ಪದೇ ಪದೇ ಮಾವಿನಹಣ್ಣು ಕೇಳಿದ್ದಕ್ಕೆ ಬಾಲಕಿಯ ಕೊಂದ ಮಾವ !
ಪದೇ ಪದೇ ಮಾವಿನಹಣ್ಣು ಕೇಳಿದ್ದಕ್ಕೆ ಸೋದರ ಮಾವ ಬಾಲಕಿಯನ್ನು ಕೊಂದಿದ್ದಾನೆ. ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ
ಲಕ್ನೋ: ಪದೇ ಪದೇ ಮಾವಿನಹಣ್ಣು ಕೇಳಿದ್ದಕ್ಕೆ ಬಾಲಕಿಯ ಮಾವ ಬಾಲಕಿಯನ್ನು ಕೊಂದಿದ್ದಾನೆ. ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಖೇಡಾ ಕುರ್ತಾನ್ ಗ್ರಾಮದ ಕೂಲಿ ಕಾರ್ಮಿಕನ ಮಗಳು 5 ವರ್ಷದ ಖೈರು ನಿಶಾ ಮಂಗಳವಾರ ತನ್ನ ಸೋದರ ಮಾವ ಉಮರುದ್ದೀನ್ ಮನೆಗೆ ಹೋಗಿದ್ದಳು. ಮಾವಿನ ಹಣ್ಣು ಬೇಕೆಂದು ಪದೇ ಪದೇ ಕೇಳಿದಳು. ಅದಕ್ಕೆ ಕೋಪದಿಂದ ಆಕೆಯ ಮಾವ ಕಬ್ಬಿಣದ ರಾಡ್ ನಿಂದ ಮಗುವಿನ ತಲೆಗೆ ಹೊಡೆದಿದ್ದಾನೆ. ಬಳಿಕ ಚಾಕುವಿನಿಂದ ಬಾಲಕಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಮೃತ ದೇಹವನ್ನು ಮನೆಯಲ್ಲಿ ಗೋಣಿ ಚೀಲದಲ್ಲಿ ಬಚ್ಚಿಟ್ಟಿದ್ದಾನೆ.
ಮತ್ತೊಂದೆಡೆ ಬಾಲಕಿ ಪತ್ತೆಯಾಗದ ಕಾರಣ ಆಕೆಯ ಪೋಷಕರು ಹುಡುಕಾಟ ನಡೆಸಿದ್ದಾರೆ. ಕೊನೆಗೆ ಪೊಲೀಸರಿಗೆ ದೂರು ನೀಡಲಾಯಿತು. ಆದರೆ ಉಮರುದ್ದೀನ್ ಕೂಡ ಅನುಮಾನ ಬಾರದಂತೆ ಅವರ ಜೊತೆ ಹುಡುಕಾಟಕ್ಕೆ ತೆರಳಿದ್ದರು. ಪೊಲೀಸರಿಗೆ ಅನುಮಾನ ಬಂದಿದ್ದರಿಂದ ಸ್ಥಳದಿಂದ ಓಡಿ ಹೋಗಿದ್ದಾನೆ.
ಈ ನಡುವೆ ಪೊಲೀಸರು ಉಮರುದ್ದೀನ್ ಅವರ ಮನೆಗೆ ತೆರಳಿ ತಪಾಸಣೆ ನಡೆಸಿದಾಗ ಗೋಣಿಚೀಲದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ನಂತರ ಪರಾರಿಯಾಗಿದ್ದ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಸಮೀಪದ ಅರಣ್ಯ ಪ್ರದೇಶದಲ್ಲಿದ್ದ ಉಮರುದ್ದೀನ್ನನ್ನು ಗುರುವಾರ ಬಂಧಿಸಲಾಗಿದೆ. ಬಾಲಕಿಯನ್ನು ಕೊಲ್ಲಲು ಬಳಸಿದ ಚಾಕು ಮತ್ತು ಕಬ್ಬಿಣದ ರಾಡ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತನ ವಿರುದ್ಧ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
up man kills 5 year old niece after she repeatedly asked for mango
Follow us On
Google News |
Advertisement