ಇನ್ಮುಂದೆ 60 ವರ್ಷ ಮೇಲ್ಪಟ್ಟವರು ಈ ದಾಖಲೆ ಇಲ್ಲದೆ ಪಿಂಚಣಿ ಪಡೆಯಲು ಸಾಧ್ಯವಿಲ್ಲ
Pension : ರಾಜ್ಯ ಸರ್ಕಾರ ( State government) ರಾಜ್ಯದಲ್ಲಿ ವಾಸಿಸುವ ಹಿರಿಯ ನಾಗರಿಕರಿಗೆ (senior citizens) ಅನುಕೂಲವಾಗುವಂತ ಆರ್ಥಿಕವಾಗಿ ಸಹಾಯಕವಾಗುವಂತಹ ಕೆಲವು ಯೋಜನೆಗಳನ್ನು ಜಾರಿಗೆ ತಂದಿದೆ
ಅವುಗಳಲ್ಲಿ ಮಾಸಿಕ ಪಿಂಚಣಿ (pension) ನೀಡುವ ಯೋಜನೆ ಕೂಡ ಒಂದು. ಕಡಿಮೆ ಹೂಡಿಕೆ ಮಾಡಿದ್ರು, ಹೆಚ್ಚಿನ ಲಾಭ ಪಡೆಯುವಂತಹ ಪಿಂಚಣಿ ಯೋಜನೆಯ ಪ್ರಯೋಜನವನ್ನು ಹಿರಿಯ ನಾಗರಿಕರಿಗೆ ನೀಡಲಾಗುತ್ತಿದೆ. ಈಗ ಪಿಂಚಣಿ ಪಡೆದುಕೊಳ್ಳಲು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಈ ಪ್ರಮುಖ ಕೆಲಸ ಮಾಡುವುದು ಕಡ್ಡಾಯವಾಗಿದೆ.
ಆಧಾರ್ ಕಾರ್ಡ್ ನಲ್ಲಿ ಹೆಸರು ಬದಲಾವಣೆಗೆ ಎಷ್ಟು ಬಾರಿ ಅವಕಾಶ ಇದೆ ಗೊತ್ತಾ?
ಸಂಧ್ಯಾ ಸುರಕ್ಷಾ ಯೋಜನೆ! (Sandhya Suraksha Yojana)
ಹಿರಿಯ ನಾಗರಿಕರ ಭದ್ರತೆ ಮತ್ತು ಆರೈಕೆಗಾಗಿ ಸಂಧ್ಯಾ ಸುರಕ್ಷಾ ಯೋಜನೆಯನ್ನು ರಾಜ್ಯ ಸರ್ಕಾರ ಪರಿಚಯಿಸಿದೆ. ಹಿರಿಯ ನಾಗರಿಕರು ತಮ್ಮ ವೃದ್ಧಾಪ್ಯದ ಸಮಯದಲ್ಲಿ ಅಥವಾ ನಿವೃತ್ತಿಯ ನಂತರ ಸಾಮಾಜಿಕವಾಗಿ ಆರ್ಥಿಕವಾಗಿ ಹಾಗೂ ಆರೋಗ್ಯದ ದೃಷ್ಟಿಯಿಂದ ಸಮಸ್ಯೆ ಅನುಭವಿಸಬಾರದು ಉದ್ದೇಶದಿಂದ ಸರ್ಕಾರ ಇರುವುದಿಲ್ಲ ಜಾರಿಗೆ ತಂದಿದೆ.
ಈ ಯೋಜನೆಯ ಪ್ರಯೋಜನ ಯಾರು ಪಡೆದುಕೊಳ್ಳಬಹುದು?
-ಕರ್ನಾಟಕ ರಾಜ್ಯದ ಶಾಶ್ವತ ನಿವಾಸಿ ಆಗಿರಬೇಕು.
– 65 ಅಥವಾ 65 ವರ್ಷ ಮೇಲ್ಪಟ್ಟ ವಯಸ್ಸಿನವರು ಅರ್ಜಿದಾರರಾಗಿರಬೇಕು.
– ಸ್ಥಳೀಯ ಕಂದಾಯ ಇಲಾಖೆಯ ಪ್ರಮಾಣೀಕರಣಕ್ಕೆ ಒಳಪಟ್ಟ ಹಾಗೆ ಪಿಂಚಣಿ ದಾರ ಅಥವಾ ಆತನ ಪತ್ನಿ ವಾರ್ಷಿಕ ಆದಾಯ 32,000 ಮೀರುವಂತಿಲ್ಲ.
– ಮಕ್ಕಳ ಆದಾಯವನ್ನು ಪಾಲಕರ ಪಿಂಚಣಿ ಯೋಜನೆಯ ಒಳಗೆ ಸೇರಿಸಲಾಗುವುದಿಲ್ಲ.
– ಪಿಂಚಣಿದಾರ ಹಾಗೂ ಆತನ ಸಂಗಾತಿಯ ಜಂಟಿ ಬ್ಯಾಂಕ್ ಖಾತೆಯಲ್ಲಿ 10,000ಗಳಿಗಿಂತ ಹೆಚ್ಚಿನ ಠೇವಣಿ ಇಡುವಂತಿಲ್ಲ.
– ಇತರ ಯಾವುದೇ ಪಿಂಚಣಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿರುವವರಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
– ಅರ್ಜಿ ಸಲ್ಲಿಸುವಾಗ ಆದಾಯ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕು.
ಈ ಯೋಜನೆಯಲ್ಲಿ ಕೇವಲ 50 ರೂಪಾಯಿ ಉಳಿತಾಯ ಮಾಡಿ 35 ಲಕ್ಷ ನಿಮ್ಮದಾಗಿಸಿಕೊಳ್ಳಿ
ಒಂದು ವೇಳೆ ಈ ಎಲ್ಲಾ ದಾಖಲೆಗಳನ್ನು ನೀಡದೆ ಇದ್ದರೆ ಅಂತವರಿಗೆ 60 ವರ್ಷಗಳ ನಂತರ ಸಿಗುವ ಪಿಂಚಣಿ ಹಣ ಸಿಗುವುದಿಲ್ಲ ಎಂದು ಸರ್ಕಾರ ಕಟ್ಟುನಿಟ್ಟಾಗಿ ತಿಳಿಸಿದೆ. ಆದ್ದರಿಂದ ಈಗಾಗಲೇ ಈ ಕಾರ್ಯಕ್ರಮದಡಿಯಲ್ಲಿ ನೀವು ಪಿಂಚಣಿ ಪಡೆದುಕೊಳ್ಳುವವರಾಗಿದ್ದರೆ ನಿಮ್ಮ ಬ್ಯಾಂಕಿಗೆ ಹೋಗಿ ಕೆವೈಸಿ ಕೂಡ ಮಾಡಿಸಿಕೊಳ್ಳಿ.
people above 60 years cannot get pension without this document