Karnataka NewsBengaluru News

5 ಯೋಜನೆಗಳ ಜೊತೆಗೆ ಬಡವರಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ! ಹೊಸ ನಿರ್ಧಾರ

ನಮ್ಮ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ರಾಜ್ಯದ ಬಡಜನತೆಗಾಗಿ ಸಾಕಷ್ಟು ಹೊಸ ಯೋಜನೆಗಳನ್ನು (Govt Schemes) ಜಾರಿಗೆ ತರುತ್ತಲೇ ಇದೆ. ಈಗಾಗಲೇ 5 ಯೋಜನೆಗಳಲ್ಲಿ 4 ಯೋಜನೆಗಳನ್ನು ಬಹುತೇಕ ಜಾರಿಗೆ ತಂದಿದ್ದು, ಇನ್ನೊಂದು ಯೋಜನೆ ಡಿಸೆಂಬರ್ ಇಂದ ಜಾರಿಗೆ ಬರಲಿದೆ.

ಇದರ ಜೊತೆಗೆ ಜನರಿಗಾಗಿ ಸರ್ಕಾರವು ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಹಿಂದೆ ಇದ್ದ ಇಂದಿರಾ ಕ್ಯಾಂಟೀನ್ (Indira Canteen) ಮುಚ್ಚಿಹೋಗಿತ್ತು. ಇಂದಿರಾ ಕ್ಯಾಂಟೀನ್ ಶುರುವಾಗಿದ್ದು, ಬಡವರಿಗೆ, ಕೂಲಿ ಕಾರ್ಮಿಕರಿಗೆ ಅತಿಕಡಿಮೆ ಬೆಲೆಯಲ್ಲಿ ಆಹಾರ ಸೇವೆ ಸಿಗಲಿದೆ

State government new decision for poor along with 5 schemes

ಆದರೆ ಇಂದಿರಾ ಕ್ಯಾಂಟೀನ್ ಎಲ್ಲಾ ಕಡೆ ಮುಚ್ಚಿ ಹೋಗಿತ್ತು, ಇನ್ನುಮುಂದೆ ಇಂದಿರಾ ಕ್ಯಾಂಟೀನ್ ಅನ್ನು ಮತ್ತೆ ಶುರು ಮಾಡುವ ಯೋಜನೆಯ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ಗೃಹಲಕ್ಷ್ಮಿ ಯೋಜನೆ ನಂತರ ಮಹಿಳೆಯರಿಗಾಗಿ ಸರ್ಕಾರದಿಂದ ಹೊಸ ಯೋಜನೆ! ಇಂದೇ ಅಪ್ಲೈ ಮಾಡಿ

ಇನ್ನು 1 ರಿಂದ 9ನೇ ತರಗತಿ ವರೆಗಿನ ಶಾಲಾ ಮಕ್ಕಳ ವಿಚಾರದಲ್ಲಿ ಕೂಡ ಸರ್ಕಾರ ಈಗ ಹೊಸದೊಂದು ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗುತ್ತಿದ್ದು, ಇದನ್ನು ಕೇಳಿ ಶಾಲೆಯ ಮಕ್ಕಳಿಗೆ ಮತ್ತು ತಂದೆ ತಾಯಿಗಳಿಗೆ ಬಹಳ ಸಂತೋಷವಾಗಿದೆ.

ಮಕ್ಕಳ ಶಿಕ್ಷಣದ ಮಟ್ಟ ಹೆಚ್ಚಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮೊದಲಿಗೆ ಇಂದಿರಾ ಕ್ಯಾಂಟೀನ್ ವಿಚಾರದ ಬಗ್ಗೆ ಹೇಳುವುದಾದರೆ, ಈಗ ಇರುವ ಇಂದಿರಾ ಕ್ಯಾಂಟೀನ್ ಗಳ ಜೊತೆಗೆ ಹೊಸದಾಗಿ 188 ಇಂದಿರಾ ಕ್ಯಾಂಟೀನ್ ಗಳನ್ನು ಖಾಸಗಿ ಮಾಲೀಕತ್ವದಲ್ಲಿ ನಿರ್ಮಾಣ ಮಾಡಬೇಕು ಎಂದು ನಿರ್ಧಾರ ಮಾಡಲಾಗಿದೆ. ಜೊತೆಗೆ ಇಲ್ಲಿ ಊಟದ ಬೆಲೆಯ ಬಗ್ಗೆ ಚಿಂತನೆ ನಡೆಸಲಾಗಿದ್ದು, ಕೆಲವು ಮೂಲಗಳ ಪ್ರಕಾರ ಊಟದ ಬೆಲೆಯಲ್ಲಿ ಇಳಿಕೆ ಆಗಬಹುದು ಎನ್ನಲಾಗಿತ್ತು..

Indira Canteen Re Openಆದರೆ ಸರ್ಕಾರದಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಇಂದಿರಾ ಕ್ಯಾಂಟೀನ್ (Indira Canteen) ಊಟದ ಬೆಲೆ ಅಷ್ಟೇ ಇರಲಿದ್ದು, ಇಲ್ಲಿ ಒಂದು ಊಟಕ್ಕೆ 57 ಇಂದ 62 ರೂಪಾಯಿವರೆಗು ಇರುತ್ತದೆ. ಇಷ್ಟು ಮೊತ್ತವನ್ನು ಭರಿಸಿ ಜನರು ಊಟ ಕೊಂಡುಕೊಂಡು ತಿನ್ನಲು ಕಷ್ಟ ಆಗುವ ಕಾರಣ ಸರ್ಕಾರವೇ ಸಬ್ಸಿಡಿ ರೂಪದಲ್ಲಿ ಹಣ ಭರಿಸುತ್ತದೆ ಎಂದು ಹೇಳಲಾಗುತ್ತಿದೆ. ಈ ನಿರ್ಧಾರದಿಂದಲು ಜನರಿಗೆ ಅನುಕೂಲ ಆಗುತ್ತಿದೆ ಎನ್ನುವುದು ವಿಶೇಷವಾಗಿದೆ.

ಶಕ್ತಿ ಯೋಜನೆ ಬಗ್ಗೆ ಹೊಸ ಅಪ್ಡೇಟ್, ರಾಜ್ಯದ ಪುರುಷರಿಗೂ ಗುಡ್ ನ್ಯೂಸ್ ಕೊಟ್ಟ ಸರ್ಕಾರ! ಇಂದೇ ಅರ್ಜಿ ಹಾಕಿ

ಮತ್ತೆ ಇಂದಿರಾ ಕ್ಯಾಂಟೀನ್ ಶುರುವಾದ ಬಳಿಕ ಬೆಳಗಿನ ಉಪಹಾರ ಬೆಲೆ 5 ರೂಪಾಯಿ, ಮಧ್ಯಾಹ್ನದ ಊಟದ ಬೆಲೆ 10 ರೂಪಾಯಿ, ರಾತ್ರಿ ಊಟದ ಬೆಲೆ 10 ರೂಪಾಯಿ. ಈ ದರದಲ್ಲಿ ಊಟ ಸಿಗುವ ಸಾಧ್ಯತೆ ಇದೆ. ಜೊತೆಗೆ ಇಂದಿರಾ ಕ್ಯಾಂಟೀನ್ ನಲ್ಲಿ ಲಭ್ಯವಿರುವ ಊಟದ ಮೆನು ವನ್ನು ಕೂಡ ಬದಲಾವಣೆ ಮಾಡಬೇಕು ಎಂದು ಸರ್ಕಾರ ಚಿಂತನೆ ನಡೆಸುತ್ತಿದೆ. ಆಯಾ ಊರಿನ ಸ್ಪೆಷಲ್ ಏನಿದೆಯೋ ಆ ತಿಂಡಿಗಳನ್ನು ಕೂಡ ಮೆನುನಲ್ಲಿ ಸೇರಿಸಲು ಚಿಂತನೆ ನಡೆಸಲಾಗಿದೆ.

ಹಾಗೆಯೇ ಊಟದಲ್ಲಿ ಒಂದು ಸಿಹಿ ತಿಂಡಿ ಮತ್ತು ಎರಡು ಪಲ್ಯಗಳನ್ನು ಕೂಡ ಸೇರಿಸಲು ಚಿಂತನೆ ನಡೆಸಲಾಗಿದೆ. ಪ್ರಸ್ತುತ ಇರುವ ಇಂದಿರಾ ಕ್ಯಾಂಟೀನ್ ಗಳ ನವೀಕರಣ ಮಾಡುವುದಕ್ಕಾಗಿ ಸರ್ಕಾರ 21 ಕೋಟಿ ರೂಪಾಯಿಗಳನ್ನು ಮೀಸಲು ಇಟ್ಟಿದೆ. ಇನ್ನುಮುಂದೆ ಬಡವರು ಚಿಂತೆ ಮಾಡದೆ ಅತಿ ಕಡಿಮೆ ಬೆಲೆಯಲ್ಲಿ ಆಹಾರ ಸೇವಿಸಬಹುದು.

State government new decision for poor along with 5 schemes

Our Whatsapp Channel is Live Now 👇

Whatsapp Channel

Related Stories