India News

ಆತ್ಮಹತ್ಯೆಗೆ ಅನುಮತಿ ಕೋರಿದ ವೀರ ಯೋಧರ ಪತ್ನಿಯರು

ಜೈಪುರ: 2019ರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಪತ್ನಿಯರು ರಾಜಸ್ಥಾನದ ರಾಜ್ಯಪಾಲ ಕಲ್ರಾಮ್ ಮಿಶ್ರಾ ಅವರಿಗೆ ಆತ್ಮಹತ್ಯೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರ ತಮಗೆ ನೀಡಿದ ಭರವಸೆಗಳನ್ನು ಈಡೇರಿಸದ ಕಾರಣ ಸಾಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ದೂರಿದರು. ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವೀರ ಯೋಧರ ಪತ್ನಿಯರು ಕೆಲ ದಿನಗಳಿಂದ ಧರಣಿ ನಡೆಸುತ್ತಿದ್ದಾರೆ.

Wives Of Jawans Who Died In 2019 Pulwama Attack Have Asked For Permission To Commit Suicide

ಪತಿಯ ಹೆಸರಿನಲ್ಲಿ ಸ್ಮಾರಕಗಳನ್ನು ನಿರ್ಮಿಸಿಕೊಡುವುದಾಗಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿದ ಸರ್ಕಾರ ಈವರೆಗೆ ಅನುಷ್ಠಾನಗೊಳಿಸಿಲ್ಲ ಎಂದು ಅಳಲು ತೋಡಿಕೊಂಡರು.

ಶನಿವಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಲು ಯತ್ನಿಸಿದರು. ತಕ್ಷಣ ಪೊಲೀಸರು ಅವರನ್ನು ತಡೆದರು. ಪೊಲೀಸರು ತಳ್ಳಿದ್ದರಿಂದ ಮಂಜು ಎಂಬ ವೀರ ಯೋಧನ ಪತ್ನಿ ಗಾಯಗೊಂಡಿದ್ದಾಳೆ ಎಂದು ಮತ್ತೊಬ್ಬ ಯೋಧನ ಪತ್ನಿ ಮೀನಾ ಆರೋಪಿಸಿದ್ದಾರೆ.

Wives Of Jawans Who Died In 2019 Pulwama Attack Have Asked For Permission To Commit Suicide

Our Whatsapp Channel is Live Now 👇

Whatsapp Channel

Related Stories