ದೇವರ ದರ್ಶನ ಪಡೆದು ಹಿಂದಿರುಗುವಾಗ ವಾಹನ ಅಪಘಾತ, ನಾಲ್ವರು ಸಾವು

ದೇವರ ದರ್ಶನಕ್ಕೆಂದು ತೆರಳಿ ವಾಪಾಸ್ಸಾಗುವಾಗ ಕುಟುಂಬವೊಂದು ರಸ್ತೆ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ

ನವದೆಹಲಿ: ದೇವರ ದರ್ಶನಕ್ಕೆಂದು ತೆರಳಿ ವಾಪಾಸ್ಸಾಗುವಾಗ ಕುಟುಂಬವೊಂದು ರಸ್ತೆ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗುರುಗ್ರಾಮ್‌ನ ಬುಧೇಡಾದಲ್ಲಿರುವ ಎಸ್‌ಜಿಟಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಂಡ್ಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಮೃತರಲ್ಲಿ ಮೂವರು ಒಂದೇ ಕುಟುಂಬದವರಾಗಿದ್ದು, ಮತ್ತೊಬ್ಬರು ಸಂಬಂಧಿಯಾಗಿದ್ದಾರೆ. ವೈಷ್ಣೋದೇವಿ ದರ್ಶನ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಬಾದಶಾ ಪೊಲೀಸ್ ಠಾಣೆ ವ್ಯಾಪ್ತಿಯ ಕೆಎಂಪಿಯಲ್ಲಿ ಗುರುವಾರ ಈ ಘಟನೆ ನಡೆದಿದೆ.

ರಸ್ತೆಯಲ್ಲಿ ವಾಹನ ನಿಲ್ಲಿಸುತ್ತಿದ್ದಾಗ ಹಿಂಬದಿಯಿಂದ ಬಂದ ಎಸ್ ಯುವಿ ಡಿಕ್ಕಿ ಹೊಡೆದಿದೆ. ರೇವಾರಿ ಜಿಲ್ಲೆಯ ಮೂವರು ಮತ್ತು ರಾಜಸ್ಥಾನದ ಒಬ್ಬರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ತಾಯಿ, ಮಗ, ಸೊಸೆ ಮತ್ತು ಚಿಕ್ಕಮ್ಮ ಸೇರಿದ್ದಾರೆ.

ದೇವರ ದರ್ಶನ ಪಡೆದು ಹಿಂದಿರುಗುವಾಗ ವಾಹನ ಅಪಘಾತ, ನಾಲ್ವರು ಸಾವು - Kannada News

ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಎಸ್‌ಜಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರು ಜಮ್ಮುವಿನಲ್ಲಿರುವ ವೈಷ್ಣೋದೇವಿಯನ್ನು ದರ್ಶನ ಮಾಡಿ ಎರಡು ವಿಭಿನ್ನ ಕಾರುಗಳಲ್ಲಿ ಹಿಂತಿರುಗುತ್ತಿದ್ದರು. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಎಸ್ಪಿ ಅಮಿತ್ ಯಶವರ್ಧನ್ ಭೇಟಿ ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Four People Killed In Road Accident In Haryana Family Was Returning From Mata Vaishno Devi

Related Stories