ಪತ್ನಿಯನ್ನು ಕೊಂದು ಶವದ ಪಕ್ಕದಲ್ಲಿ ಮಲಗಿದ್ದ ಪತಿ
ದೆಹಲಿ: ಕುಡಿದ ಮತ್ತಿನಲ್ಲಿ ದಂಪತಿ ಜಗಳ ಮಾಡಿದ್ದಾರೆ, ನಂತರ ಊಟ ಬಡಿಸಲು ಹೇಳಿದ ಪತಿಗೆ ಹೆಂಡತಿ ನಿರಾಕರಿಸಿದ್ದಾಳೆ. ಈ ವೇಳೆ ಕುಡುಕ ಪತಿ ಆಕೆಯ ಮೇಲೆ ಹಲ್ಲೆ ನಡೆಸಿ ಕೊಂದು ರಾತ್ರಿಯಿಡೀ ಶವದ ಪಕ್ಕದಲ್ಲಿ ಮಲಗಿದ್ದ.
ನಶೆಯಲ್ಲಿದ್ದ ಆಸಾಮಿಗೆ ಮರುದಿನ ಬೆಳಿಗ್ಗೆ ತಾನು ತನ್ನ ಹೆಂಡತಿಯನ್ನು ಕೊಂದಿರುವುದಾಗಿ ಅರಿವಾಗಿದೆ. ಮನೆಯಲ್ಲಿ 40,000 ರೂಪಾಯಿ ನಗದು ಹಣದೊಂದಿಗೆ ಪರಾರಿಯಾಗಿದ್ದ ಆತನನ್ನು, ದೆಹಲಿ ಪೊಲೀಸರು ಮತ್ತೊಂದು ಶಾಖೆಯ ಪೊಲೀಸರ ಸಹಾಯದಿಂದ ಬಂಧಿಸಲು ಸಾಧ್ಯವಾಯಿತು. ಆರೋಪಿಯನ್ನು ಸುಲ್ತಾನಪುರದ ವಿನೋದ್ ಕುಮಾರ್ ದುಬೆ ಎಂದು ಗುರುತಿಸಲಾಗಿದೆ.
ಶುಕ್ರವಾರ ಬೆಳಗ್ಗೆ 9:20ಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಫೋನ್ ಮಾಡಿ ಕುಡಿದ ಅಮಲಿನಲ್ಲಿ ತನ್ನ ಪತ್ನಿಯನ್ನು ದಿಂಬಿನಿಂದ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಪೊಲೀಸರು ಸ್ಥಳದಲ್ಲಿ ವಿಚಾರಣೆ ನಡೆಸಿದ್ದು, ಆತನಿಂದ 43,280 ರೂಪಾಯಿ ನಗದು, ಎರಡು ಔಷಧಿ ಬಾಟಲಿಗಳು ಮತ್ತು ರಕ್ತಸಿಕ್ತ ದಿಂಬನ್ನು ವಶಪಡಿಸಿಕೊಂಡಿದ್ದಾರೆ.
2008ರಲ್ಲಿ ವಿವಾಹವಾಗಿದ್ದ ವಿನೋದ್ ಕುಮಾರ್ ದುಬೆ, ಪತ್ನಿ ಸೋನಾಲಿ ಜತೆ ಮದುವೆಯಾಗಿದ್ದ. ಗುರುವಾರ ರಾತ್ರಿ ಚೆನ್ನಾಗಿ ಕುಡಿದ ಬಳಿಕ ಊಟ ತರುವಂತೆ ಪತ್ನಿಗೆ ಆದೇಶಿಸಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಜಗಳದಲ್ಲಿ ಪತ್ನಿಯನ್ನು ಕೊಂದಿದ್ದಾನೆ, ಪೊಲೀಸರಿಗೆ ಹೆದರಿ ಹಣದೊಂದಿಗೆ ಪರಾರಿಯಾಗಿದ್ದ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Man Kills Wife In Delhi For Not Serving Food