ಬಳೆ ತಟ್ಕೋ ಸೀರೆ ಉಟ್ಕೋ ಎಂದು ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರಿಗೆ ಬೈದದ್ದು ಯಾರು? ಕಾರಣ ಏನು ಗೊತ್ತಾ?
ಕನ್ನಡ ಚಿತ್ರರಂಗದ ಚಿತ್ರ ಬ್ರಹ್ಮ ಎಂಬ ಬಿರುದನ್ನು ಪಡೆದು ತಮ್ಮ ವೈಶಿಷ್ಟ್ಯ ನಿರ್ದೇಶನದಿಂದಾಗಿ ಕನ್ನಡಕ್ಕೆ ತಮ್ಮದೇ ಆದ ವಿಶೇಷ ಕೊಡುಗೆಯನ್ನು ನೀಡಿದಂತಹ ಪುಟ್ಟಣ್ಣ ಟೀಕೆಗಳಿಗೆ ಗುರಿಯಾಗಿದ್ದರು ಎಂದರೆ ನೀವು ನಂಬಲೇಬೇಕು
ಸ್ನೇಹಿತರೆ, ಪುಟ್ಟಣ್ಣ ಕಣಗಾಲ್ (Kannada Director Puttanna Kanagal) ಅವರ ಹೆಸರು ಕೇಳುತ್ತಿದ್ದ ಹಾಗೆ ಅವರ ಅದ್ಭುತ ನಿರ್ದೇಶನದಲ್ಲಿ ಮೂಡಿಬಂದಂತಹ ಸಾಲು ಸಾಲು ಸಿನಿಮಾಗಳು ನಮ್ಮೆಲ್ಲರ ನೆನಪಿಗೆ ಬಂದುಬಿಡುತ್ತದೆ.
ಕನ್ನಡ ಚಿತ್ರರಂಗದ ಚಿತ್ರ ಬ್ರಹ್ಮ ಎಂಬ ಬಿರುದನ್ನು ಪಡೆದು ತಮ್ಮ ವೈಶಿಷ್ಟ್ಯ ನಿರ್ದೇಶನದಿಂದಾಗಿ ಕನ್ನಡಕ್ಕೆ (Kannada Cinema) ತಮ್ಮದೇ ಆದ ವಿಶೇಷ ಕೊಡುಗೆಯನ್ನು ನೀಡಿದಂತಹ ಪುಟ್ಟಣ್ಣ ಟೀಕೆಗಳಿಗೆ ಗುರಿಯಾಗಿದ್ದರು ಎಂದರೆ ನೀವು ನಂಬಲೇಬೇಕು. ಬಳೆ ತೋಟ್ಕೋ ಸೀರೆ ಉಟ್ಕೋ ಎಂದು ಬೈದಿದ್ರಂತೆ.
ಪುಟ್ಟಣ್ಣ ಕಣಗಾಲ್ ಅವರ ಯಾವ ತಪ್ಪಿಗೆ ಈ ರೀತಿ ಬೈದರು? ಯಾವ ನಟನ ಸಲುವಾಗಿ ಪುಟ್ಟಣ್ಣ ಅವಮಾನಕ್ಕೇ ಒಳಗಾಗಬೇಕಾದ ಪ್ರಸಂಗ ಎದುರಾಯಿತು ಎಂಬ ಎಲ್ಲಾ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೇ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಆಗಿನ ಕನ್ನಡ ಸಿನಿಮಾ ರಂಗದ Top ನಲ್ಲಿ ಇದ್ದಂತಹ ಮೂವರು ಸೆಲೆಬ್ರೆಟಿಗಳೆಂದರೆ ಡಾಕ್ಟರ್ ರಾಜಕುಮಾರ್ ಪುಟ್ಟಣ್ಣ ಕಣಗಾಲ್ ಹಾಗೂ ಆರತಿ… ಈ ಮೂವರನ್ನು ಒಂದುಗೂಡಿಸುವ ಸಲುವಾಗಿ ಭಲೆ ಚತುರ ಸಿನಿಮಾದ ನೂರರ ಸಂಭ್ರಮದ ದಿನ ಅತಿಥಿಗಳಂತೆ ಪುಟ್ಟಣ್ಣ ರಾಜಕುಮಾರ್ ಹಾಗೂ ಆರತಿ ಅವರನ್ನು ಆಹ್ವಾನಿಸಲಾಗಿತ್ತು.
ಅದರಂತೆ ಕಾರ್ಯಕ್ರಮಕ್ಕೆ ಬಂದು ತಮ್ಮ ಸಿನಿ ಬದುಕಿನ ಕುರಿತು ಮಾತನಾಡಿದ ಪುಟ್ಟಣ್ಣ ಜನ ಎಲ್ಲಿ ಹೋದರು ನನ್ನನ್ನು ಡಾಕ್ಟರ್ ರಾಜಕುಮಾರ್ ಅವರೊಡನೆ ಸಿನಿಮಾ ಮಾಡಲ್ವಾ? ಅಣ್ಣವರೊಂದಿಗೆ ಯಾಕೆ ಚಿತ್ರ ಮಾಡ್ತಿಲ್ಲ? ಎಂಬ ಪ್ರಶ್ನೆಗಳನ್ನೇ ಕೇಳ್ತಾರೆ. ಅಣ್ಣಾವ್ರು ಯಾವ ಸಿನಿಮಾಗಳಲ್ಲಿ ಅಭಿನಯಿಸಿದರು ಹಿಟ್ ಆಗುತ್ತದೆ ಆದರೆ ನಾನು ಓರ್ವ ಬಡ ನಿರ್ದೇಶಕ ನನ್ನ ಹೊಟ್ಟೆ ತುಂಬಿಸಿಕೊಳ್ಳಬೇಕಲ್ವೇ?
ಮಹಿಳೆಯರ ಒಳ ಉಡುಪುಗಳ ಬಗ್ಗೆ ಟ್ವೀಟ್ ಮಾಡಿ ಪೇಚಿಗೆ ಸಿಲುಕಿಕೊಂಡ ಅಮಿತಾ ಬಚ್ಚನ್!
ಇದನ್ನು ಜನ ಅರ್ಥಮಾಡಿಕೊಳ್ಳುವುದಿಲ್ಲ ಹೀಗೊಂದು ದಿನ ಅಪೂರ್ವ ಸಂಗಮ ಸಿನಿಮಾ ನೋಡಲು ನಾನು ಥಿಯೇಟರ್ಗೆ ಹೋದಾಗ ಅಲ್ಲಿ ಅಣ್ಣಾವ್ರ ಅಭಿಮಾನಿಗಳು ನನ್ನ ಮೇಲೆ ಎರಗಿದರು.
ಡಾಕ್ಟರ್ ರಾಜಕುಮಾರ್ ಅವರನ್ನು ಹಾಕಿಕೊಂಡು ನೀವು ಯಾಕೆ ಸಿನಿಮಾ ಮಾಡಲ್ಲ? ಅಣ್ಣಾವ್ರನ್ನೇ ದ್ವೇಷಿಸುತ್ತೀಯಾ? ಅವರೊಂದಿಗೆ ಸಿನಿಮಾ ಮಾಡಲ್ಲ ಅಂದ್ರೆ ನೀನು ಚಿತ್ರರಂಗದಲ್ಲೇ ಇರಬೇಡ.
ಬಳೆ ತೊಟ್ಕೋ ಸೀರೆ ಉಟ್ಕೋ ಎಂದೆಲ್ಲಾ ಪುಟ್ಟಣ್ಣ ಕಣಗಾಲ್ ಅವರಿಗೆ ಅಣ್ಣಾವ್ರ ಅಭಿಮಾನಿಗಳು ಎಂದು ಹೇಳಿಕೊಳ್ಳುವ ಜನರು ತುಂಬಿದಂತಹ ಥಿಯೇಟರ್ನಲ್ಲಿ ಅವಮಾನ ಮಾಡಿದರಂತೆ. ಇದನ್ನು ಪುಟ್ಟಣ್ಣ ಅಣ್ಣಾವ್ರು ಹಾಗೂ ಆರತಿಯವರು ಇದ್ದಂತಹ ವೇದಿಕೆಯಲ್ಲಿಯೇ ಹೇಳುತ್ತಾ ಭಾವುಕರಾದರು.
ಬಾಹುಬಲಿ ನಟ ಪ್ರಭಾಸ್ ಫೇಸ್ಬುಕ್ ಪೇಜ್ ಹ್ಯಾಕ್! ಮಿಲಿಯನ್ ಗಟ್ಟಲೆ ಅಭಿಮಾನಿಗಳಿದ್ದ ಪೇಜ್ ಏನಾಯ್ತು ಗೊತ್ತಾ?
Interesting Facts About Kannada Director Puttanna Kanagal Real Incident
Follow us On
Google News |