ನವದಂಪತಿಯನ್ನು ಕೊಂದ ಮಹಿಳೆಯ ತಂದೆ !
ನವದಂಪತಿಯನ್ನು ಕಡಿದು ಕೊಂದ ಮಹಿಳೆಯ ತಂದೆ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ
ಚೆನ್ನೈ: ಕುಟುಂಬ ಸದಸ್ಯರ ವಿರುದ್ಧ ಮದುವೆ ಮಾಡಿಕೊಂಡಿದ್ದಕ್ಕೆ ನವದಂಪತಿಯನ್ನು ಮಹಿಳೆಯ ತಂದೆ ಕಡಿದು ಕೊಂದಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ತಮಿಳುನಾಡಿನ ತುತ್ತುಕುಡಿ ಜಿಲ್ಲೆಯಲ್ಲಿ ಈ ದುಷ್ಕೃತ್ಯ ನಡೆದಿದೆ. ಮದುವೆಗೆ ಮಹಿಳೆಯ ಮನೆಯವರು ಒಪ್ಪಿರಲಿಲ್ಲ.
ಅಷ್ಟರಲ್ಲಿ ಮಾಣಿಕ್ರಾಜ್ ಮತ್ತು ರೇಷ್ಮಾ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದರು. ಮಧುರೈ ಪೊಲೀಸ್ ಠಾಣೆಗೆ ತೆರಳಿ ತಾವು ಮೇಜರ್ ಆಗಿದ್ದು, ತಮ್ಮ ಇಚ್ಛೆಯಂತೆ ಮದುವೆಯಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಪೊಲೀಸರ ಸಮ್ಮುಖದಲ್ಲಿ ಮಹಿಳೆಯ ಕುಟುಂಬ ಸದಸ್ಯರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತುಕತೆ ನಡೆಸಿದ್ದಾರೆ. ಆ ಬಳಿಕ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ಆದರೆ ಆ ಮನೆಗೆ ಹೋದ ಯುವತಿಯ ತಂದೆ ನವವಿವಾಹಿತ ಜೋಡಿಯನ್ನು ಕೊಂದಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದಂಪತಿಗಳು ಪೊಲೀಸ್ ರಕ್ಷಣೆಯನ್ನು ಕೋರಿಲ್ಲ ಆದ್ದರಿಂದ ಯಾವುದೇ ಭದ್ರತೆಯನ್ನು ಒದಗಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
newly married couple hacked to death by womans father for marrying against family
Follow us On
Google News |
Advertisement