Karnataka News

ಬಳ್ಳಾರಿ: ಮತ್ತೋರ್ವ ಬಾಣಂತಿ ಸಾವು, ವೈದ್ಯರ ನಿರ್ಲಕ್ಷ್ಯದ ಆರೋಪ

ಬಾಣಂತಿಯರ ಸಾವಿನ ಪ್ರಕರಣಗಳು ರಾಜ್ಯದಲ್ಲಿ ನಿಲ್ಲುವ ಲಕ್ಷಣಗಳಿಲ್ಲ. ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಮೃತಪಟ್ಟಿದ್ದು, ಕುಟುಂಬಸ್ಥರು ವೈದ್ಯರ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ.

  • ಬಾಣಂತಿ ರೇಷ್ಮಾ (20) ಸಿಜೇರಿಯನ್ ನಂತರ ಉಸಿರಾಟದ ತೊಂದರೆಯಿಂದ ಬಿಮ್ಸ್‌ನಲ್ಲಿ ನಿಧನ.
  • ಸಾವು ಶ್ವಾಸಕೋಶದ ಸಮಸ್ಯೆಯಿಂದ.. ಆಸ್ಪತ್ರೆಯ ಆಡಳಿತ ಮಂಡಳಿ
  • ಕುಟುಂಬಸ್ಥರ ಗಂಭೀರ ಆರೋಪ – ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ.

ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ವಿಜ್ಞಾನ ಕೇಂದ್ರ (ಬಿಮ್ಸ್) ನಲ್ಲಿ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಮೂಲದ ರೇಷ್ಮಾ ಗೌಸ್‌ಫೀರ್ (20) ಚಿಕಿತ್ಸೆ ಪಡೆಯುತ್ತಿದ್ದಾಗ ಮಂಗಳವಾರ ಮೃತಪಟ್ಟಿದ್ದಾರೆ. ಜನವರಿ 4ರಂದು ಸಿಜೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಆದ ಬಳಿಕ ಅವರು ಜನವರಿ 8ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

ಆದರೆ ಕೆಲವು ದಿನಗಳ ನಂತರ ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಕಾರಣ, ಜನವರಿ 14ರಂದು ಪುನಃ ಬಿಮ್ಸ್‌ಗೆ ದಾಖಲಿಸಿ ಕೃತಕ ಉಸಿರಾಟದಲ್ಲಿ ಚಿಕಿತ್ಸೆ ನೀಡಲಾಯಿತು. ವೈದ್ಯರ ಪ್ರಕಾರ ಅವರಿಗೆ ಶ್ವಾಸಕೋಶದ ತೊಂದರೆ ಕಾಣಿಸಿಕೊಂಡಿತ್ತು. ಆದರೆ ಎಲ್ಲಾ ಪ್ರಯತ್ನಗಳ ಮಧ್ಯೆ ಮಂಗಳವಾರ ರಾತ್ರಿ ಅವರು ಕೊನೆಯುಸಿರೆಳೆದರು.

ಬಳ್ಳಾರಿ: ಮತ್ತೋರ್ವ ಬಾಣಂತಿ ಸಾವು, ವೈದ್ಯರ ನಿರ್ಲಕ್ಷ್ಯದ ಆರೋಪ

ಆಸ್ಪತ್ರೆಯ ಸ್ಪಷ್ಟನೆ – ಸಿಜೇರಿಯನ್ ಕಾರಣವಲ್ಲ

ಬಿಮ್ಸ್ ನಿರ್ದೇಶಕ ಡಾ. ಗಂಗಾಧರ ಗೌಡ ಈ ಕುರಿತು ಪ್ರತಿಕ್ರಿಯಿಸುತ್ತಾ, “ಈ ಸಾವಿಗೆ ಹೆರಿಗೆ ಅಥವಾ ಸಿಜೇರಿಯನ್ ಶಸ್ತ್ರಚಿಕಿತ್ಸೆಯೊಂದಿಗೆ ಯಾವುದೇ ಸಂಬಂಧವಿಲ್ಲ” ಎಂದು ತಿಳಿಸಿದ್ದಾರೆ. “ಅವರಿಗೆ ಉಸಿರಾಟದ ತೊಂದರೆ ಹೆಚ್ಚಾಗಿತ್ತು, ನಾವು ಸಾಧ್ಯವಾದ ಎಲ್ಲಾ ಚಿಕಿತ್ಸೆ ನೀಡಿದ್ದೇವೆ” ಎಂದೂ ಅವರು ಹೇಳಿದರು.

ಕುಟುಂಬಸ್ಥರ ಆರೋಪ – ವೈದ್ಯರ ನಿರ್ಲಕ್ಷ್ಯವೇ ಕಾರಣ

ರೇಷ್ಮಾ ಕುಟುಂಬದವರು ಆಸ್ಪತ್ರೆಯ ವಿವರಣೆಯನ್ನು ತಳ್ಳಿಹಾಕಿದ್ದು, “ಇದು ಸುಳ್ಳು, ನಮ್ಮ ಮಗುವಿಗೆ ಸರಿಯಾದ ಚಿಕಿತ್ಸೆ ನೀಡಿಲ್ಲ. ವೈದ್ಯರ ನಿರ್ಲಕ್ಷ್ಯದಿಂದಲೇ ಸಾವಾಗಿದೆ” ಎಂದು ಕಿಡಿಕಾರಿದ್ದಾರೆ.

ಈ ಘಟನೆಗೆ ಸಂಭಂದಿಸಿದಂತೆ ಭಾನುವಾರ (ಫೆ. 4) ಮತ್ತೊಬ್ಬ ಬಾಣಂತಿ ಮಹಾದೇವಿ ಕೂಡ ಬಿಮ್ಸ್‌ನಲ್ಲಿ ಮೃತಪಟ್ಟಿದ್ದು, ಆಕೆಯ ಕುಟುಂಬವೂ ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಗಂಭೀರ ಆರೋಪ ಮಾಡಿತ್ತು.

ಆಸ್ಪತ್ರೆಯಲ್ಲಿ ನಿರಂತರ ಬಾಣಂತಿ ಸಾವುಗಳು ದಾಖಲಾಗುತ್ತಿದ್ದು, ವೈದ್ಯಕೀಯ ಸೇವೆಯ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳು ಏಳುತ್ತಿವೆ.

Another Maternal Death in Ballari Sparks Negligence Allegations

Read more news on our Partner Site, across various topics in English

English Summary

Our Whatsapp Channel is Live Now 👇

Whatsapp Channel

Related Stories