Karnataka NewsBangalore News

ಕೃಷಿ ಜಮೀನಿಗೆ ಹೋಗಲು ದಾರಿ ಇಲ್ಲದೆ ಇರುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ! ಹೊಸ ರೂಲ್ಸ್

ನಾವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬೇಕು ಅಂದರೆ ರಸ್ತೆ ಎನ್ನುವುದು ಬಹಳ ಮುಖ್ಯ. ರಸ್ತೆ ಇಲ್ದೆ ಇದ್ರೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಸಾಧ್ಯವಿಲ್ಲ.

ಅಂತಹ ಸಂದರ್ಭದಲ್ಲಿ ರೈತರು ತಮ್ಮ ಜಮೀನಿಗೆ (Agriculture Land) ಹೋಗಲು ಕಾಲುದಾರಿ ಅಥವಾ ಬಂಡಿದಾರಿ ಹೊಂದಿರುವುದು ಬಹಳ ಅಗತ್ಯವಾಗಿದೆ. ಆದರೆ ಭೂಸ್ವಾಧೀನ ಕಾಯ್ದೆ ಬಂದ ನಂತರ ಕಾಲು ದಾರಿ ಅಥವಾ ಬಂಡಿದಾರಿ ಬಹಳ ವರ್ಷಗಳಿಂದ ಇದ್ದರೆ ಅದನ್ನು ಮುಚ್ಚಿ ತಮ್ಮ ಸ್ವಂತ ಜಮೀನು ವಶಡಿಸಿಕೊಂಡಿರುವವರು ಸಾಕಷ್ಟು ಜನ ಇದ್ದಾರೆ.

Wrong name on your land Documents, Change easily like this

ಇದರಿಂದಾಗಿ ತಮ್ಮ ಜಮೀನಿಗೆ ಹೋಗಲು ಸಾಧ್ಯವಾಗದೆ ರೈತರು (Farmer) ಕಷ್ಟ ಪಡುವಂತೆ ಆಗಿದೆ. ಆದರೆ ಈಗ ಸಾರ್ವಜನಿಕ ರಸ್ತೆ ರದ್ದಾಗುವುದಿಲ್ಲ ಎಂದು ಹೈಕೋರ್ಟ್ ತೀರ್ಮಾನ ನೀಡಿದೆ.

ಅನ್ನಭಾಗ್ಯ ಯೋಜನೆ ಹಣ ಖಾತೆಗೆ ಜಮಾ ಆಗಿದೆ, ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

ಹೈಕೋರ್ಟ್ ಕೇಸ್ ಅರ್ಜಿ!

ತುಮಕೂರಿನ MPMC ಗಾಗಿ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ನಂತರದ ದಿನಗಳಲ್ಲಿ ಅಲ್ಲಿಯ ಕಾಲುದಾರಿಯನ್ನ ಮುಚ್ಚಲಾಗಿತ್ತು. 2019 ಫೆಬ್ರುವರಿ 5ರಂದು, APMCಗೆ ನೋಟಿಸ್ ಕೊಡಲಾಗಿತ್ತು. ಇಡೀ ಆಸ್ತಿ ಎ ಎಂ ಪಿ ಸಿ ಪಾಲಾಗಿದ್ದು ಯಾವುದೇ ಕಾಲು ದಾರಿ (Road) ಅಥವಾ ಬಂಡಿ ದಾರಿಗೆ ಅವಕಾಶ ಇಲ್ಲ ಎಂದು ಎಎಂಪಿಸಿ ತಿಳಿಸಿತ್ತು. ಹೀಗಾಗಿ ಅದರ ವಿರುದ್ಧ ನೋಟಿಸ್ ಜಾರಿಗೊಳಿಸಲಾಗಿತ್ತು.

ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಟ್ವಿಸ್ಟ್! ಇಂತವರಿಗೆ ಇನ್ಮುಂದೆ ಹಣ ಬರೋಲ್ಲ

agriculture landಹೈಕೋರ್ಟ್ ಕೊಟ್ಟ ತೀರ್ಪು ಏನು!

ಭೂಕಂದಾಯ ಇಲಾಖೆ ಕಾಯ್ದೆ ಸೆಕ್ಷನ್ 67ರ ಅಡಿಯಲ್ಲಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಇರುವ ರಸ್ತೆಗಳು, ಓಣಿಗಳು, ಬೀದಿಗಳು ಸರ್ಕಾರಕ್ಕೆ ಸೇರಿವೆ ಅದನ್ನು ಯಾರೂ ಕೂಡ ತನ್ನ ಸ್ವಂತ ಆಸ್ತಿ ಎಂದು ಪರಿಗಣಿಸುವಂತಿಲ್ಲ. ಅದು ಸಾರ್ವಜನಿಕರಿಗೆ ಸೇರಬೇಕಾಗಿದ್ದು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.

ತುಮಕೂರು ತಾಲೂಕಿನ ಗುಬ್ಬಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅರ್ಜಿ ವಿಚಾರಣೆ ನಡೆಸಿದ ಬಳಿಕ ನ್ಯಾಯಮೂರ್ತಿ ಗೋವಿಂದರಾಜು ಏಕ ಸದಸ್ಯ ಪೀಠ ತೀರ್ಪನ್ನು ನೀಡಿದೆ.

ಹೊಸ ರೇಷನ್ ಕಾರ್ಡ್ ಬಗ್ಗೆ ಅಪ್ಡೇಟ್; ಮೇ ತಿಂಗಳಿನ ಹೊಸ ಲಿಸ್ಟ್ ಬಿಡುಗಡೆ ಆಗಿದೆ

ಬಿ – ಖರಾಬು ಭೂಮಿ ಯಾರಿಗ್ ಸೇರಿದ್ದು!

ಬಿ – ಖರಾಬು ವ್ಯಾಪ್ತಿಯಲ್ಲಿ ಬರುವ ಆಸ್ತಿಗು ಪಬ್ಲಿಕ್ ರೈಟ್ಸ್ ರದ್ದಾಗುವುದಿಲ್ಲ ಎಂದು ತಿಳಿಸಲಾಗಿದೆ. ಹಾಗಾಗಿ ಯಾರೇ ಇದು ತನ್ನ ಪ್ರೈವೇಟ್ ಪ್ರಾಪರ್ಟಿ ಎಂದು ಕಾಲುದಾರಿ ಅಥವಾ ಬಂಡಿದಾರಿಯನ್ನು ಮುಚ್ಚುವಂತಿಲ್ಲ. ಹೀಗಾಗಿ ರೈತರು ಇನ್ನು ಮುಂದೆ ತಮ್ಮ ಜಮೀನಿಗೆ ಹೋಗಲು ಕಾಲುದಾರಿ ಇಲ್ಲ ಎಂದು ಯೋಚನೆ ಮಾಡುವಂತಿಲ್ಲ. ಕಾನೂನು ಇದಕ್ಕೆ ಪರಿಹಾರ ನೀಡಿದ್ದು ಒಂದು ವೇಳೆ ಈಗಾಗಲೇ ಇರುವ ದಾರಿಯನ್ನು ಮುಚ್ಚಲು ಪ್ರಯತ್ನಿಸಿದರೆ ಅಂತರ ವಿರುದ್ಧ ದೂರು ನೀಡಬಹುದು.

Good news from the government for way to go to agricultural land

Our Whatsapp Channel is Live Now 👇

Whatsapp Channel

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories