ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ! ಈ ಯೋಜನೆಯ ಗಡುವು ಮತ್ತೊಮ್ಮೆ ವಿಸ್ತರಣೆ
ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ದೈತ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ವಿಶೇಷ ಠೇವಣಿ ಯೋಜನೆ ‘ಅಮೃತ್ ಕಲಶ’ ಗಡುವನ್ನು ಮತ್ತೊಮ್ಮೆ ವಿಸ್ತರಿಸಿದೆ. 400 ದಿನಗಳ ಅವಧಿಯ ಈ ಯೋಜನೆಯು ಮಾರ್ಚ್ 31 ರಂದು ಮುಕ್ತಾಯಗೊಂಡಿದೆ. ಈ ವರ್ಷ ಇದನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ಎಸ್ಬಿಐ (State Bank Of India) ಈ ಯೋಜನೆಯ ಗಡುವನ್ನು ಈ ಹಿಂದೆ ಹಲವು ಬಾರಿ ವಿಸ್ತರಿಸಿದೆ.
ಈ ಯೋಜನೆಯಡಿ, ಹಿರಿಯ ನಾಗರಿಕರಿಗೆ ಶೇಕಡಾ 7.6 ಮತ್ತು ಇತರರಿಗೆ ಶೇಕಡಾ 7.1 ರ ಬಡ್ಡಿದರ ಸಿಗುತ್ತದೆ. ಆದಾಯ ತೆರಿಗೆ ಕಾಯಿದೆಯ ಪ್ರಕಾರ ಮೂಲದಲ್ಲಿ ತೆರಿಗೆಯನ್ನು (ಟಿಡಿಎಸ್) ಬಡ್ಡಿಯ ಮೇಲೆ ಕಡಿತಗೊಳಿಸಲಾಗುತ್ತದೆ.
ನಿಮಗೂ ಸಿಗುತ್ತೆ ಲೋನ್! ಕ್ರೆಡಿಟ್ ಕಾರ್ಡ್ ಲೋನ್ ಯಾವಾಗ ತೆಗೆದುಕೊಳ್ಳೋದು ಉತ್ತಮ?
ಎಸ್ಬಿಐ ಶಾಖೆಗಳು, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಎಸ್ಬಿಐ ಯೋನೋ ಅಪ್ಲಿಕೇಶನ್ (SBI Yono App) ಮೂಲಕ ಈ ವಿಶೇಷ ನಿಶ್ಚಿತ ಠೇವಣಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಈ ಯೋಜನೆಯು ರೂ.2 ಕೋಟಿಗಳವರೆಗಿನ ಮೊತ್ತಕ್ಕೆ ಅನ್ವಯಿಸುತ್ತದೆ. ಅಮೃತ್ ಕಲಶ ಯೋಜನೆಯು ಅಲ್ಪಾವಧಿ ಹೂಡಿಕೆದಾರರಿಗೆ ಪ್ರಯೋಜನಕಾರಿಯಾಗಿದೆ. ಹೆಚ್ಚುವರಿ ಠೇವಣಿಯನ್ನು ಮೊದಲೇ ಹಿಂಪಡೆಯಬಹುದು. ಸಾಲ (Loan) ಸೌಲಭ್ಯವೂ ಇದೆ.
ಸಾಲ ಮಾಡಿ ಮನೆ ಖರೀದಿಸುತ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ಹೋಮ್ ಲೋನ್ ಲೆಕ್ಕಾಚಾರ
SBI ಇತ್ತೀಚಿನ ಬಡ್ಡಿದರಗಳು
ಸ್ಥಿರ ಠೇವಣಿ (Fixed Deposit) ಯೋಜನೆಗಳ ಬಡ್ಡಿದರಗಳಿಗೆ ಸಂಬಂಧಿಸಿದಂತೆ, ರೂ.2 ಕೋಟಿಗಳವರೆಗಿನ ಠೇವಣಿಗಳ ಮೇಲಿನ SBI ಬಡ್ಡಿದರಗಳು 3.5 ಪ್ರತಿಶತದಿಂದ ಪ್ರಾರಂಭವಾಗುತ್ತವೆ. ಗರಿಷ್ಠ 7 ಶೇಕಡಾ ಬಡ್ಡಿ (ಅಮೃತ ಕಲಶ ಹೊರತುಪಡಿಸಿ) ಲಭ್ಯವಿದೆ. ಹಿರಿಯ ನಾಗರಿಕರಿಗೆ ಶೇಕಡಾ 7.5 ಬಡ್ಡಿ ಸಿಗುತ್ತದೆ.
ಯಾವ ಉದ್ದೇಶಗಳಿಗಾಗಿ ಗೋಲ್ಡ್ ಲೋನ್ ಬಳಸಬಹುದು? ಇಲ್ಲಿದೆ ಮಹತ್ವದ ಮಾಹಿತಿ
State Bank of India has once again extended the term of its Amrit Kalash deposit scheme