2 ಎಕರೆಗಿಂತ ಕಡಿಮೆ ಭೂಮಿ ಇರುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ! 4 ಲಕ್ಷದ ಹೊಸ ಯೋಜನೆಗೆ ಅರ್ಜಿ ಸಲ್ಲಿಸಿ
ಈ ವರ್ಷ ನಮ್ಮ ದೇಶದಲ್ಲಿ ಮಳೆ ಕೈಕೊಟ್ಟಿದೆ. ಮಳೆ ಇಲ್ಲದೆ ಕೃಷಿಕರಿಗೆ (Farmers) ಹೆಚ್ಚು ತೊಂದರೆ ಅನುಭವಿಸುವ ಹಾಗೆ ಆಗಿದೆ ಎಂದು ಹೇಳಬಹುದು. ಸರಿಯಾಗಿ ಮಳೆ ಬರದೆ ಬೆಳೆಯ ಹಾನಿ ಉಂಟಾಗುತ್ತಿದೆ.
ನೀರಿನ ಪೂರೈಕೆ ಮಾಡಲು ರೈತರಿಗೆ ತೊಂದರೆ ಆಗುತ್ತಿದೆ. ಈ ರೀತಿ ಇರುವ ಕಾರಣ ರೈತರಿಗೆ ಅದರಲ್ಲೂ ಕಡಿಮೆ ಭೂಮಿ (Land) ಹೊಂದಿರುವವರಿಗೆ ಸರ್ಕಾರ ಸಹಾಯ ಮಾಡಲು ಮುಂದಾಗಿದೆ.
ಉಚಿತವಾಗಿ ಸಿಗಲಿದೆ ಲ್ಯಾಪ್ ಟಾಪ್! ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್
ಗಂಗಾ ಕಲ್ಯಾಣ ಯೋಜನೆಯ (Ganga Kalyana Yojane) ಮೂಲಕ ಬೋರ್ ವೆಲ್ ತೆರೆಯಲು 4 ಲಕ್ಷ ರೂಪಾಯಿಯವರೆಗು ಹಣಸಹಾಯ ಮಾಡಲಾಗುತ್ತದೆ. ಈ ಯೋಜನೆಗೆ ಅರ್ಜಿ ಆಹ್ವಾನ ಶುರುವಾಗಿದೆ.
ಗಂಗಾ ಕಲ್ಯಾಣ ಯೋಜನೆಯ ಮೂಲಕ ಕೃಷಿ ನೆಲದಲ್ಲಿ (Agricultural Land) ಬೋರ್ವೆಲ್ ಕೊರೆಸುವುದಕ್ಕೆ ಸರ್ಕಾರ ಈ ಸ್ಕೀಮ್ ಅನ್ನು ಹೊರತಂದಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ರೈತರಿಗೆ ಸುಮಾರು 4 ಲಕ್ಷದವರೆಗು ಧನಸಹಾಯ ಮಾಡುತ್ತದೆ.
ಇಂತಹವರ ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಅಕೌಂಟ್ಗೆ ಬಂದರೂ ಕೈಗೆ ಸಿಗೋಲ್ಲ! ಬ್ಯಾಂಕ್ ಹೊಸ ನಿರ್ಧಾರ
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಹಾಸನ, ಹಾಗೂ ಶಿವಮೊಗ್ಗ ಈ ಎಲ್ಲಾ ಕಡೆಗಳಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಆಹ್ವಾನ ನೀಡಲಾಗಿದೆ. ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು ಏನೇನು ಎಂದು ತಿಳಿಯೋಣ..
*ಅರ್ಜಿ ಹಾಕುವವರು ಕರ್ನಾಟಕದ ವ್ಯಕ್ತಿಯೇ ಆಗಿರಬೇಕು..
*ಅವರು ಹಳ್ಳಿಯವರೇ ಆಗಿದ್ದು, ಕುಟುಂಬದ ವಾರ್ಷಿಕ ಆದಾಯ 68,000 ಕ್ಕಿಂತ ಕಡಿಮೆ ಇರಬೇಕು.
*ಅರ್ಜಿ ಹಾಕುವವರ ವಯಸ್ಸು 18 ರಿಂದ 55 ವರ್ಷಗಳ ಒಳಗೆ ಇರಬೇಕು.
*ಸೇವಾದಿಂಧು ಪೋರ್ಟಲ್ ಅಥವಾ ಸೇವಾಸಿಂಧು ಕಚೇರಿಯ ಮೂಲಕ ಅರ್ಜಿ ಸಲ್ಲಿಸಬಹುದು.. ಗ್ರಾಮ ಒನ್ ಸೆಂಟರ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು.
*ಇದು ಮಾತ್ರವಲ್ಲದೆ ವೈಯಕ್ತಿಕವಾಗಿ ಕೊಳವೆ ಬಾವಿ ಅಥವಾ ನೀರಾವರಿ ಇಲಾಖೆ ಯೋಜನೆಯ ಅಡಿಯಲ್ಲಿ ಕರಾವಳಿ ಮತ್ತು ಮಲೆನಾಡು ಊರುಗಳಲ್ಲಿ ತೆರೆದ ಕೊಳವೆ ಬಾವಿ ಸೌಲಭ್ಯ ಕೂಡ ನೀಡಲಾಗುತ್ತಿದೆ. ಈ ಸೌಲಭ್ಯವನ್ನು ಕೂಡ ರೈತರು ಬಳಸಿಕೊಳ್ಳಬಹುದು..
Good news from the government for those who have less than 2 acres of agricultural land