ಯೋಗಿ ವರ್ತನೆಗೆ ಭಿನ್ನಾಭಿಪ್ರಾಯ; ರಾಜೀನಾಮೆಯ ಅಂಚಿನಲ್ಲಿರುವ ಉತ್ತರಪ್ರದೇಶದ ಇಬ್ಬರು ಸಚಿವರು
ಯುಪಿಯಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಸಚಿವರ ನಡುವೆ ಭಿನ್ನಾಭಿಪ್ರಾಯ ಮೂಡಿದೆ
ಲಕ್ನೋ: ಯುಪಿಯಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಸಚಿವರ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಕಾರಣಾಂತರಗಳಿಂದ ಯೋಗಿ ಸಂಪುಟಕ್ಕೆ ರಾಜೀನಾಮೆ ನೀಡಲು ಇಬ್ಬರು ಸಚಿವರು ಸಿದ್ಧರಾಗಿದ್ದಾರೆ ಎಂಬ ಊಹಾಪೋಹಗಳು ದಟ್ಟವಾಗಿವೆ. ಪಿಡಬ್ಲ್ಯೂಡಿ ಸಚಿವ ಜಿತಿನ್ ಪ್ರಸಾದ ಅವರು ತಮ್ಮ ಒಎಸ್ಡಿ ವರ್ಗಾವಣೆಯಿಂದ ಮನನೊಂದಿದ್ದು, ಜಲವಿದ್ಯುತ್ ಖಾತೆಯ ಸಹಾಯಕ ಸಚಿವ ದಿನೇಶ್ ಖಾತಿಕ್ ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ.
ಹಾಗೂ ಸಚಿವ ಖತೀಕ್ ತಮ್ಮ ಇಲಾಖೆಯಲ್ಲಿ ವರ್ಗಾವಣೆ ಜತೆಗೆ ಹಸ್ತಿನಾಪುರದಲ್ಲಿ ತಮ್ಮ ಬೆಂಬಲಿಗರ ವಿರುದ್ಧ ಎಫ್ ಐಆರ್ ದಾಖಲಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖತೀಕ್ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿ ಸರ್ಕಾರಕ್ಕೆ ವಾಹನವನ್ನು ಹಸ್ತಾಂತರಿಸಿ ಹಸ್ತಿನಾಪುರದ ಮನೆಗೆ ತೆರಳಿದ್ದಾರೆ ಎಂಬ ವರದಿಗಳು ಬರುತ್ತಿದ್ದಂತೆಯೇ ಖತೀಕ್ ರಾಜೀನಾಮೆಯಿಂದ ಹಿಂದೆ ಸರಿಯುತ್ತಿಲ್ಲ ಎಂಬ ವರದಿಗಳಿವೆ.
ಪಿಡಬ್ಲ್ಯೂಡಿ ಸಚಿವ ಜಿತಿನ್ ಪ್ರಸಾದ ಅವರು ತಮ್ಮ ಒಎಸ್ಡಿ ಅನಿಲ್ ಕುಮಾರ್ ಪಾಂಡೆ ಅವರ ವರ್ಗಾವಣೆಯ ಬಗ್ಗೆ ಯೋಗಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊಂದಿದ್ದಾರೆ. ಬುಧವಾರ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಬ್ಬರು ಸಚಿವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದರಿಂದ ಯೋಗಿ ಸಂಪುಟದಿಂದ ಇಬ್ಬರೂ ಕೈಬಿಡುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಇದೇ ವೇಳೆ ಜಿತಿನ್ ಪ್ರಸಾದ್ ಹಾಗೂ ದಿನೇಶ್ ಖತಿಕ್ ರಾಜೀನಾಮೆ ಸುದ್ದಿಯನ್ನು ಯೋಗಿ ಪಾಳಯ ದೃಢಪಡಿಸಿಲ್ಲ.
jitin prasada likely to meet amit shah
Follow us On
Google News |
Advertisement