ರೈತರ ಮಕ್ಕಳ ವಿದೇಶಿ ಶಿಕ್ಷಣಕ್ಕೆ ಸರ್ಕಾರವೇ ನೀಡುತ್ತೆ ಆರ್ಥಿಕ ನೆರವು; ಇಂದೇ ಅಪ್ಲೈ ಮಾಡಿ!
Study Abroad : ವಿದೇಶದಲ್ಲಿ ಹೋಗಿ ಅಧ್ಯಯನ ಮಾಡಬೇಕು (foreign education) ಎನ್ನುವ ಕನಸು, ರೈತರ ಮಕ್ಕಳಿಗೂ ಇರುತ್ತೆ, ರೈತರ ಮಕ್ಕಳಲ್ಲಿ ಸಾಕಷ್ಟು ಪ್ರತಿಭಾನ್ವಿತ ಮಕ್ಕಳು ಇದ್ದಾರೆ, ಹಾಗಾಗಿ ಇಂತಹ ರೈತ ಮಕ್ಕಳ ಕನಸು (farmer children’s dream) ಈಡೇರಿಸುವ ಸಲುವಾಗಿ ರಾಜ್ಯ ಸರ್ಕಾರ ವರ್ಷದಲ್ಲಿ ಕನಿಷ್ಠ ನೂರು ರೈತ ಮಕ್ಕಳಿಗೆ ವಿದೇಶಿ ಶಿಕ್ಷಣ ಕೊಡಿಸಲು ನಿರ್ಧರಿಸಿದೆ
ಕೇಂದ್ರ ಸರ್ಕಾರ (Central government) ದಿಂದ ರಾಜ್ಯ (State government) ಸರ್ಕಾರದ ವರೆಗೆ ರೈತರಿಗಾಗಿ ಬೇರೆ ಬೇರೆ ಯೋಜನೆಗಳನ್ನು ಜಾರಿಗೆ ತಂದು ರೈತರ ಸಬಲೀಕರಣಕ್ಕೆ (farmer’s empowerment) ಪ್ರಯತ್ನಿಸಲಾಗುತ್ತದೆ.
ಗೃಹಲಕ್ಷ್ಮಿ ಹಣ ಒಂದೇ ದಿನದಲ್ಲಿ ಜಮಾ! ಈ ಖಾತೆ ತೆರೆದವರಿಗೆ ತಕ್ಷಣ ಹಣ ಬಂದಿದೆ
ಕೃಷಿ (agriculture) ಬೆಳೆಯನ್ನ ನಂಬಿಕೊಂಡು ಜೀವನ ನಡೆಸುವ ರೈತರು ಕೆಲವೊಮ್ಮೆ ಮಳೆ ಸರಿಯಾಗಿ ಆಗದೆ ಬೆಳೆ ನಷ್ಟ ಅನುಭವಿಸುತ್ತಾರೆ ಇಂತಹ ಸಂದರ್ಭದಲ್ಲಿ ತನ್ನ ಕುಟುಂಬದ ಹೊಟ್ಟೆಹೊರೆಯುವುದಕ್ಕೆ ರೈತರಿಗೆ ಬಹಳ ಕಷ್ಟವಾಗಬಹುದು.
ಇಂತಹ ಪರಿಸ್ಥಿತಿಯಲ್ಲಿ ರೈತರು ತಮ್ಮ ಮಕ್ಕಳಿಗೆ ಸಾಮಾನ್ಯ ಶಿಕ್ಷಣ ಕೊಡಿಸುವುದೇ ದೊಡ್ಡ ವಿಷಯ. ಅಂತದ್ರಲ್ಲಿ ವಿದೇಶಕ್ಕೆ ಕಳುಹಿಸಿ ಶಿಕ್ಷಣ ಕೊಡಿಸುವುದು ದೂರದ ಮಾತು!
ಹಾಗಂದ ಮಾತ್ರಕ್ಕೆ ರೈತರ ಮಕ್ಕಳ ವಿದೇಶ ಶಿಕ್ಷಣ ಕನಸು ಕನಸಾಗಿಯೇ ಉಳಿಯಬೇಕೆ ಎನ್ನುವ ಪ್ರಶ್ನೆ ಕಾಡುತ್ತದೆ! ಇದಕ್ಕೆಲ್ಲ ರಾಜ್ಯ ಸರ್ಕಾರ ಉತ್ತರ ನೀಡಿದೆ. ಈಗಾಗಲೇ ಬಡ ಪ್ರತಿಭಾನ್ವಿತ ಮಕ್ಕಳಿಗೆ ಶಿಕ್ಷಣಕ್ಕೆ ಉತ್ತೇಜನ ನೀಡುವ ಸಲುವಾಗಿ ಆರಂಭಿಸಲಾಗಿರುವ ವಿದ್ಯಾ ನಿಧಿ ಯೋಜನೆ (Vidya nidhi scheme) ಯನ್ನು ಇನ್ನಷ್ಟು ವಿಸ್ತರಿಸಿ ವರ್ಷದಲ್ಲಿ ಕನಿಷ್ಠ 100 ರೈತರ ಮಕ್ಕಳನ್ನು ವಿದೇಶಕ್ಕೆ ಕಳುಹಿಸಿ ಶಿಕ್ಷಣ ಕೊಡಿಸುವ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ.
ಉಚಿತ ಅಕ್ಕಿ, ಗೃಹಲಕ್ಷ್ಮಿ ಹಣ ಪಡೆಯೋಕೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡಿ!
ವಿದ್ಯಾನಿಧಿ ಆರ್ಥಿಕ ಸಹಾಯ!
ಈ ಯೋಜನೆಗಾಗಿ ವರ್ಷಕ್ಕೆ ಸುಮಾರು 100 ಕೋಟಿ ರೂಪಾಯಿಗಳನ್ನು ಸರ್ಕಾರ ಮೀಸಲಿಟ್ಟಿದೆ. ಯಾವುದೇ ರೀತಿಯ ಸಂಶೋಧನೆ ಅಥವಾ ಇತರ ಉನ್ನತ ಶಿಕ್ಷಣಕ್ಕೆ (higher education) ಹೋಗಲು ಬಯಸುವ ರೈತರ ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಇಲ್ಲಿ ವಿದೇಶ ಶಿಕ್ಷಣಕ್ಕೆ ಸಂಪೂರ್ಣ ಹಣ ಸಹಾಯವನ್ನು ಸರ್ಕಾರವೇ ನೀಡುತ್ತದೆ.
ಉಚಿತ ಮನೆ ಪಡೆದುಕೊಳ್ಳಲು ಈಗಲೇ ಅರ್ಜಿ ಹಾಕಿ! ಸರ್ಕಾರದಿಂದ ಹೊಸ ಯೋಜನೆ
ಕೆಲವು ಷರತ್ತುಗಳ ಮೇಲೆ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಿ ರೈತರ ಕುಟುಂಬದ ಪ್ರತಿಭಾನ್ವಿತ ಮಕ್ಕಳು ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ (higher education in foreign) ಮಾಡಲು ಸರ್ಕಾರವೇ ಹಣ ನೀಡಲಿದೆ
ಮುಂದಿನ ಬಜೆಟ್ (budget) ನಲ್ಲಿ ಈ ವಿಚಾರದ ಬಗ್ಗೆ ಪ್ರಸ್ತಾವನೆ ಮಾಡಲಿದ್ದಾರೆ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಈ ಯೋಜನೆಗೆ ಅನುಮೋದನೆ ಸಿಕ್ಕ ತಕ್ಷಣ ರೈತರ ಮಕ್ಕಳ ವಿದೇಶದಲ್ಲಿ ಶಿಕ್ಷಣ ಪಡೆದುಕೊಳ್ಳಬೇಕು ಎನ್ನುವ ಕನಸು ಈಡೇರಲಿದೆ.
ಈ ಬಗ್ಗೆ ಭರವಸೆ ನೀಡಿರುವ ಸರ್ಕಾರ ಸದ್ಯದಲ್ಲಿಯೇ ರೈತರ ಮಕ್ಕಳ ವಿದೇಶದಲ್ಲಿನ ಉನ್ನತ ಶಿಕ್ಷಣಕ್ಕೆ ನೆರವು ನೀಡುವಂತಹ ವಿದ್ಯಾನಿಧಿ ಯೋಜನೆಯ ಬಗ್ಗೆ ಇನ್ನಷ್ಟು ಅಪ್ಡೇಟ್ ಕೊಡಲಿದೆ.
ಎಪಿಎಲ್, ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದವರಿಗೆ ಹೊಸ ಆದೇಶ
The government provides financial assistance for foreign education of farmers children