ರೈತರಿಗೆ ಪ್ರತಿ ತಿಂಗಳು ಸಿಗಲಿದೆ 3,000 ಪಿಂಚಣಿ, ಯೋಜನೆಗೆ ನೋಂದಾಯಿಸಿಕೊಳ್ಳಿ!

Pension Scheme : ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು (schemes for farmers) ಸರ್ಕಾರ ಪರಿಚಯಿಸಿದೆ. ರೈತರಿಗೆ ಆರ್ಥಿಕ ಸಬಲತೆಯನ್ನು ಅವರ ವೃದ್ಧಾಪ್ಯದ (old age) ಸಮಯದಲ್ಲಿ ನೀಡಲು ಸರ್ಕಾರ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಜಾರಿಯಾಗಿರುವ ಯೋಜನೆ ಪ್ರಧಾನಮಂತ್ರಿ ಸನ್ಮಾನ ನಿಧಿ ಯೋಜನೆ (pm saman Nidhi Yojana) ಹಾಗೂ ಪ್ರಧಾನ ಮಂತ್ರಿ ಮನ್ ಧನ್ ಯೋಜನೆ.

ನಿನ್ನೆಯವರೆಗೂ ಕುಸಿದಿದ್ದ ಚಿನ್ನದ ಬೆಲೆ ಮತ್ತೆ ಏರಿಕೆ! ಇಲ್ಲಿದೆ ಚಿನ್ನ ಬೆಳ್ಳಿ ಬೆಲೆ ಡೀಟೇಲ್ಸ್

ಪ್ರಧಾನ ಮಂತ್ರಿ ಮನ್ ಧನ್ ಯೋಜನೆಯ ಬಗ್ಗೆ ವಿವರ

2018-19ನೇ ಸಾಲಿನಲ್ಲಿ ಪ್ರಧಾನಮಂತ್ರಿ ಸನ್ಮಾನ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿತ್ತು, ಈ ಯೋಜನೆಯ ಅಡಿಯಲ್ಲಿ ರೈತರಿಗೆ ಪ್ರತಿ ವರ್ಷ 6,000ಗಳನ್ನು ನೀಡಲಾಗುತ್ತಿದೆ.

ಈಗ ಪ್ರಧಾನಮಂತ್ರಿ ಮನ್ ಧನ್ ಯೋಜನೆಯನ್ನು ಕೂಡ ಆರಂಭಿಸಲಾಗಿದ್ದು, ರೈತರು ತಮ್ಮ 60ನೇ ವರ್ಷ ವಯಸ್ಸಿನಲ್ಲಿ ಸರ್ಕಾರದಿಂದ 3000 ವರೆಗೆ ಪಿಂಚಣಿ (pension ) ಪಡೆದುಕೊಳ್ಳಲು ಸಹಾಯಕವಾಗುವ ಯೋಜನೆ ಇದಾಗಿದೆ.

ಪ್ರಧಾನ ಮಂತ್ರಿ ಮನ್ ಧನ್ ಯೋಜನೆಯನ್ನು ಸಣ್ಣ ಹಾಗೂ ಅತಿ ಸಣ್ಣ ವ್ಯವಸಾಯ ಮಾಡುವ ರೈತರು ಪ್ರಯೋಜನ ಪಡೆದುಕೊಳ್ಳಲು ಆರಂಭಿಸಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಮತ್ತೊಂದು ಹೊಸ ಠೇವಣಿ ಯೋಜನೆ ಪ್ರಾರಂಭ!

Pension Scheme 18ರಿಂದ 40 ವರ್ಷ ವಯಸ್ಸಿನ ಒಳಗಿನ ರೈತರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದರ ಪ್ರೀಮಿಯಂ (premium amount) ಮೊತ್ತ 55 ರೂಪಾಯಿಗಳಿಂದ 200 ರೂಪಾಯಿಗಳವರೆಗೆ ಇರುತ್ತದೆ. ರೈತರು ಯಾವ ವಯಸ್ಸಿನಲ್ಲಿ ಮನ್ ದನ್ ಹೂಡಿಕೆ ಆರಂಭಿಸುತ್ತಾರೆ ಎಂಬುದರ ಆಧಾರದ ಮೇಲೆ ಪ್ರೀಮಿಯಂ ಹಣ ನಿರ್ಧಾರವಾಗುತ್ತಿದೆ.

ಈ ಯೋಜನೆಯ ಅಡಿಯಲ್ಲಿ ವಾರ್ಷಿಕವಾಗಿ 36,000 ಅಥವಾ ಪ್ರತಿ ತಿಂಗಳು 3000 ಗಳನ್ನು ಪಿಂಚಣಿಯಾಗಿ ಪಡೆದುಕೊಳ್ಳಬಹುದು. ರೈತರಿಗೆ 60 ವರ್ಷ ವಯಸ್ಸು ದಾಟಿದ ನಂತರ ಲಭ್ಯವಾಗುತ್ತಿದೆ.

ಆದಾಯ ತೆರಿಗೆ ಹೊಸ ರೂಲ್ಸ್, ಇಂಥವರು ಟ್ಯಾಕ್ಸ್ ಪಾವತಿ ಮಾಡುವುದೇ ಬೇಕಾಗಿಲ್ಲ!

ಪ್ರಧಾನ ಮಂತ್ರಿ ಮನ್ ಧನ್ ಯೋಜನೆ ನೋಂದಣಿ

ಕಿಸಾನ್ ಸಮ್ಮಾನ ನಿಧಿ ಯೋಜನೆಗಾಗಿ, ನೋಂದಾಯಿಸಿಕೊಂಡಿರುವ ರೈತರು ಪ್ರಧಾನ ಮಂತ್ರಿ ಮನ ಧನ ಯೋಜನೆಯ ಪ್ರಯೋಜನ ಪಡೆಯಬಹುದು. ಒಮ್ಮೆ ನೋಂದಾವಣೆ ಮಾಡಿಕೊಂಡರೆ ನಿಮ್ಮ ಪ್ರೀಮಿಯಂ ಮೊತ್ತ ನೇರವಾಗಿ ಬ್ಯಾಂಕ್ ಖಾತೆಯಿಂದ (Bank Account) ಕಡಿತಗೊಳ್ಳುವಂತೆ ಮಾಡಬಹುದು.

3,000 pension for farmers every month, register for the scheme

About Author:

Kannada News Today

Kannada News Today Providing News, information & entertainment in Kannada Language, Since 2019. This Website reacts as a…🔸ಇನ್ನಷ್ಟು ಓದಿ »

Related Stories