Business News

60 ವರ್ಷ ಮೇಲ್ಪಟ್ಟವರಿಗೆ ಸಿಹಿ ಸುದ್ದಿ, ಪಿಂಚಣಿ ನಿಯಮದಲ್ಲಿ ದೊಡ್ಡ ಬದಲಾವಣೆ! ಇಲ್ಲಿದೆ ಮಾಹಿತಿ

ನಮ್ಮ ಸರ್ಕಾರವು ಹಿರಿಯ ನಾಗರೀಕರಿಗೆ ಆರ್ಥಿಕವಾಗಿ ಸಹಾಯ ಆಗಲಿ ಎಂದು ಪೆನ್ಶನ್ ಸೌಲಭ್ಯ ಮತ್ತು ಇನ್ನಿತರ ಯೋಜನೆಗಳನ್ನು ಜಾರಿಗೆ ತಂದಿದೆ. ಹಿರಿಯರು ವಯಸ್ಸಾದ ನಂತರ ಹಣಕಾಸಿನ ವಿಚಾರದಲ್ಲಿ ಯಾರಿಗೂ ಹೊರೆ ಆಗಿರಬಾರದು ಎನ್ನುವುದು ಸರ್ಕಾರದ ಉದ್ದೇಶ ಆಗಿದೆ. ಹಾಗಾಗಿ ಅವರಿಗೆ ಅನುಕೂಲವಾಗಲಿ ಎಂದು ಆಗಾಗ ಪೆನ್ಶನ್ ಗೆ ಸಂಬಂಧಿಸಿದ ಹಾಗೆ ಹೊಸ ಅಪ್ಡೇಟ್ ಗಳನ್ನು ಜಾರಿಗೆ ತರಲಾಗುತ್ತಿರುತ್ತದೆ..

ಅದೇ ರೀತಿ ಈಗ ಸರ್ಕಾರವು ಹಿರಿಯ ನಾಗರೀಕರಿಗೆ ಒಂದು ಗುಡ್ ನ್ಯೂಸ್ ತಂದಿದೆ. ಇದೀಗ 7ನೇ ವೇತನದ ಬಗ್ಗೆ ಸರ್ಕಾರದ ಕಡೆಯಿಂದ ಒಂದು ಪ್ರಮುಖ ಅಪ್ಡೇಟ್ ಸಿಕ್ಕಿದ್ದು, 7ನೇ ವೇತನವನ್ನು ಶೀಘ್ರದಲ್ಲೇ ಪರಿಷ್ಕರಿಸಲಾಗುತ್ತದೆ ಎಂದು ತಿಳಿಸಲಾಗಿದೆ.

Good news for those above 60 years old, a big changes in the pension rules

ಸರ್ಕಾರದ ಈ ಒಂದು ನಿರ್ಧಾರದಿಂದ ಹಿರಿಯ ನಾಗರೀಕರಿಗೆ ಅನುಕೂಲ ಆಗಲಿದೆ, ಹಿರಿಯರ ಪೆನ್ಶನ್ ಗೆ ಸಂಬಂಧಿಸಿದ ಹಾಗೆ ಈ ಒಂದು ಅಪ್ಡೇಟ್ ಇರಲಿದೆ ಎಂದು ಸರ್ಕಾರದ ಕಡೆಯಿಂದ ಮಾಹಿತಿ ಸಿಕ್ಕಿದೆ..

ಕೇಂದ್ರದಿಂದ ಹೊಸ ವಿದ್ಯುತ್ ಯೋಜನೆ! ಜನಸಾಮಾನ್ಯರಿಗೆ ಸಿಗಲಿದೆ ₹78,000 ತನಕ ಬೆನಿಫಿಟ್

ಕೇಂದ್ರ ಸರ್ಕಾರವು ಪೆನ್ಶನ್ ಗೆ ಸಂಬಂಧಿಸಿದ ಹಾಗೆ ದೊಡ್ಡದೊಂದು ಬದಲಾವಣೆಯನ್ನೇ ಜಾರಿಗೆ ತರಲಿದೆ. ನಮ್ಮ ದೇಶದಲ್ಲಿ ಆರೋಗ್ಯವನ್ನು ಕಾಪಾಡಿಕೊಂಡು, ಚಿಕಿತ್ಸೆ ಪಡೆಯುವುದಕ್ಕೆ, ಆರೋಗ್ಯ ರಕ್ಷಣೆ ಪಡೆಯುವುದಕ್ಕೆ ಸಾಕಷ್ಟು ವಿಮೆ ಸೌಲಭ್ಯಗಳು (Insurance) ಲಭ್ಯವಿದೆ.

ಸರ್ಕಾರವೇ ದೇಶದ ಜನತೆಗೆ ಅನುಕೂಲ ಆಗುವ ಹಾಗೆ ಆರೋಗ್ಯ ವಿಮೆಯನ್ನು (Health Insurance) ಜಾರಿಗೆ ತಂದಿದ್ದು, ಈ ಯೋಜನೆಗಳ ಸೌಲಭ್ಯಗಳನ್ನು ಜನರು ಪಡೆದುಕೊಳ್ಳಬಹುದು. ಆದರೆ ಹಿರಿಯ ನಾಗರೀಕರು ಆರೋಗ್ಯ ವಿಮೆ ಮಾಡಿಸಿಕೊಳ್ಳುವುದು ಕಷ್ಟಕರವಾಗಿತ್ತು. ಹಿರಿಯರು ಆರೋಗ್ಯ ವಿಮೆ ಮಾಡಿಸಿಕೊಳ್ಳಲು ಅರ್ಹತೆ ಪಡೆದುಕೊಂಡಿರಲಿಲ್ಲ.

ಜಸ್ಟ್ ಪಾಸ್ ಆಗಿದ್ರೂ ಸಾಕು ವಿದ್ಯಾರ್ಥಿಗಳಿಗೆ ಸಿಗಲಿದೆ ಎಜುಕೇಷನ್ ಸ್ಕಾಲರ್ಶಿಪ್! ಇಂದೇ ಅರ್ಜಿ ಸಲ್ಲಿಸಿ

Pension Schemeಹೌದು, 65 ವರ್ಷ ಮೇಲ್ಪಟ್ಟವರು ಆರೋಗ್ಯ ವಿಮೆ ಮಾಡಿಸಿಕೊಳ್ಳುವುದು ಕಷ್ಟವಾಗಿತ್ತು. ಆದರೆ ಈಗ ನಮ್ಮ ದೇಶದ
ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ವಿಮೆಯ ವಿಚಾರದಲ್ಲಿ ಮಹತ್ತರವಾದ ಬದಲಾವಣೆಯೊಂದನ್ನು ಜಾರಿಗೆ ತಂದಿದ್ದು, ಇದರ ಅನುಸಾರ ಎಲ್ಲಾ ವಯಸ್ಸಿನವರು ವಿಮೆಯ ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆ. 65 ವರ್ಷ ಮೇಲ್ಪಟ್ಟವರಿಗೆ ವಿಮೆ ಮಾಡಿಸಿಕೊಳ್ಳುವ ಹಾಗಿರಲಿಲ್ಲ, ಆದರೆ ಇನ್ನುಮುಂದೆ ಎಲ್ಲಾ ವಯಸ್ಸಿನವರು ಆರೋಗ್ಯ ವಿಮೆ (Health Insurance) ಮಾಡಿಸಿಕೊಳ್ಳಬಹುದು.

ನಿಮ್ಮ ಮಗಳ ವಿದ್ಯಾಭ್ಯಾಸಕ್ಕೆ ಸುಕನ್ಯಾ ಸಮೃದ್ಧಿ ಖಾತೆ ತೆರೆಯಿರಿ! ಏನೆಲ್ಲಾ ಬೆನಿಫಿಟ್ ಇದೆ ಗೊತ್ತಾ?

ಇನ್ನು ಕೆಲವು ಹಿರಿಯ ನಾಗರೀಕರಿಗೆ ಪೆನ್ಶನ್ ಪಡೆಯುವುದಕ್ಕೆ ಕೂಡ ಸಮಸ್ಯೆ ಆಗಿ, ಅಂಥವರು ಪೆನ್ಶನ್ ಗಾಗಿ ಕೋರ್ಟ್ ಮೆಟ್ಟಿಲೇರುವ ಪರಿಸ್ಥಿತಿ ಬಂದಿರುತ್ತದೆ. ಅಂಥವರಿಗೂ ಕೂಡ ಒಂದು ಗುಡ್ ನ್ಯೂಸ್ ಇದ್ದು, ಕೋರ್ಟ್ ಗಳಲ್ಲಿ ಪೆನ್ಶನ್ ಗೆ ಸಂಬಂಧಿಸಿದ ಕೇಸ್ ಇದ್ದರೆ, ಇನ್ಮೇಲೆ ವರ್ಷಾನುಗಟ್ಟಲೆ ಆ ಕೇಸ್ ಗಳನ್ನು ನಡೆಸಿಕೊಂಡು ಹೋಗುವ ಹಾಗಿಲ್ಲ.

ಈ ಬಗ್ಗೆ ಪಂಜಾಬ್ ಮತ್ತು ಹರಿಯಾಣ ಕೋರ್ಟ್ ಇಂದ ಹೊಸ ತೀರ್ಪು ಬಂದಿದ್ದು, ಕೆಲವು ದಿನಗಳ ಸಮಯದಲ್ಲಿ ಪೆನ್ಶನ್ ಗೆ ಸಂಬಂಧಿಸಿದ ಕೇಸ್ ಗಳಿಗೆ ತೀರ್ಪು ನೀಡಬೇಕು ಎಂದು ತಿಳಿಸಲಾಗಿದೆ. ಹಾಗೆಯೇ ಅಲಹಾಬಾದ್ ಕೋರ್ಟ್ ಇಂದ ಕೂಡ ಹೊಸ ಆದೇಶ ಬಂದಿದ್ದು, ಒಂದು ವೇಳೆ ಪೆನ್ಶನ್ ಹಣದ ವಿಚಾರದಲ್ಲಿ ಹಿರಿಯ ನಾಗರಿಕರಿಗೆ ಏನಾದರೂ ಮೋಸ ಆಗಿದ್ದು, ತಪ್ಪಾಗಿ ಪೆನ್ಶನ್ ಮೊತ್ತ ಪಾವತಿ ಮಾಡಿದರೆ ಆ ಹಿರಿಯರಿಗೆ 6% ಬಡ್ಡಿಯ ಜೊತೆಗೆ ಪೆನ್ಶನ್ ಮೊತ್ತವನ್ನು ಹಿಂದಿರುಗಿಸಬೇಕು ಎಂದು ತಿಳಿಸಲಾಗಿದೆ.

Good news for those above 60 years old, a big changes in the pension rules

Our Whatsapp Channel is Live Now 👇

Whatsapp Channel

Related Stories