ಗೃಹಜ್ಯೋತಿ ಫ್ರೀ ವಿದ್ಯುತ್ ಜೊತೆಗೆ ಮತ್ತೊಂದು ಸೌಲಭ್ಯ ನೀಡಲು ಮುಂದಾದ ರಾಜ್ಯ ಸರ್ಕಾರ

ಪ್ರತಿ ತಿಂಗಳು ವಿದ್ಯುತ್ ಬಿಲ್ (Electricity Bill) ಭರಿಸಲು ಸಾಧ್ಯವಾಗದೆ ಇದ್ದ ಲಕ್ಷಾಂತರ ಕುಟುಂಬಗಳು ಇಂದು ಒಂದೇ ಒಂದು ರೂಪಾಯಿ ವಿದ್ಯುತ್ ಬಿಲ್ಲು ಕೂಡ ಪಾವತಿ ಮಾಡಿದೆ ಉಚಿತವಾಗಿ ಗೃಹಜ್ಯೋತಿ ಯೋಜನೆಯ (Gruha Jyothi scheme) ಅಡಿಯಲ್ಲಿ ಪ್ರಯೋಜನ ಪಡೆದುಕೊಳ್ಳುವಂತೆ ಆಗಿದೆ.

- - - - - - - - - - - - - Story - - - - - - - - - - - - -

ರಾಜ್ಯ ಸರ್ಕಾರ (State Government) ಈಗಾಗಲೇ ಸಾಕಷ್ಟು ಮನೆಗಳನ್ನು ಉಚಿತ ವಿದ್ಯುತ್ (Free electricity) ನಿಂದ ಬೆಳಗುತ್ತಿದೆ ಎನ್ನಬಹುದು. ಹಣದುಬ್ಬರದ ಸಮಯದಲ್ಲಿ ಪ್ರತಿ ತಿಂಗಳು ವಿದ್ಯುತ್ ಬಿಲ್ (Electricity Bill) ಭರಿಸಲು ಸಾಧ್ಯವಾಗದೆ ಇದ್ದ ಲಕ್ಷಾಂತರ ಕುಟುಂಬಗಳು ಇಂದು ಒಂದೇ ಒಂದು ರೂಪಾಯಿ ವಿದ್ಯುತ್ ಬಿಲ್ಲು ಕೂಡ ಪಾವತಿ ಮಾಡಿದೆ ಉಚಿತವಾಗಿ ಗೃಹಜ್ಯೋತಿ ಯೋಜನೆಯ (Gruha Jyothi scheme) ಅಡಿಯಲ್ಲಿ ಪ್ರಯೋಜನ ಪಡೆದುಕೊಳ್ಳುವಂತೆ ಆಗಿದೆ.

ಈ ನಡುವೆ ಈಗ ಜನರಿಗೆ ಮತ್ತೊಂದು ಗುಡ್ ನ್ಯೂಸ್ ಅನ್ನು ಸರ್ಕಾರ ನೀಡಿದೆ.

ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತ ತಲೆ ಕೆಡಿಸಿಕೊಳ್ಳಬೇಡಿ! ದೀಪಾವಳಿಗೆ ಬಂಪರ್ ಗಿಫ್ಟ್ ಕೊಟ್ಟ ಸರ್ಕಾರ

After Gruha jyothi free electricity Scheme, another scheme implemented For Farmers

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಿದ್ಯುತ್ ಅಭಾವ!

ಇಷ್ಟು ದಿನ ಎಲ್ಲಾ ಕಡೆ ನೀರಿಗಾಗಿ ಕಷ್ಟ ಪಡುವ ಪರಿಸ್ಥಿತಿ ಇತ್ತು. ಇನ್ನು ಮುಂದೆ ವಿದ್ಯುತ್ ಗಾಗಿಯೂ ಕೂಡ ಜನ ಪರಿತಪಿಸುವ ಹಾಗೆ ಆಗಬಹುದು. ಯಾಕೆಂದರೆ ಈ ಬಾರಿಯ ಮಳೆಯ ಅಭಾವ ವಿದ್ಯುತ್ ಉತ್ಪಾದನೆಯ ಮೇಲೆ ದೊಡ್ಡ ಪರಿಣಾಮ ಬೀರಿದೆ.

15,000 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯನ್ನು ಈಡೇರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಅದರಲ್ಲೂ ಮುಖ್ಯವಾಗಿ ರೈತರು ತಮ್ಮ ಜಮೀನುಗಳಿಗೆ ನೀರುಣಿಸಲು ಪಂಪ್ ಬಳಸಿಕೊಳ್ಳಲು ವಿದ್ಯುತ್ ಬೇಕೇ ಬೇಕು

ಆದರೆ ವಿದ್ಯುತ್ ಅಭಾವದಿಂದ ಈಗಾಗಲೇ ರಾಜ್ಯ ಸರ್ಕಾರ ಲೋಡ್ ಶೆಡ್ಡಿಂಗ್ (load shedding) ಆರಂಭ ಮಾಡಿದ್ದು ಇದರಿಂದ ರೈತರ ಮೇಲೆ ಪರಿಣಾಮ ಬೀರುತ್ತಿದೆ, ಆದರೆ ಈ ಎಲ್ಲಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಹೊಸದೊಂದು ಮಾರ್ಗ ಹುಡುಕಿದೆ.

ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಇದಿಯಾ? ಚೆಕ್ ಮಾಡಿಕೊಳ್ಳಿ! ಯಾಕಂದ್ರೆ ಸಾಕಷ್ಟು ಕಾರ್ಡುಗಳು ರದ್ದಾಗಿವೆ

ವಿದ್ಯುತ್ ಖರೀದಿಗೆ ಚಿಂತನೆ!

Electricity for Farmersರಾಜ್ಯದ ಜನತೆಯ ವಿದ್ಯುತ್ ಬೇಡಿಕೆ ಈಡೇರಿಸುವುದು ರಾಜ್ಯ ಸರ್ಕಾರದ ಕರ್ತವ್ಯ, ಈಗಾಗಲೇ ಉಚಿತ ವಿದ್ಯುತ್ ನೀಡುತ್ತಿರುವುದರಿಂದ ಬೆಸ್ಕಾಂ (BESCOM) ಗೆ ಭಾರಿ ಪ್ರಮಾಣದ ಹೊರೆ ಆಗುತ್ತಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಲು ನಿರ್ಧರಿಸಿದೆ. ಇದರ ಜೊತೆಗೆ ಸಕ್ಕರೆ ಕಾರ್ಖಾನೆಗಳು (sugar factory) ಕೂಡ ಆರಂಭವಾಗಲಿದ್ದು ಅದರಿಂದಲೂ ವಿದ್ಯುತ್ ತಯಾರಿಸಿ ಜನರಿಗೆ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ಮೆಸೇಜ್ ಬಂದಿದ್ರೂ ಗೃಹಲಕ್ಷ್ಮಿ ಯೋಜನೆ ಹಣ ಬಾರದೇ ಇರುವುದಕ್ಕೆ ಇದೇ ಕಾರಣ! ಹೊಸ ಅಪ್ಡೇಟ್

ಇನ್ನು ಲೋಡ್ ಶೆಡ್ಡಿಂಗ್ ಎನ್ನುವುದು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು ಇದರಿಂದ ರೈತರಿಗೆ (farmer) ತೊಂದರೆ ಆಗುತ್ತಿದೆ. ಇದನ್ನ ಗಮನಿಸಿರುವ ಸಿಎಂ ಸಿದ್ದರಾಮಯ್ಯ (CM siddaramaiah) ಅವರು ರೈತರ ಜಮೀನಿಗೆ ಪ್ರತಿದಿನ ಐದು ಗಂಟೆಗಳ ಕಾಲ ನಿರಂತರ ವಿದ್ಯುತ್ ಒದಗಿಸಿ ನೀರಾವರಿಗೆ ಅನುಕೂಲ ಮಾಡಿಕೊಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡುವುದರಿಂದ ಲೋಡ್ ಶೆಡ್ಡಿಂಗ್ ಬಿಸಿ ಸ್ವಲ್ಪಮಟ್ಟಿಗೆ ಕಡಿಮೆ ಆಗಬಹುದು. ಹಾಗಾಗಿ ಉಚಿತ ವಿದ್ಯುತ್ ಪಡೆದುಕೊಂಡಿರುವವರು ಹಾಗೂ ಮುಖ್ಯವಾಗಿ ಗ್ರಾಮೀಣ ಭಾಗದ ರೈತರು ಲೋಡ್ ಶೆಡ್ಡಿಂಗ್ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ.

The government has come forward to provide another facility along with Gruha jyothi free electricity

Related Stories