿಸಿಕೊಳ್ಳದೆ ಮುಂಬರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ.

ಒಟ್ಟಿನಲ್ಲಿ ರೈತರಿಗೆ ಬಹಳ ಅನುಕೂಲವಾಗುವಂತಹ, ಕಿಸಾನ್ ಸಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಿ ನೀವು ಕೂಡ ಸರ್ಕಾರದಿಂದ ಉಚಿತವಾಗಿ ಹಣ ಪಡೆದುಕೊಳ್ಳಿ.

8,000 rupees deposited in the account of such farmers in this Scheme

Our Whatsapp Channel is Live Now 👇

Whatsapp Channel

Kannada News Today

Kannada News Today 🌐

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
FacebookX
We value your thoughts!
Send your feedback to us at kannadanewstoday@gmail.com

Related Stories