ದೋಣಿ ಮಗುಚಿ ಎಂಟು ಮಂದಿ ಸಾವು
ದೋಣಿ ಮಗುಚಿ ಒಂದೇ ಕುಟುಂಬದ ಎಂಟು ಮಂದಿ ಮೃತಪಟ್ಟಿದ್ದಾರೆ
ರಾಂಚಿ: ಕೌಟುಂಬಿಕ ಪ್ರವಾಸ ದುರಂತಕ್ಕೆ ತಿರುಗಿದೆ. ದೋಣಿ ಮಗುಚಿ ಒಂದೇ ಕುಟುಂಬದ ಎಂಟು ಮಂದಿ ಮೃತಪಟ್ಟಿದ್ದಾರೆ. ಜಾರ್ಖಂಡ್ನ ಕೊಡೆರ್ಮಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಭಾನುವಾರ ಬೆಳಗ್ಗೆ ರಾಜಧನ್ವಾರ್ ಪ್ರದೇಶದ ಕುಟುಂಬವೊಂದು ಪಂಚಖೇರೋ ಅಣೆಕಟ್ಟೆಗೆ ತೆರಳಿತ್ತು.
ಈ ವೇಳೆ ಬಾಡಿಗೆ ದೋಣಿಯಲ್ಲಿ ವಿಹಾರಕ್ಕೆ ಹೋಗಿದ್ದಾರೆ. ಆದರೆ ದೋಣಿ ಮಗುಚಿ ಬಿದ್ದಿದೆ. ಇದರಿಂದ ಒಂದೇ ಕುಟುಂಬದ 9 ಮಂದಿಯಲ್ಲಿ 8 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಶಿವಂ ಸಿಂಗ್ (17), ಪಾಲಕ್ ಕುಮಾರಿ (14), ಸೀತಾರಾಮ್ ಯಾದವ್ (40), ಸೇಜಲ್ ಕುಮಾರಿ (16), ಹರ್ಷಲ್ ಕುಮಾರ್ (8), ಭಾವ (5), ರಾಹುಲ್ ಕುಮಾರ್ (16) ಮತ್ತು ಅಮಿತ್ ಕುಮಾರ್ (16) ಎಂದು ಗುರುತಿಸಲಾಗಿದೆ. (14) ಎಂದು ಗುರುತಿಸಲಾಗಿದೆ.
ಆದರೆ, ಆ ಕುಟುಂಬದ ಪ್ರದೀಪ್ ಕುಮಾರ್ ಮತ್ತು ಬೋಟ್ ಮ್ಯಾನ್ ಮಾತ್ರ ಸುರಕ್ಷಿತವಾಗಿ ದಡ ತಲುಪಿದ್ದಾರೆ. ಈ ಮಾಹಿತಿ ಪಡೆದ ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ತಂಡವು ತಕ್ಷಣ ಸ್ಥಳಕ್ಕೆ ಧಾವಿಸಿತು. ನದಿಯಲ್ಲಿ ಮುಳುಗಿದವರಿಗಾಗಿ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಮತ್ತೊಂದೆಡೆ, ಈ ವಿಷಯ ತಿಳಿದ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
eight of family drown after boat capsizes in Jharkhand Koderma
Follow us On
Google News |
Advertisement