Business News

ಮನೆ, ಆಸ್ತಿ, ಜಮೀನು ಖರೀದಿ ನಿಯಮದಲ್ಲಿ ಭಾರೀ ಬದಲಾವಣೆ! ಹೊಸ ನಿಯಮ

ನಾವು ನಮ್ಮ ಭವಿಷ್ಯದ (future) ದೃಷ್ಟಿಯಿಂದ ಒಂದಷ್ಟು ಹಣವನ್ನು ಹೂಡಿಕೆ (Investment) ಮಾಡುವುದು ಹಾಗೂ ಒಂದಷ್ಟು ಹಣವನ್ನು ಉಳಿತಾಯ (savings) ಮಾಡುವುದು ಬಹಳ ಮುಖ್ಯ.

ಸಾಕಷ್ಟು ಜನ ತಮ್ಮ ದುಡಿಮೆಯ ಒಂದು ಅಂಶವನ್ನು ಉಳಿತಾಯಕ್ಕಾಗಿ ತೆಗೆದು ಇಡುತ್ತಾರೆ. ಇದು ತುಂಬಾನೇ ಒಳ್ಳೆಯದು. ಯಾಕೆಂದರೆ ಭವಿಷ್ಯದಲ್ಲಿ ಅನಿರೀಕ್ಷಿತ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಅಂತಹ ಸಂದರ್ಭದಲ್ಲಿ ಈ ಹಣ ಪ್ರಯೋಜನಕ್ಕೆ ಬರುತ್ತದೆ.

government solution if You Dont Have Road to go Your Agriculture Land

ಯಾವುದೇ ಸಂದರ್ಭದಲ್ಲಿ ಕೆಲಸ ಕಳೆದುಕೊಳ್ಳಬೇಕಾಗಬಹುದು, ಆರೋಗ್ಯದ ಸಮಸ್ಯೆ ಎದುರಾಗಬಹುದು. ಆರ್ಥಿಕ ಪರಿಸ್ಥಿತಿ ಸರಿ ಇಲ್ಲದೆ ಇರಬಹುದು ಇಂತಹ ಸಂದರ್ಭದಲ್ಲಿ ನಾವು ಉಳಿತಾಯ ಮಾಡಿದ ಹಣ ನಮ್ಮ ಪ್ರಯೋಜನಕ್ಕೆ ಬರುತ್ತದೆ.

ಸ್ವಂತ ಮನೆ ಕಟ್ಟಿಕೊಳ್ಳಲು ಅತಿ ಕಡಿಮೆ ಬಡ್ಡಿಗೆ ಸಾಲ ನೀಡುತ್ತಿವೆ ಈ ಬ್ಯಾಂಕುಗಳು!

ಉಳಿತಾಯ ಮಾಡುವುದು ಒಳ್ಳೆಯದು. ಆದರೆ ನೀವು ಸ್ವಲ್ಪ ಸ್ಮಾರ್ಟ್ ಆಗಿ ಥಿಂಕ್ (smart thinking) ಮಾಡಿದರೆ ಉಳಿತಾಯದ ಜೊತೆಗೆ ಹೂಡಿಕೆಯನ್ನು ಮಾಡಬಹುದು. ಹೂಡಿಕೆ ಮಾಡಿದರೆ ಉಳಿತಾಯಕ್ಕಿಂತ ಹೆಚ್ಚಿನ ಲಾಭ ಸಿಗುತ್ತದೆ. ಉದಾಹರಣೆಗೆ ನೀವು ಒಂದು ಆಸ್ತಿ ಖರೀದಿ (Property Purchase) ಮಾಡಿದ್ರೆ ಅದನ್ನ ಮತ್ತೆ 10 ವರ್ಷಗಳ ನಂತರ ಮಾರಾಟ ಮಾಡಿದರೆ ನೀವು ಖರೀದಿ ಮಾಡಿದ್ದಕ್ಕಿಂತ ಮೂರು ಪಟ್ಟು ಹೆಚ್ಚು ಹಣಕ್ಕೆ ಮಾರಾಟ ಮಾಡಬಹುದು.

ಹೂಡಿಕೆ ಮಾಡುವವರ ಸಂಖ್ಯೆ ಜಾಸ್ತಿ ಆಗಿದೆ!

ಇತ್ತೀಚಿನ ದಿನಗಳಲ್ಲಿ ಆಸ್ತಿ, ಸೈಟ್ (site purchase) ಜಮೀನು, ಮನೆ ಖರೀದಿ ಮಾಡಿ ಭವಿಷ್ಯವನ್ನು ಭದ್ರಪಡಿಸಿಕೊಳ್ಳುತ್ತಿರುವವರ ಸಂಖ್ಯೆ ಜಾಸ್ತಿಯಾಗಿದೆ ಎನ್ನಬಹುದು. ಹೌದು ಇಂದು ಸಾಕಷ್ಟು ಜನ ತಮ್ಮ ಬಳಿ ಇರುವ ಹಣವನ್ನು ಸೈಟ್ ಖರೀದಿ ಮೇಲೆ ಹೂಡಿಕೆ ಮಾಡುತ್ತಾರೆ. ಸೈಟ್ ಅನ್ನು ನೀವು ಯಾವಾಗ ಬೇಕಾದರೂ ಮಾರಿ ಹೆಚ್ಚಿನ ಆದಾಯವನ್ನು ಗಳಿಸಬಹುದು.

ಮನೆ ಬಾಡಿಗೆಗೆ ನೀಡುವ ಮನೆ ಮಾಲೀಕರಿಗೆ ಹೊಸ ನಿಯಮ! ಮಹತ್ವದ ಮಾಹಿತಿ

Property Documentsಅಸ್ತಿ ಖರೀದಿಯ ನಿಯಮದಲ್ಲಿ ಬದಲಾವಣೆ!

ಹೈಕೋರ್ಟ್ (High court) ಆದೇಶದಂತೆ ಆಸ್ತಿ ಖರೀದಿ (property purchase) ಅಥವಾ ಮಾರಾಟಕ್ಕೆ ಮೊದಲು ಆಧಾರ್ ಪರಿಶೀಲನೆ (Aadhaar verification) ಮಾಡುವುದು ಕಡ್ಡಾಯವಾಗಿದೆ. ಆಧಾರ್ ಪರಿಶೀಲನೆ ಮಾಡದೆ ಆಸ್ತಿ ಮಾರಾಟ ಮಾಡಿದ್ರೆ ಅಥವಾ ಆಸ್ತಿ ಖರೀದಿ ಮಾಡಿದ್ರೆ ಅದರಿಂದ ಮುಂದೆ ನೀವು ಸಮಸ್ಯೆ ಎದುರಿಸಬೇಕಾಗುತ್ತದೆ.

ಸೈಟ್ ಅಥವಾ ಇತರ ಆಸ್ತಿ ಖರೀದಿ ವಿಚಾರದಲ್ಲಿ ನಿಮಗೆ ಯಾವುದೇ ನಷ್ಟ ಆಗಬಾರದು, ವಂಚನೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಈ ತೀರ್ಪನ್ನು ಹೈಕೋರ್ಟ್ ನೀಡಿದೆ.

ಮನೆಯಲ್ಲಿಯೇ ಕುಳಿತು 50 ಸಾವಿರದಿಂದ 1 ಲಕ್ಷ ರೂಪಾಯಿ ಆದಾಯ ಗಳಿಸಿ; ಕೈತುಂಬಾ ಹಣ

ಆಧಾರ್ ಪರಿಶೀಲನೆ ಮಾಡುವುದು ಹೇಗೆ?

ಆಸ್ತಿ ಖರೀದಿ ವಿಚಾರದಲ್ಲಿ ಬಹಳಷ್ಟು ಮುತುವರ್ಜಿಯಿಂದ ಇರಬೇಕು. ಇಲ್ಲವಾದರೆ ಯಾರದ್ದೋ ಆಸ್ತಿಯನ್ನು ತನ್ನದ್ದೇ ಎಂದು ಹೇಳಿ ಮೋಸ ಮಾಡಿ ಆಸ್ತಿ ಮಾರಾಟ ಮಾಡುವವರು ಇದ್ದಾರೆ. ಆದರೆ ಈ ರೀತಿಯ ವಂಚನೆಗೆ ಬ್ರೇಕ್ ಹಾಕಲು ಆಧಾರ್ ಪರಿಶೀಲನೆ ಮಾಡಲಾಗುತ್ತದೆ.

ಯಾವುದೇ ಆಸ್ತಿ ಮಾರಾಟದ ಸಮಯದಲ್ಲಿ ಮಾರಾಟ ಮಾಡುವ ವ್ಯಕ್ತಿಯ ಆಧಾರ್ ಕಾರ್ಡ್ ಸಂಖ್ಯೆಯನ್ನು ಪಡೆದುಕೊಂಡು ಅದನ್ನು ಮೊಬೈಲ್ ಸಂಖ್ಯೆಗೆ ಓಟಿಪಿ OTP ಕಳುಹಿಸಲಾಗುತ್ತದೆ.

ಆನ್ ದ ಸ್ಪಾಟ್ ಆ ವ್ಯಕ್ತಿಯ ಮೊಬೈಲ್ ಗೆ ಓಟಿಪಿ ಸಂಖ್ಯೆ ಬಂದರೆ ಆಧಾರ್ ಪರಿಶೀಲನೆ ಆಗಿದೆ ಎಂದು ಅರ್ಥ. ಆಗ ನೀವು ಕಾನ್ಫಿಡೆನ್ಸ್ ನಿಂದ ಆಸ್ತಿ ಖರೀದಿಸಬಹುದು. ಹಾಗಾಗಿ ಯಾವುದೇ ಸಂದರ್ಭದಲ್ಲಿ ಆಸ್ತಿ ಖರೀದಿ ಮಾಡುವಾಗ ಆಧಾರ್ ಪರಿಶೀಲನೆ ಬಗ್ಗೆ ಗಮನವಹಿಸಿ.

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ, ಹೇಗಿದೆ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ; ಇಲ್ಲಿದೆ ಡೀಟೇಲ್ಸ್

Change in house, property, land purchase rule

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories