ರಾಜ್ಯ ಸರ್ಕಾರದ ಕಡೆಯಿಂದ ಇಂತಹ ಜನರಿಗೆ ಸಿಗಲಿದೆ ಉಚಿತ ಜಮೀನು! ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ನೋಡಿ
ನಮ್ಮ ದೇಶದ ಬೆನ್ನೆಲಬಾಗಿರುವ ಕೃಷಿ ಚಟುವಟಿಕೆ (Agriculture) ದಿನೇ ದಿನೇ ಮಾಯವಾಗುತ್ತಿದೆ. ಗ್ರಾವೀಣ ಪ್ರದೇಶದ ಜನರ ಆದಾಯದ ಮೂಲಕ ಕೃಷಿ ಪದ್ಧತಿ ಆಗಿತ್ತು, ಆದರೆ ಇದೀಗ ದಿನೇ ದಿನೇ ಎಲ್ಲವೂ ಬದಲಾಗುತ್ತಿದೆ. ನಗರಗಳಲ್ಲಿ ಜನರು ಎಸಿ ರೂಮ್ ಗಳಲ್ಲಿ ಕುಳಿತು ಉತ್ತಮ ಆದಾಯ ಮಾಡುವುದರ ಜೊತೆಗೆ ಬಣ್ಣದ ಬದುಕನ್ನು ಕಾಣುತ್ತಿದ್ದಾರೆ ಎನ್ನುವುದು ಗ್ರಾವೀಣ ಪ್ರದೇಶ ಜನರ ಅಭಿಪ್ರಾಯ.
ಇನ್ನು ಪ್ಯಾಟೆ ಮಂದಿಯ ಜೀವನ ಶೈಲಿ ಕಂಡು ಹಳ್ಳಿ ಜನರು ಸಹ ತಾವು ಇದೆ ರೀತಿ ಜೀವನ ನಡೆಸಬೇಕು ಎಂದು ಪಟ್ಟಣಗಳಿಗೆ ವರ್ಗಹಿಸುತ್ತಿದ್ದಾರೆ. ಇನ್ನು ಇದೆ ಕಾರಣಕ್ಕೆ ವ್ಯವಸಾಯವನ್ನು ಬಿಟ್ಟು ಐಟಿ ಕಂಪನಿಗಳಿಗೆ (IT Company) ಸೇರಿಕೊಳ್ಳಲು ಮುಂದಾಗಿದ್ದಾರೆ.
ಇನ್ನು ಇತ್ತೀಚೆಗೆ ಗ್ರಾವೀಣ ಪ್ರದೇಶಗಳಿಂದ ಪಟ್ಟಣದ ಕಡೆಗೆ ಜನರು ವಲಸೆ ಬರಲು ಶುರು ಮಾಡಿದ್ದಾರೆ. ಇನ್ನು ಈ ವಲಸೆ ಪದ್ಧತಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಾಗೆ ವ್ಯವಸಾಯ ಪದ್ಧತಿ ನಮ್ಮ ಮುಂದಿನ ಪೀಳಿಗೆಗೂ ಮುಂದುವರೆಸಬೇಕು ಎನ್ನುವ ನಿಟ್ಟಿನಲ್ಲಿ ಇದೀಗ ಸರ್ಕಾರವು ಒಂದು ಮಹತ್ವದ ನಿರ್ಧಾರ ತೆಗೆದುಕೊಂಡು ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
ಬಾಡಿಗೆ ಕಟ್ಟಿ ಬೇಸತ್ತು ಹೋದ ಜನರಿಗೆ ಸರ್ಕಾರದ ಕಡೆಯಿಂದ ಹೊಸ ಭಾಗ್ಯ! ಅಷ್ಟಕ್ಕೂ ಏನಿದು ಹೊಸ ಯೋಜನೆ
ಹೌದು, ಇನ್ನು ಈ ಕುರಿತು ಸ್ವತಃ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಎಚ. ಸಿ. ಮಹದೇವಪ್ಪ ಅವರು ಮಾಹಿತಿ ಹಂಚಿಕೊಂಡಿದ್ದು, ಸದ್ಯ ಈ ವಿಷಯ ಕೇಳಿದ ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ ಏನಿದು ಸುದ್ದಿ, ಅಷ್ಟಕ್ಕೂ ಅಧಿಕಾರಿಗಳು ಹೇಳಿದ್ದೇನು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಬನ್ನಿ..
ರಾಜ್ಯ ಸರ್ಕಾರವೂ ಸರ್ಕಾರಿ ಜಮೀನುಗಳನ್ನು (Government Land) ಗುರುತಿಸಿ ಅದನ್ನು ಇದೀಗ ದಲಿತರಿಗೆ, ಹಿಂದುಳಿದ ವರ್ಗದ ಜನರಿಗೆ ಹಾಗೆ ಅಲ್ಪಸಂಖ್ಯಾತರಿಗೆ ನೀಡಲು ನಿರ್ಧರಿಸಿದೆ. ಹೌದು, ಇದೀಗ ಸರ್ಕಾರವು ಸರ್ಕಾರಿ ಕೃಷಿ ವಿನೂತನ ಯೋಜನೆಯ ಅಡಿಯಲ್ಲಿ ಕೆಲವರಿಗೆ ಸರ್ಕಾರಿ ಜಮೀನನ್ನು ನೀಡಲು ಮುಂದಾಗಿದೆ.
ಇನ್ನು ಈ ಯೋಜನೆಯನ್ನು ಜಾರಿಗೆ ತರುವ ಮೊದಲು ಸರಕಾರಿ ರಂಗಗಳ ಗುಂಪು ರಚನೆ ಮಾಡಲಾಗುವುದು, ನಂತರ ಒಂದು ಕುಟುಂಬಕ್ಕೆ ಏಷ್ಟು ಎಕ್ಕರೆ ಜಮೀನು ನೀಡಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಇನ್ನು ಇದೀಗ ಬಂದಿರುವ ಮಾಹಿತಿಯ ಪ್ರಕಾರ ಪ್ರತಿ 5 ಜನ ಇರುವ ಕುಟುಂಬಕ್ಕೆ 1.67 ಎಕರೆ ಜಮೀನನ್ನು ನೀಡಲು ಸರ್ಕಾರ ನಿರ್ಧರಿಸದೆ ಎನ್ನಲಾಗುತ್ತಿದೆ.
ಇನ್ನು ಸರಕಾರದ ಜಮೀನು ಇಲ್ಲದಂತಹ ಸಂದರ್ಭದಲ್ಲಿ 50 ಎಕರೆ ಜಮೀನನ್ನು (Agriculture Land) ಖರೀದಿ ಮಾಡಿ ಅದನ್ನು ಹಿಂದುಳಿದ ವರ್ಗದ ಜನರಿಗೆ ನೀಡಲು ಸರ್ಕಾರವು ಮುಂದಾಗಿದೆ. ಸರಕಾರವೇ ಜನರಿಗೆ ಕೃಷಿ ಮಾಡಲು ಜಮೀನನ್ನು ನೀಡುತ್ತಿದ್ದು, ಈ ಮೂಲಕ ಕೃಷಿ ಚಟುವಟಿಕೆ ಅಭಿವೃದ್ದಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಲಾಗುತ್ತಿದೆ. ಇನ್ನು ರಾಜ್ಯ ಸರಕಾರದ ಈ ಹೊಸ ಯೋಜನೆಯ ಕುರಿತು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
Such people will get free land from the state government