Karnataka NewsBengaluru News

ಅನ್ನಭಾಗ್ಯ ಯೋಜನೆಯ ಮಹತ್ವದ ಅಪ್ಡೇಟ್; ಸ್ಕೀಮ್ ನಲ್ಲಿ ಧಿಡೀರ್ ಬದಲಾವಣೆ

ಅನ್ನಭಾಗ್ಯ ಯೋಜನೆ (Annabhagya scheme) ಯ ಅಡಿಯಲ್ಲಿ ಪ್ರತಿಯೊಬ್ಬ ಫಲಾನುಭವಿ ಖಾತೆಗೆ (Bank Account) ಪ್ರತಿ ತಿಂಗಳು ಹಣ ವರ್ಗಾವಣೆ (DBT) ಮಾಡಲಾಗುತ್ತಿದೆ. ಈಗಾಗಲೇ ಐದು ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ.

ಹೆಚ್ಚುವರಿ ಅಕ್ಕಿಯನ್ನು ಇದುವರೆಗೆ ಒದಗಿಸಲು ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ (Money Transfer) ಪ್ರಕ್ರಿಯೆ ಮುಂದುವರೆದಿದೆ ಎನ್ನಬಹುದು.

Annabhagya Yojana Fund has been deposited, check your DBT status

ಅನ್ನಭಾಗ್ಯ ಯೋಜನೆ ಹಣ ಬಂತಾ? ಸ್ಟೇಟಸ್ ಈ ರೀತಿ ತೋರಿಸಿದ್ರೆ ಹಣ ಬರೋಲ್ಲ

ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ವೈಯಕ್ತಿಕವಾಗಿ ಮುತುವರ್ಜಿ ತೆಗೆದುಕೊಂಡ ಅನ್ನಭಾಗ್ಯ ಯೋಜನೆಯನ್ನು ರಾಜ್ಯದ ಜನತೆಗೆ ಒದಗಿಸಿದ್ದಾರೆ. 5 ಕೆಜಿ ಉಚಿತ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಇದರ ಜೊತೆಗೆ ಇನ್ನೂ ಐದು ಕೆಜಿ ಸೇರಿಸಿ 10 ಕೆಜಿ ಉಚಿತ ಅಕ್ಕಿಯನ್ನು ಫಲಾನುಭವಿಗಳಿಗೆ ನೀಡುವ ಆಕಾಂಕ್ಷೆಯನ್ನು ಹೊಂದಿದ್ದ ಸರ್ಕಾರ ಇದನ್ನ ಈಡೇರಿಸಲು ಸಾಧ್ಯವಾಗಿಲ್ಲ.

ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಫಲಾನುಭವಿಗೂ ಕೂಡ ಒಂದು ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ 5 ಕೆಜಿ ಅಕ್ಕಿಗೆ 170ಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ನೀವು ಆಹಾರ ಇಲಾಖೆಯ (Food department) ಅಧಿಕೃತ ವೆಬ್ಸೈಟ್ ಮೂಲಕ ನಿಮಗೆ ಇದುವರೆಗೆ ಎಷ್ಟು ಹಣ ಬಂದಿದೆ ಪ್ರತಿಯೊಬ್ಬ ಸದಸ್ಯನ ಹೆಸರಿಗೂ ಹಣ ವರ್ಗಾವಣೆ ಆಗಿದೆಯೋ ಎಲ್ಲವೂ ಎಂಬುದನ್ನು ತಿಳಿದುಕೊಳ್ಳಬಹುದು.

ಈ ಕಾರ್ಡ್ ನಂಬರ್ ಬಳಸಿ ಗೃಹಲಕ್ಷ್ಮಿ ಯೋಜನೆ ಹಣ ಬಂತಾ ಇಲ್ವಾ? ನೋಡಬಹುದು

ಈ ಕೆಲಸ ಮಾಡಿದರೆ ಹಣ ಬರುತ್ತೆ!

ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಇನ್ನು ಮುಂದೆ ಬರಲು ಪೂರ್ವ ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಉಪ ನಿರ್ದೇಶಕರಾದ ಸಕೀನ ತಿಳಿಸಿದ್ದಾರೆ.

Annabhagya Schemeಫಲಾನುಭವಿಗಳು ಕುಟುಂಬದ ಸದಸ್ಯರು ಹಾಗೂ ಯಜಮಾನರ ಆಧಾರ್ ಕಾರ್ಡ್ ಲಿಂಕ್ (Aadhaar link) ಸರಿಯಾಗಿ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು.

ಒಂದು ವೇಳೆ ಈ ಕೆವೈಸಿ (E-KYC) ಆಗದೆ ಇದ್ದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಮಾಡಿಸಿಕೊಳ್ಳಲು ಅವಕಾಶ ಇದೆ. ಪಡಿತರ ಚೀಟಿ ಹೊಂದಿರುವ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು ಜೊತೆಗೆ ಮನೆಯ ಪ್ರತಿಯೊಬ್ಬ ಸದಸ್ಯರ ಬ್ಯಾಂಕಿಗೂ ಕೂಡ ಕೆವೈಸಿ ಆಗಿರುವುದು ಕಡ್ಡಾಯ.

ಇನ್ನು ಎರಡನೆಯದಾಗಿ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದೆ ಇದ್ದಲ್ಲಿ ಹೊಸದಾಗಿ ಪೋಸ್ಟ್ ಆಫೀಸ್ (post office) ಲ್ಲಿ ಐಬಿಪಿಬಿ ಖಾತೆ (IBPB account) ಯನ್ನು ತೆರೆಯಬಹುದು. ಈ ಎಲ್ಲ ಪೂರಕ ಪರಿಶೀಲನೆಗಳನ್ನು ಮಾಡಿಕೊಳ್ಳುವುದರ ಮೂಲಕ ಅನ್ನಭಾಗ್ಯ ಯೋಜನೆ ಆ ಹಣ ಖಾತೆಗೆ ಬರುವಂತೆ ಮಾಡಿಕೊಳ್ಳುವುದು.

ಮನೆ ಇಲ್ಲದವರಿಗೆ ಆಶ್ರಯ ಯೋಜನೆಯಡಿ ಉಚಿತ ಸೈಟ್ ಹಂಚಿಕೆ! ಅರ್ಜಿ ಹಾಕಿ

ದೂರು ಸಲ್ಲಿಸಿ! (Register your complaint)

ಇದುವರೆಗೆ ನಿಮಗೆ ಅನ್ನ ಭಾಗ್ಯ ಯೋಜನೆ ಹಣ ಸಲ್ಲಿಕೆ ಆಗದೆ ಇದ್ದಲ್ಲಿ ಆಹಾರ, ನಾಗರಿಕ ಸರಬರಾಜು ಉಪನಿರ್ದೇಶಕರ ಕಚೇರಿ ಭೇಟಿ ಕೊಟ್ಟು ಸಮಸ್ಯೆಯನ್ನು ತಿಳಿಸಿ ಪರಿಹಾರ ಕಂಡುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಕರೆ ಮಾಡಿ. ದೂರವಾಣಿ ಸಂಖ್ಯೆ 08392-272557

Important Update on Annabhagya Yojana, changes in the scheme

Our Whatsapp Channel is Live Now 👇

Whatsapp Channel

Related Stories