ಮನೆಯಲ್ಲಿ ಹಸು ಮೇಕೆ ಜಾನುವಾರು ಸಾಕುವವರಿಗೆ ಸರ್ಕಾರದಿಂದ ಸಿಗುತ್ತೆ ಈ ಬೆನಿಫಿಟ್; ಅರ್ಜಿ ಸಲ್ಲಿಸಿ
ಹಳ್ಳಿಗಳಲ್ಲಿಯೂ ಜಾನುವಾರು ಸಾಕಾಣಿಕೆ ನಶಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ (state government)ಜಾನುವಾರು ಸಾಕಲು ರೈತರಿಗೆ ಪ್ರೋತ್ಸಾಹವನ್ನು ನೀಡುತ್ತಿದೆ, ಈ ಹಿನ್ನೆಲೆಯಲ್ಲಿ ರೈತರಿಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಕೂಡ ಮಾಡಿಕೊಡುತ್ತಿದೆ.
ಸದ್ಯ ರಾಜ್ಯ ಸರ್ಕಾರ ಮನೆಯಲ್ಲಿ ಹಸು ಮತ್ತು ಮೇಕೆ ಸಾಕುವವರಿಗೆ (goat farming) ಹೊಸ ಯೋಜನೆಯನ್ನು (Scheme) ಜಾರಿಗೆ ತಂದಿದ್ದು ಇದರಿಂದ ಸಾಕಷ್ಟು ರೈತರು (Farmer) ಪ್ರಯೋಜನ ಪಡೆದುಕೊಳ್ಳಬಹುದು.
ಶಕ್ತಿ ಯೋಜನೆ ಅಪ್ಡೇಟ್! ಇನ್ಮುಂದೆ ರಾಜ್ಯದ ಈ ಬಸ್ಸುಗಳಲ್ಲಿ ಗೃಹಿಣಿಯರಿಗೆ ಉಚಿತ ಪ್ರಯಾಣ ಇಲ್ಲ
ಅನುಗ್ರಹ ಯೋಜನೆ; (Anugraha Yojana)
202324ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಅನುಗ್ರಹ ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆಯ ಅಡಿಯಲ್ಲಿ ಆಕಸ್ಮಿಕವಾಗಿ ಹಸು ಅಥವಾ ಆಡು ಹಾಗೂ ಮೇಕೆ ಕುರಿಗಳು ಮರಣ ಹೊಂದಿದರೆ (unexpected animal death) ಅದಕ್ಕೆ ಸರ್ಕಾರದಿಂದ ಪರಿಹಾರ ಹಣ (compensation) ಸಿಗುತ್ತದೆ.
ಆಡು ಮತ್ತು ಕುರಿಗಳ ಆಕಸ್ಮಿಕ ಮರಣಕ್ಕೆ ಗರಿಷ್ಠ ಐದು ಸಾವಿರ ರೂಪಾಯಿಗಳು ಸಿಕ್ಕರೆ ಹಸು ಆಕಸ್ಮಿಕವಾಗಿ ಮರಣ ಹೊಂದಿದರೆ 10,000 ವರೆಗೆ ಪರಿಹಾರವನ್ನು ಕರ್ನಾಟಕ ಸರ್ಕಾರ ನೀಡುತ್ತದೆ.
ಹಲವು ವರ್ಷಗಳಿಂದ ಇಂತಹ ಸರ್ಕಾರಿ ಜಾಗದಲ್ಲಿ ಇದ್ದವರಿಗೆ ಸಿಹಿಸುದ್ದಿ! ಹಕ್ಕು ಪತ್ರ ವಿತರಣೆ
ಪರಿಹಾರ ಮೊತ್ತ ಪಡೆಯುವುದು ಹೇಗೆ!
ಕಳೆದ ಕೆಲವು ವರ್ಷಗಳಲ್ಲಿ ಜಾನುವಾರುಗಳು ಗುರುತಿಸಲಾಗದ ಕೆಲವು ಕಾಯಿಲೆಗಳಿಂದ ಆಕಸ್ಮಿಕ ಮರಣ ಹೊಂದುತ್ತಿವೆ. ಇದ ರಿಂದ ರೈತರಿಗೆ ಬಹಳ ದೊಡ್ಡ ನಷ್ಟವೇ ಆಗಿತ್ತು.
ಅದೆಷ್ಟೋ ಜನರಿಗೆ ಇನ್ನೂ ಜಾನುವಾರು ಸಾಕಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಷ್ಟವಾಗಿದೆ. ಇದನ್ನು ಗಮನಿಸಿರುವ ರಾಜ್ಯ ಸರ್ಕಾರ ಆಕಸ್ಮಿಕವಾಗಿ ರೈತರುಸಾಕಿದ ಜಾನುವಾರು ಮರಣ ಹೊಂದಿದರೆ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡಲು ಅನುಗ್ರಹ ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಜಾನುವಾರು ಮಾಲೀಕರು ಮೃತಪಟ್ಟ ಜಾನುವಾರ ಗಳ ಮರಣೋತ್ತರ ಪರೀಕ್ಷೆ (postmortem) ನಡೆಸಿ ಸ್ಥಳೀಯ ಪಶು ವೈದ್ಯರಿಂದ (veterinary doctor) ದೃಢೀಕರಣ ಪ್ರಮಾಣ ಪತ್ರವನ್ನು ಒದಗಿಸಬೇಕು.
*ಮೇಕೆ ಕುರಿ ಹಾಡು ಮೊದಲಾದವುಗಳ ಪರೀಕ್ಷೆ ನಡೆಸಿ ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ತೆಗೆದ ಛಾಯಾಚಿತ್ರಗಳನ್ನು (photos) ಕೂಡ ಪಶು ವೈದ್ಯರು ಹಾಗೂ ಫಲಾನುಭವಿ ಜೊತೆಗೆ ಇರುವ ಫೋಟೋವನ್ನು ಕೂಡ ತೆಗೆದುಕೊಳ್ಳಬೇಕು.
*ಮರಣಿಸಿದ ಕುರಿ ಅಥವಾ ಮೇಕೆಯ ಶವ ಪರೀಕ್ಷೆ ನಡೆಸಿದ ಪಶು ವೈದ್ಯರೇ ವೈಯಕ್ತಿಕವಾಗಿ ಜವಾಬ್ದಾರರಾಗಿರುತ್ತಾರೆ.
ಗೃಹಲಕ್ಷ್ಮಿ ಯೋಜನೆಯ ಎರಡೂ ಕಂತಿನ ಹಣ ನಾಳೆಯೇ ಬಿಡುಗಡೆ! ಇಂತಹ ಗೃಹಿಣಿಯರಿಗೆ ಮಾತ್ರ
*ಮರಣೋತ್ತರ ವರದಿಯಲ್ಲಿ ಫಲಾನುಭವಿಗಳ ಪೂರ್ಣ ವಿಳಾಸ ಆತನ ಜಾನುವಾರು ಮೃತಪಟ್ಟ ಸಂಖ್ಯೆ ದಿನಾಂಕ ಜಾನುವಾರುವಿನ ವಯಸ್ಸು ಜಾನುವಾರು ಮೃತಪಟ್ಟ ಕಾರಣ ಎಲ್ಲವನ್ನು ಸರಿಯಾಗಿ ನಮೂದಿಸಬೇಕು.
*ಇದರ ಜೊತೆಗೆ ಮರಣೋತ್ತರ ಪರೀಕ್ಷೆಯ ವರದಿ ಮೇಲೆ ತಿಳಿಸಿದ ಭಾವಚಿತ್ರಗಳು ಫಲಾನುಭವಿಗಳ ಅರ್ಜಿ ಆಧಾರ್ ಲಿಂಕ್ (Aadhaar link) ಹಾಗೂ ಈಕೆವೈಸಿ (EKYC) ಆಗಿರುವ ಬ್ಯಾಂಕ್ ಖಾತೆ ವಿವರಗಳು, ಫಲಾನುಭವಿಗಳ ಸಹಿ ಪೂರ್ಣ ವಿಳಾಸ, ವೈದ್ಯರ ವಿವರ ಸ್ವಯಂ ಪ್ರಮಾಣ ಪತ್ರ ಮೊದಲಾದ ದಾಖಲೆಗಳನ್ನು ಜಿಲ್ಲಾ ಅನುಷ್ಠಾನ ಅಧಿಕಾರಿಗಳಿಗೆ ಸಲ್ಲಿಸಬೇಕು.
*ಜಿಲ್ಲಾ ಅನುಷ್ಠಾನ ಅಧಿಕಾರಿಗಳು ಫಲಾನುಭವಿಗಳ ಅರ್ಜಿಯನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಪರಿಹಾರದ ಮೊತ್ತವನ್ನು ನೀಡುತ್ತಾರೆ. ಮೇಕೆ ಹಾಡು ಕುರಿ ಎಂತಹ ಜಾನುವಾರುಗಳು ಆಕಸ್ಮಿಕವಾಗಿ ಮರಣ ಹೊಂದಿದರೆ ತಲಾ 5,000 ರೂ.ಹಾಗೂ ಹಸು ಮತ್ತು ಎಮ್ಮೆ ಆಕಸ್ಮಿಕ ಮರಣ ಹೊಂದಿದರೆ 10 ಸಾವಿರ ರೂಪಾಯಿಗಳನ್ನು ಪರಿಹಾರವಾಗಿ ಪಡೆಯಬಹುದು.
This benefit is given by the government to those who keep cows and goats at home