ಈ ಕಾರ್ಡ್ ಇದ್ದವರಿಗೆ ವರ್ಷಕ್ಕೆ ಉಚಿತವಾಗಿ ಸಿಗಲಿದೆ 5 ಲಕ್ಷ; ಸರ್ಕಾರದಿಂದ ಮತ್ತೊಂದು ಯೋಜನೆ
ರೈತರು ಈ ದೇಶದ ಬೆನ್ನೆಲುಬು, ರೈತರು ಇಲ್ಲದೆ ದೇಶದ ಆರ್ಥಿಕ ಪರಿಸ್ಥಿತಿ ಕೂಡ ಸರಿ ಹೋಗುವುದಿಲ್ಲ, ಹಾಗಾಗಿ ರಾಜ್ಯ ಸರ್ಕಾರ (state government) ಕೇಂದ್ರ ಸರ್ಕಾರದ (central government) ಜೊತೆಗೆ ಕೈಜೋಡಿಸಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ
ರೈತರಿಗೆ ಅನುಕೂಲವಾಗುವಂತಹ ಸೌಲಭ್ಯಗಳನ್ನು ಕೇಂದ್ರ ಸರ್ಕಾರವು ನೀಡುತ್ತಲೇ ಬಂದಿದೆ. ಇದೀಗ ಒಬ್ಬ ರೈತನಿಗೆ ಮಾತ್ರವಲ್ಲದೆ ಹಿಡಿ ರೈತ ಕುಟುಂಬಕ್ಕೆ ಸಹಾಯವಾಗುವಂತಹ ಯೋಜನೆ ಒಂದು ಜಾರಿಗೆ ಬಂದಿದ್ದು ಈ ಮೂಲಕ ರೈತರು ವಾರ್ಷಿಕವಾಗಿ 5 ಲಕ್ಷ ವರೆಗೆ ಪಡೆದುಕೊಳ್ಳಬಹುದು.
ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿರುವ ಅನ್ನದಾತ ರೈತರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ
ಯಾವುದು ಆ ಯೋಜನೆ:
ಇದು ರೈತ ಪರವಾಗಿರುವ ಯೋಜನೆ ಈ ಯೋಜನೆ ಅಡಿಯಲ್ಲಿ ರೈತರು (farmer) ಹಾಗೂ ರೈತ ಮಕ್ಕಳು ಮಾತ್ರ ಪ್ರಯೋಜನ ಪಡೆದುಕೊಳ್ಳಬಹುದು. ನಿಮ್ಮ ಸ್ಥಳೀಯರು ಸಹಕಾರಿ ಬ್ಯಾಂಕ್ ಗಳಲ್ಲಿ (Banks) ಯೋಜನೆ ಆರಂಭಿಸಬಹುದು. ಅದುವೇ ಯಶಸ್ವಿನಿ ಯೋಜನೆ. ಈ ಯೋಜನೆಯ ಮೂಲಕ ರೈತರು ಪ್ರತಿ ವರ್ಷ 5 ಲಕ್ಷಗಳವರೆಗೆ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಏನಿದು ಯಶಸ್ವಿನಿ ಕಾರ್ಡ್?
ಇದು ಸರ್ಕಾರದಿಂದ ರೈತರಿಗೆ ಮಾತ್ರ ನೀಡಲಾಗುವ ಕಾರ್ಡ್ ಆಗಿದ್ದು ಯಶಸ್ವಿನಿ ಕಾರ್ಡ್ (yashaswini card) ನಿಮ್ಮ ಬಳಿ ಇದ್ದರೆ ನೀವು ಸುಲಭವಾಗಿ ವೈದ್ಯಕೀಯ ಚಿಕಿತ್ಸೆ (medical treatment) ಪಡೆದುಕೊಳ್ಳಬಹುದು.
ಇಂದು ಯಾರಿಗೆ ಯಾವ ರೀತಿಯಲ್ಲಿ ಕಾಯಿಲೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಅದೆಷ್ಟೋ ಬಾರಿ ಆಪರೇಷನ್ (operation) ಮಾಡಿಸಿಕೊಳ್ಳುವಂತಹ ಪರಿಸ್ಥಿತಿ ಇರುತ್ತದೆ, ಶಸ್ತ್ರಚಿಕಿತ್ಸೆ (operation) ಅಂದರೆ ಅದರ ಬೆಲೆಯೂ ಅಷ್ಟೇ ದುಬಾರಿ, ಸಾಮಾನ್ಯರಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ.
ಗೃಹಲಕ್ಷ್ಮಿ ಯೋಜನೆಯ ಎರಡೂ ಕಂತಿನ ಹಣ ನಾಳೆಯೇ ಬಿಡುಗಡೆ! ಇಂತಹ ಗೃಹಿಣಿಯರಿಗೆ ಮಾತ್ರ
ಸಾಮಾನ್ಯವಾಗಿ ರೈತರು ಶಸ್ತ್ರ ಚಿಕಿತ್ಸೆಅಂತಹ ದೊಡ್ಡ ಸಮಸ್ಯೆಗೆ ಪರಿಹಾರವಾಗಿ ಸರ್ಕಾರಿ ಆಸ್ಪತ್ರೆಗೆ ಹೋಗುತ್ತಾರೆ. ಆದರೆ ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಶಸ್ತ್ರಚಿಕಿತ್ಸೆ ಲಭ್ಯ ಇರುವುದಿಲ್ಲ
ಹಾಗಾಗಿ ಅತಿ ಹೆಚ್ಚು ಹಣವನ್ನು ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ (Private Hospital) ಚಿಕಿತ್ಸೆ ಪಡೆದುಕೊಳ್ಳುವ ಅನಿವಾರ್ಯತೆ ಇರುತ್ತದೆ. ರೈತರ ಈ ಪರಿಸ್ಥಿತಿಗೆ ಪರಿಹಾರ ತಂದುಕೊಡಲು ಯಶಸ್ವಿನಿ ಕಾರ್ಡ್ ಜಾರಿಗೆ ಬಂದಿದೆ. ರೈತರು ಈ ಕಾರ್ಡ್ ಹೊಂದಿದ್ದರೆ ಚಿಕಿತ್ಸೆ ಅಗತ್ಯ ಇರುವ ಸಂದರ್ಭದಲ್ಲಿ ಬಳಸಿಕೊಳ್ಳಬಹುದು.
ಯಶಸ್ವಿನಿ ಕಾರ್ಡ್ ಎಲ್ಲೆಲ್ಲಿ ಬಳಸಬಹುದು ಗೊತ್ತಾ?
ಸರ್ಕಾರ ಹೊಸದಾಗಿ ಯಶಸ್ವಿನಿ ಕಾರ್ಡ್ ಸಿಸ್ಟಮ್ (yashaswini card system) ಬಿಡುಗಡೆ ಮಾಡಿದೆ, ದೇಶದ ಎಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ ಈ ಯೋಜನೆಯ ಖಾತೆ ತೆರೆಯಬಹುದು.
823 ಬಗೆಯ ಶಸ್ತ್ರ ಚಿಕಿತ್ಸೆಗಳನ್ನೂ ಈ ಕಾರ್ಡ್ ಹೊಂದಿದವರು ಮಾಡಿಸಿಕೊಳ್ಳಬಹುದು. ಹಾಗೂ ರಾಜ್ಯದ 296 ಆಸ್ಪತ್ರೆಯಲ್ಲಿ ಈ ಸೇವೆ ಲಭ್ಯವಿದೆ. ಇನ್ಮುಂದೆ ಶಸ್ತ್ರ ಚಿಕಿತ್ಸೆಗಾಗಿ ರೈತರು ತಮ್ಮ ತುಂಡು ಜಮೀನನ್ನು ಕೂಡ ಅಡವಿಟ್ಟು ಕಷ್ಟಪಡಬೇಕಾಗಿಲ್ಲ
ಹಲವು ವರ್ಷಗಳಿಂದ ಇಂತಹ ಸರ್ಕಾರಿ ಜಾಗದಲ್ಲಿ ಇದ್ದವರಿಗೆ ಸಿಹಿಸುದ್ದಿ! ಹಕ್ಕು ಪತ್ರ ವಿತರಣೆ
ಯಶಸ್ವಿನಿ ಕಾರ್ಡ್ ಹೊಂದಿದ್ದರೆ ನಿಮ್ಮ ಚಿಕಿತ್ಸಾ ಶುಲ್ಕವನ್ನು ಸರ್ಕಾರವೇ ನೋಡಿಕೊಳ್ಳುತ್ತದೆ, ನೀವು ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತೀರಿ ಎಷ್ಟು ಚಿಕಿತ್ಸಾ ಶುಲ್ಕ (treatment fee) ಆಗಿದೆ ಎಂಬುದರ ಆಧಾರದ ಮೇಲೆ ನೀವು ಸರ್ಕಾರದಿಂದ ಯಶಸ್ವಿನಿ ಕಾರ್ಡ್ ಹೊಂದಿದ್ದರೆ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ತಕ್ಷಣವೇ ಹತ್ತಿರದ ಸಹಕಾರಿ ಬ್ಯಾಂಕಿನಲ್ಲಿ ಯಶಸ್ವಿನಿ ಕಾರ್ಡ್ ಪಡೆದುಕೊಳ್ಳಿ.
5 lakh per year free for this card holder, Another scheme from Govt