ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನ ಬ್ಯಾಂಕ್ ರಜೆ ಇದೆಯಾ? ಇಲ್ಲಿದೆ ಮಾಹಿತಿ!
Bank Holiday : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ (Ayodhya Sri Rama Mandira) ದಲ್ಲಿ, ರಾಮನ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ.
Bank Holiday : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ (Ayodhya Sri Rama Mandira) ದಲ್ಲಿ, ರಾಮನ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ಜನವರಿ 22 2024ರ ಶುಭ ದಿನದಂದು ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಮಂದಿರ ಲೋಕಾರ್ಪಣೆಗೊಳ್ಳಲಿದೆ.
ಸರಿಯು ನದಿಯ ತಟದಲ್ಲಿ ಇರುವ ಅಯೋಧ್ಯೆ (Ayodhya) ಯ ಪಟ್ಟಣವನ್ನ ರಾಮ ಎಂದೇ ಗುರುತಿಸಲಾಗುತ್ತದೆ. ಇದೀಗ ರಾಮ ಪಟ್ಟಣ ಸಕಲ ಸಿದ್ಧತೆಯಿಂದ ರಾಮಮಂದಿರದ ಉದ್ಘಾಟನೆಗೆ ಸಜ್ಜಾಗಿದೆ. ದೇಶ ವಿದೇಶಗಳಿಂದ ಲಕ್ಷಾಂತರ ಜನ ಈ ಅದ್ಭುತ ಸಂಭ್ರಮವನ್ನು ಕಣ್ತುಂಬಿಕೊಳ್ಳಲಿದ್ದಾರೆ.
ಆಧಾರ್ ಕಾರ್ಡ್ ನೋಂದಣಿ ನಿಯಮದಲ್ಲಿ ಮಹತ್ವದ ಬದಲಾವಣೆ; UIDAI ಸೂಚನೆ!
ಜನವರಿ 22ರಂದು ರಜೆ ಇದೆಯಾ?
ಉತ್ತರ ಪ್ರದೇಶ ಸರ್ಕಾರ (Uttar Pradesh government) ಶ್ರೀರಾಮ ಮಂದಿರ ಉದ್ಘಾಟನೆ (inauguration) ಯ ಪ್ರಯುಕ್ತ 22ನೇ ತಾರೀಖಿನಂದು, ಕೇಂದ್ರ ಕಚೇರಿಗಳು ಸರ್ಕಾರಿ ಕಚೇರಿಗಳು ಶಾಲಾ ಕಾಲೇಜು ಮೊದಲಾದವುಗಳಿಗೆ ಅರ್ಧ ದಿನಗಳ ಕಾಲ ರಜೆ ಘೋಷಿಸಿದೆ ಎನ್ನಲಾಗಿದೆ.
ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೆ ದೇಶದ ಇತರ ಕೆಲವು ರಾಜ್ಯಗಳಲ್ಲಿ ಕೂಡ ಶಿಕ್ಷಣ ಸಂಸ್ಥೆಗಳಿಗೆ (holiday for education sector) ಸಂಪೂರ್ಣ ದಿನದ ರಜೆ ಘೋಷಣೆ ಮಾಡಿದ್ದಾರೆ. ಸರ್ಕಾರಿ ಕಚೇರಿ (government office) ಗಳಿಗೆ ಅರ್ಥ ದಿನದ ರಜೆ ಹಾಗೂ ದಿನವಿಡೀ ಮಧ್ಯದ ಅಂಗಡಿ ಮುಚ್ಚಲಾಗುವುದು.
ನಿನ್ನೆಯವರೆಗೂ ಕುಸಿದಿದ್ದ ಚಿನ್ನದ ಬೆಲೆ ಮತ್ತೆ ಏರಿಕೆ! ಇಲ್ಲಿದೆ ಚಿನ್ನ ಬೆಳ್ಳಿ ಬೆಲೆ ಡೀಟೇಲ್ಸ್
ಕೇಂದ್ರ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ! (Holiday for Central Government office)
ಶ್ರೀ ರಾಮ ಮಂದಿರ ಎನ್ನುವುದು ನಮ್ಮ ಭಾವನೆಗೆ ಸಂಬಂಧಿಸಿದ ವಿಷಯ ಹಾಗಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಕೆಲಸ ಮಾಡುವವರು ಕೂಡ ಈ ದಿನದ ಅದ್ಭುತ ದೃಶ್ಯವನ್ನು ಮಾಧ್ಯಮಗಳ ಮೂಲಕವಾದರೂ ಕಣ್ತುಂಬಿಕೊಳ್ಳಲು ಬಯಸುತ್ತಾರೆ. ಇದೇ ಕಾರಣಕ್ಕೆ ಇಷ್ಟು ದಿನ ಶ್ರಮಿಸಿದ ಪ್ರತಿಯೊಬ್ಬರಿಗೂ ರಜೆ ನೀಡುವ ಮೂಲಕ ಶ್ರೀ ರಾಮನ ಪ್ರಾಣ ಪ್ರತಿಷ್ಠೆಗೆ ಸಾಕ್ಷಿಯಾಗಲು ಸರ್ಕಾರ ಅವಕಾಶ ಮಾಡಿಕೊಡುತ್ತದೆ.
ಜನವರಿ 22, 2024ರ ದಿನದಂದು ಎಲ್ಲಾ ಕೇಂದ್ರ ಕಚೇರಿಗಳು, ಕೇಂದ್ರ ಕೈಗಾರಿಕೆಗಳು, ಕೇಂದ್ರ ಸರ್ಕಾರಿ ಕಚೇರಿಗಳು ಮಧ್ಯಾಹ್ನ 2:30ರ ವರೆಗೆ ಮುಚ್ಚಲ್ಪಡುತ್ತದೆ.
ರೈತರಿಗೆ ಪ್ರತಿ ತಿಂಗಳು ಸಿಗಲಿದೆ 3,000 ಪಿಂಚಣಿ, ಯೋಜನೆಗೆ ನೋಂದಾಯಿಸಿಕೊಳ್ಳಿ!
ಬ್ಯಾಂಕುಗಳಿಗೂ ರಜೆ!
ಸರ್ಕಾರಿ ಕಚೇರಿ ಹಾಗೂ ಸಂಸ್ಥೆಗಳಿಗೆ ಅರ್ಧ ದಿನದ ರಜೆ ಘೋಷಣೆ ಮಾಡಿರುವಂತೆ ಬ್ಯಾಂಕುಗಳಿಗೂ ಕೂಡ ರಜೆ ಇದೆಯೇ ಎಂಬುದರ ಬಗ್ಗೆ ಪ್ರಶ್ನೆ ಮೂಡುವುದು ಸಹಜ. ಆದ್ರೆ ಬ್ಯಾಂಕ್ (Bank) ಗಳಿಗೆ ರಜೆ ಘೋಷಿಸುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈಗ ಬಂದಿರುವ ಭಾರತೀಯ ಪ್ರಕಾರ ಉತ್ತರ ಪ್ರದೇಶವನ್ನು ಹೊರತುಪಡಿಸಿ ಬೇರೆ ಯಾವುದೇ ರಾಜ್ಯದಲ್ಲಿ ಬ್ಯಾಂಕುಗಳಿಗೆ ರಜೆ ಇಲ್ಲ. ಬ್ಯಾಂಕುಗಳು ಎಂದಿನಂತೆ ಜನವರಿ 22ನೇ ತಾರೀಖಿನಂದು ಕೂಡ ಕಾರ್ಯನಿರ್ವಹಿಸಲಿದೆ.
ಇನ್ನು ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೆ ಮಣಿಪುರ (manipura) ರಾಜ್ಯದಲ್ಲಿಯೂ ಕೂಡ ಬ್ಯಾಂಕ್ ತೆರೆದಿರುವುದಿಲ್ಲ. ಮಣಿಪುರದಲ್ಲಿ ಇಮಾಯಿನು ಇರತಿಪಾದಿಂದಾಗಿ ಬ್ಯಾಂಕ್ ಮುಚ್ಚಲ್ಪಟ್ಟಿರುತ್ತದೆ. ಆದರೆ ಕರ್ನಾಟಕ ರಾಜ್ಯ ಸರ್ಕಾರ ಬ್ಯಾಂಕುಗಳಿಗೆ ರಜೆ ಘೋಷಣೆ ಮಾಡಿಲ್ಲ.
Is Ayodhya Ram Mandir inauguration day a bank holiday