Karnataka NewsBengaluru News

ಒಂದು ಎಕರೆ ಕೃಷಿ ಭೂಮಿ ಇರುವ ರೈತರಿಗೆ ಸರ್ಕಾರದಿಂದ ಸಿಹಿ ಸುದ್ದಿ! ಬಂಪರ್ ಕೊಡುಗೆ

ದೇಶದಲ್ಲಿ ಕೃಷಿಯನ್ನು ಮೆಚ್ಚಿಕೊಂಡು ಇರುವ ರೈತರ ಸಂಖ್ಯೆ ಸಾಕಷ್ಟಿದೆ. ಈ ರೈತರ ಕೃಷಿ ಭೂಮಿಯಲ್ಲಿ ಬೆಳೆಯುವ ಬೆಳೆಗಳು ಸರಿಯಾದ ಫಸಲು ನೀಡಲು ಅಗತ್ಯ ಇರುವ ನೀರಾವರಿ ಸೌಲಭ್ಯದಿಂದ ಹಿಡಿದು ಬಿತ್ತನೆ ಮಾಡಲು ಬೇಕಾಗುವ ಬೀಜಗಳವರೆಗೆ ಖರೀದಿ ಮಾಡಲು ಸರ್ಕಾರ ಸಾಕಷ್ಟು ಸಾಲ ಸೌಲಭ್ಯ (Loan Scheme), ಸಹಾಯಧನ ನೀಡುತ್ತದೆ.

ಇದೀಗ ರಾಜ್ಯದಲ್ಲಿ ವಾಸಿಸುವ ರೈತರು ಒಂದು ಎಕರೆಯಷ್ಟು ಕೃಷಿ ಭೂಮಿ ಹೊಂದಿದ್ದರೆ ಅಥವಾ ಗರಿಷ್ಠ ಎರಡು ಹೆಕ್ಟರ್ ಕೃಷಿ ಭೂಮಿ (Agriculture Land) ಹೊಂದಿದ್ದರೆ ಹತ್ತು ಸಾವಿರ ರೂಪಾಯಿಗಳ ಸಹಾಯಧನವನ್ನು ಪಡೆದುಕೊಳ್ಳಬಹುದು. ಹೇಗೆ ಅಂತೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Wrong name on your land Documents, Change easily like this

ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣಕ್ಕೆ ಕಡ್ಡಾಯ ರೂಲ್ಸ್ ಜಾರಿ! ಬಿಗ್ ಅಪ್ಡೇಟ್

ಸಿರಿಧಾನ್ಯ ಬೆಳೆ ಪ್ರೋತ್ಸಾಹ

ರಾಗಿಯಂತಹ ಸಿರಿಧಾನ್ಯ ಬೆಳೆ ಪ್ರೋತ್ಸಾಹಿಸುವ ಸಲುವಾಗಿ ರಾಜ್ಯ ಸರ್ಕಾರ 10 ಸಾವಿರ ರೂಪಾಯಿಗಳ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ. ರಾಜ್ಯದಲ್ಲಿ ವಾಸಿಸುವ ಯುವ ರೈತರಿಗೆ ಸಿರಿಧಾನ್ಯ ಬೆಳೆ ಬೆಳೆಯುವ ಮಹತ್ವವನ್ನು ತಿಳಿಸುವ ಸಲುವಾಗಿ ತರಬೇತಿಯನ್ನು ಕೂಡ ನೀಡಲಾಗುವುದು.

ಸಿರಿಧಾನ್ಯ ಬೆಳೆಯುವುದು ಹೇಗೆ, ಶುಷ್ಕ ಹಾಗೂ ಒಣ ಭೂಮಿಯಲ್ಲಿಯೂ ಕೂಡ ಹೇಗೆ ಬೆಳೆಯಬಹುದು ಮೊದಲಾದ ಮಾಹಿತಿ ತಿಳಿಸಿಕೊಡುವ ಸಲುವಾಗಿ ರೈತರಿಗೆ ತರಬೇತಿಯನ್ನು ಸರ್ಕಾರದ ಕಡೆಯಿಂದ ನೀಡಲಾಗುವುದು.

ಪ್ರೋತ್ಸಾಹ ಧನ ಪಡೆಯಲು ಬೇಕಾಗಿರುವ ದಾಖಲೆಗಳು?

ರೈತರ ಭೂಮಿಗೆ ಸಂಬಂಧಪಟ್ಟ ಪಹಣಿ ಪತ್ರ
ಆಧಾರ್ ಕಾರ್ಡ್
ವಿಳಾಸದ ಪುರಾವೆ
ಖಾಯಂ ನಿವಾಸದ ಬಗ್ಗೆ ದಾಖಲೆ
ಆದಾಯ ಪ್ರಮಾಣ ಪತ್ರ ಮೊದಲದ ದಾಖಲೆಗಳು ಬೇಕು.

ಮೊಬೈಲ್ ನಲ್ಲಿಯೇ ಸುಲಭವಾಗಿ ಚೆಕ್ ಮಾಡಿಕೊಳ್ಳಿ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್!

Loan schemeನೇರವಾಗಿ ರೈತರ ಖಾತೆಗೆ ಹಣ ಜಮಾ!

ಸರ್ಕಾರ ಸಿರಿಧಾನ್ಯ ಬೆಳೆಯನ್ನ ಪ್ರೋತ್ಸಾಹಿಸಲು ನೀಡುವ 10,000 ಸಹಾಯಧನವನ್ನು ಎರಡು ಹಂತಗಳಲ್ಲಿ ಪಡೆದುಕೊಳ್ಳಬಹುದು ಮೊದಲನೇ ಹಂತದಲ್ಲಿ ಆರು ಸಾವಿರ ಮತ್ತು ಎರಡನೇ ಹಂತದಲ್ಲಿ ನಾಲ್ಕು ಸಾವಿರ ರೂಪಾಯಿಗಳನ್ನು ನೀಡಲಾಗುವುದು.

ಇತ್ತೀಚಿನ ದಿನಗಳಲ್ಲಿ ಮಳೆಯ ಅಭಾವದಿಂದ ರೈತರು ಸಾಕಷ್ಟು ಸಂಕಷ್ಟ ಅನುಭವಿಸುವಂತೆ ಆಗಿದೆ, ಸರಿಯಾಗಿ ಫಸಲು ಬರುತ್ತಿಲ್ಲ ಅಥವಾ ಫಸಲು ಬರುವುದಕ್ಕೆ ಅಗತ್ಯ ಇರುವಷ್ಟು ನೀರಾವರಿ ಸೌಲಭ್ಯವನ್ನು ಕೂಡ ಒದಗಿಸಲು ಸಾಧ್ಯವಾಗುತ್ತಿಲ್ಲ.

ಇಂತಹವರಿಗೆ ಸಿಗದೇ ಇರಬಹುದು ಉಚಿತ ವಿದ್ಯುತ್! ಗೃಹಜ್ಯೋತಿ ಯೋಜನೆ ಹೊಸ ಅಪ್ಡೇಟ್

ರೈತರ ಎಲ್ಲಾ ಸಮಸ್ಯೆಗಳನ್ನು ಗಮನಿಸಿರುವ ರಾಜ್ಯ ಸರ್ಕಾರ ಗೊಂದಲ ಒಂದು ರೀತಿಯಲ್ಲಿ ರೈತರಿಗೆ ಸಹಾಯವಾಗುವಂತೆ ಯೋಜನೆಗಳನ್ನು ರೂಪಿಸಿದೆ. ಇದೀಗ ಸಿರಿಧಾನ್ಯ ಬೆಳೆ ಪ್ರೋತ್ಸಾಹಿಸುವ ಮುಟ್ಟಿನಲ್ಲಿ 10,000 ನೀಡುತ್ತಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

Good news from the government for farmers who have an acre of agricultural land

Our Whatsapp Channel is Live Now 👇

Whatsapp Channel

Related Stories