ಗೃಹಲಕ್ಷ್ಮಿ ಹಣದ ನಿರೀಕ್ಷೆಯ ಕರ್ನಾಟಕ ಗೃಹಲಕ್ಷ್ಮಿಯರಿಗೆ ಇಲ್ಲಿದೆ ಬಿಗ್ ಅಪ್ಡೇಟ್!
ಮೂರು ತಿಂಗಳ ಹಣ ಜಮೆಯಾಗದ ಸ್ಥಿತಿಯಿಂದ ಗೃಹಲಕ್ಷ್ಮಿಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ಗಳಿಗೆ ಅಲೆದಾಡುತ್ತಿರುವ ಮಹಿಳೆಯರು ಸರ್ಕಾರದ ವಿರುದ್ಧ ಪ್ರಶ್ನೆ ಎತ್ತಿದ್ದಾರೆ.
Publisher: Kannada News Today (Digital Media)
- ಮೂರು ತಿಂಗಳಿಂದ ಹಣ ಬಂದಿಲ್ಲ ಎಂಬ ಆಕ್ರೋಶ
- ಸರ್ಕಾರದ ಪ್ರತಿಷ್ಠಿತ ಗ್ಯಾರಂಟಿ ಯೋಜನೆ ವಿಳಂಬ
- ವಾರಕ್ಕೆ ಎರಡು ಬಾರಿ ಬ್ಯಾಂಕ್ಗೆ ಅಲೆದಾಡುವ ಗೃಹಲಕ್ಷ್ಮಿಯರು
ಬೆಂಗಳೂರು (Bengaluru): ಮೂರು ತಿಂಗಳಿಂದ ಗೃಹಲಕ್ಷ್ಮಿ ಹಣ (Gruha Lakshmi) ಬಾರದ ಕಾರಣದಿಂದಾಗಿ ಕರ್ನಾಟಕದ ಹಲವಾರು ಗೃಹಲಕ್ಷ್ಮಿಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನೇಕರು ದಿನವೂ ಬ್ಯಾಂಕ್ಗೆ ಹೋಗಿ ಬಂದರೂ ಹಣ ಜಮೆಯಾಗಿಲ್ಲ ಎಂಬ ಉತ್ತರವೇ ದೊರೆಯುತ್ತಿದೆ. ಈ ಪರಿಸ್ಥಿತಿಯು ಮಹಿಳೆಯರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಸಾರಿ “ಅದಷ್ಟು ಬೇಗನೆ ಹಣ ಹಾಕ್ತೀವಿ” ಎನ್ನುತ್ತಿದ್ದರೂ, ನಿಜವಾಗಿ ಹಣ ಯಾವಾಗ ಖಾತೆಗೆ ಜಮೆಯಾಗಲಿದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ.
ಇದನ್ನೂ ಓದಿ: ಬೆಂಗಳೂರು ಸೆಕೆಂಡ್ ಏರ್ಪೋರ್ಟ್ ಎಫೆಕ್ಟ್! ಈ ಜಾಗದ ಭೂಮಿಗೆ ಬಂಗಾರದ ಬೆಲೆ
ಕೆಲವು ಫಲಾನುಭವಿಗಳ ಅಸಹನೆ ಕೇಳಿದರೆ, “ಹಣ ಬಂದಿದೆಯೋ ಏನೋ ಅಂತ ಸೋಮವಾರ, ಬುಧವಾರ, ಶುಕ್ರವಾರ ಹೀಗೆ ವಾರಕ್ಕೆ ಮೂರು ದಿನಗಳಲ್ಲಿ ಬ್ಯಾಂಕ್ ಗೆ ಹೋಗ್ತೀವಿ” ಎನ್ನುತ್ತಾರೆ.
ಈ ಗೃಹಲಕ್ಷ್ಮಿ ಯೋಜನೆ (Gruha lakshmi Guarantee Scheme)ನ್ನು 2023 ಜುಲೈನಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದು, ರಾಜ್ಯದ ಸುಮಾರು 1.25 ಕೋಟಿ ಗೃಹಿಣಿಯರು ಇದರಡಿ ಫಲಾನುಭವಿಗಳಾಗಿದ್ದಾರೆ. ಬಜೆಟ್ನಲ್ಲಿ ಮಾತ್ರ 28,608 ಕೋಟಿ ರೂಪಾಯಿ ಮೀಸಲಿರಿಸಲಾಯಿತು, ಆದರೆ ವಾಸ್ತವಿಕ ಜಮಾ ಆಗುವ ಬಗ್ಗೆ ಯಾವುದೇ ಸರಿಯಾದ ಮಾಹಿತಿ ಮಾತ್ರ ಸರಕಾರದಿಂದ ಸದ್ಯಾ ಸಿಕ್ಕಿಲ್ಲ.
ಇದನ್ನೂ ಓದಿ: ಬೆಂಗಳೂರು ಪ್ರಾಪರ್ಟಿ ಬೆಲೆ ಭರ್ಜರಿ ಏರಿಕೆ! ಈ ಜಾಗದಲ್ಲಿ ನಿಮ್ಮ ಸೈಟ್, ಮನೆ ಇದ್ಯಾ
ಹಣದ ನಿರೀಕ್ಷೆಯಲ್ಲಿ ಇರುವ ಕೆಲವು ಮಹಿಳೆಯರು ಹೇಳುವಂತೆ, ಈ ಹಣವನ್ನು ಮಕ್ಕಳು ಶಾಲೆ ಫೀ (school fees) ಗೆ, ವೃದ್ದರ ಮಾತ್ರೆ ಖರ್ಚಿಗೆ, ಅಥವಾ ಮನೆಯ ದಿನಸಿ ಖರೀದಿಗೆ (ration expenses) ಬಳಸಲಾಗುತ್ತಿತ್ತು. ಆದರೆ ಇದೀಗ ಯಾವುದೇ ಹಣ ಜಮೆ ಆಗದೆ ಇಲ್ಲದಿರುವುದರಿಂದ ಮಹಿಳೆಯರು ನಿರಾಸೆಯಲ್ಲಿದ್ದಾರೆ.
ಇದನ್ನೂ ಓದಿ: ನೀವೇ ಗ್ರಾಮ ಒನ್ ಕೆಂದ್ರಗಳ ಫ್ರಾಂಚೈಸಿ ಆರಂಭಿಸಿ! ಇಲ್ಲಿದೆ ಅರ್ಜಿ ಸಲ್ಲಿಕೆ ಮಾಹಿತಿ
ಗೃಹಲಕ್ಷ್ಮಿ ಯೋಜನೆಯು ಕಾಂಗ್ರೆಸ್ (Congress) ಪಕ್ಷದ ಪ್ರಮುಖ ಚುನಾವಣಾ ಗ್ಯಾರಂಟಿ ಯೋಜನೆಯಾಗಿದ್ದು, ಪ್ರತಿ ತಿಂಗಳು ₹2,000 ಹಣ ಜಮೆ ಮಾಡುವ ಭರವಸೆ ನೀಡಲಾಗಿತ್ತು. ಆದರೆ ನಿರಂತರವಾದ ಹಣ ಬಾರದ ಸ್ಥಿತಿಯಿಂದ ಕಾಂಗ್ರೆಸ್ ಸರ್ಕಾರದ ನಂಬಿಕೆಗೆ ಧಕ್ಕೆಯಾಗುತ್ತಿದೆ.
ಈ ವಿಚಾರವಾಗಿ ಹಲವಾರು ಗ್ರಾಮ ಪ್ರದೇಶಗಳಲ್ಲಿ ಮಹಿಳೆಯರು ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ತಿಂಗಳು ನಿರೀಕ್ಷಿಸುವ ಹಣ, ಬಾರದ ಕಾರಣ ಕೆಲವರು ಯೋಜನೆ ಕೇವಲ ಚುನಾವಣಾ ನಿಮಿತ್ತ ಘೋಷಿಸಿರಬೇಕು ಎಂದೂ ಸಹ ಅಸಮಾಧಾನ ಪಡುತ್ತಿದ್ದಾರೆ. ಸರ್ಕಾರವು ಆರ್ಥಿಕವಾಗಿ ಸಹಾಯ ಮಾಡಲು ಜಾರಿಗೆ ತಂದ ಯೋಜನೆಯೇ ಇದೀಗ ಮಹಿಳೆಯರಿಗೆ ಜಟಿಲತೆಯ ತೊಡಕಾಗುತ್ತಿದೆ.
Gruha lakshmi Delay Sparks Public Outcry