ಕಂಠಪೂರ್ತಿ ಕುಡಿದು ಜಗ್ಗೇಶ್ ಮಧ್ಯರಾತ್ರಿಯಲ್ಲಿ ಅಂಬರೀಶ್ ಮನೆಗೆ ನುಗ್ಗಿದ್ಯಾಕೆ? ಅಂಬರೀಶ್ ಅಂದು ಮಾಡಿದ್ದೇನು ಗೊತ್ತಾ?
ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಪ್ರಚಾರದ ಕೆಲಸದಲ್ಲಿ ತೊಡಗಿಕೊಂಡಿರುವಂತಹ ಜಗ್ಗೇಶ್ ಅವರು ಸಂದರ್ಶನ ಒಂದರಲ್ಲಿ ಯಾರಿಗೂ ತಿಳಿಯದಂತಹ ಮಾಹಿತಿ ಒಂದನ್ನು ಹಂಚಿಕೊಂಡಿದ್ದಾರೆ
ಸ್ನೇಹಿತರೆ ನವರಸ ನಾಯಕ ಜಗ್ಗೇಶ್ (Actor Jaggesh) ಅವರು ತಮ್ಮ ಅತ್ಯದ್ಭುತ ಹಾಸ್ಯ ಪ್ರತಿಭೆಯ ಮೂಲಕ ಹಲವಾರು ದಶಕಗಳಿಂದ ಕನ್ನಡ ಸಿನಿಮಾ (Kannada Cinema) ರಂಗದಲ್ಲಿ ಸಕ್ರಿಯರಾಗಿ ಇಂದಿಗೂ ಕೂಡ ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ಬಹು ಬೇಡಿಕೆಯನ್ನು ಪಡೆದುಕೊಂಡಿದ್ದಾರೆ.
ಹೀಗಿರುವಾಗ ಸದ್ಯ ತಮ್ಮ ರಾಘವೇಂದ್ರ ಸ್ಟೋರ್ಸ್ (Raghavendra Stores Cinema Promotion) ಸಿನಿಮಾದ ಪ್ರಚಾರದ ಕೆಲಸದಲ್ಲಿ ತೊಡಗಿಕೊಂಡಿರುವಂತಹ ಜಗ್ಗೇಶ್ ಅವರು ಸಂದರ್ಶನ ಒಂದರಲ್ಲಿ ಯಾರಿಗೂ ತಿಳಿಯದಂತಹ ಮಾಹಿತಿ ಒಂದನ್ನು ಹಂಚಿಕೊಂಡಿದ್ದಾರೆ.
ಸರಿಗಮಪ ಸೀಸನ್ 19ರ ನಿರೂಪಣೆಗೆ ಅನುಶ್ರೀ ಪಡೆದ ಸಂಭಾವನೆಯ ಹಣ ಎಷ್ಟು ಗೊತ್ತಾ?
ಹೌದು ಗೆಳೆಯರೇ ಅದೊಂದು ದಿನ ಬಹಳಾನೇ ಬೇಸರವಾಗಿ ಜಗ್ಗೇಶ್ ಅವರು ಕಂಠಪೂರ್ತಿ ಕುಡಿದು ಮಧ್ಯರಾತ್ರಿ ಅಂಬರೀಶ್ (Rebel Star Ambarish) ಅವರ ಮನೆಗೆ ನುಗ್ಗಿದ್ರಂತೆ. ಅನಂತರ ಏನಾಯ್ತು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ.
ಹೌದು ಗೆಳೆಯರೇ ಸಿನಿಮಾ ರಂಗಕ್ಕೆ ಜಗ್ಗೇಶ್ ಅವರು ಕಾಲಿಟ್ಟಂತಹ ಆರಂಭಿಕ ದಿನಗಳಲ್ಲಿ ಕೇವಲ ಪೋಷಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದರಂತೆ. ಇದನ್ನು ಗಮನಿಸಿದಂತಹ ಅಂಬರೀಶ್ ಅವರು ಬೇರೆಯವರ ಸಿನಿಮಾದಲ್ಲಿ ನೀನು ಸೆಕೆಂಡ್ ಆಕ್ಟರ್ ಆಗಿ ನಟಿಸುವ ಬದಲು ನೀನೇ ಹೀರೋ ಅಗೂ ಎಂದರಂತೆ.
ತೆಲುಗಿನ ಅರುಂಧತಿ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು ಎಂದ ಪ್ರೇಮ! ಅವಕಾಶ ಕೈ ತಪ್ಪಿ ಹೋಗಲು ಕಾರಣವೇನು ಗೊತ್ತಾ?
ಇದಾದ ಬಳಿಕ ಜಗ್ಗೇಶ್ ಅವರಿಗೆ ಉಪೇಂದ್ರ (Real Star Upendra) ಅವರ ನಿರ್ದೇಶನದಲ್ಲಿ ಮೂಡಿ ಬಂದ ತರ್ಲೆ ನನ್ ಮಗ ಸಿನಿಮಾದಲ್ಲಿ (Tharle Nan Maga Movie) ನಟಿಸುವ ಅವಕಾಶ ಸಿಕ್ತು, ನಂತರ ಅಂಬರೀಶ್ ಅವರು ನೀಡಿದ ಮಾರ್ಗದರ್ಶನದಂತೆ ತಮ್ಮ ಬಳಿ ಇದ್ದಂತಹ 5 ಲಕ್ಷ ಹಾಗೂ ತಮ್ಮ ಸಹೋದರನ ಬಳಿ 5 ಲಕ್ಷ ಹಣವನ್ನು ಸಾಲ ಪಡೆದು ತಾವೇ ಚಿತ್ರಕಥೆ ಬರೆದು ನಾಯಕನಟನಾಗಿ ಬಂಡ ನನ್ನ ಗಂಡ ಎಂಬ ಸಿನಿಮಾ ಮಾಡಿದರಂತೆ.
ಆದರೆ ಈ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ಬಹು ದೊಡ್ಡ ಎಡವಟ್ಟಾಗುತ್ತದೆ. ಹೌದು ಗೆಳೆಯರೇ ಸಿನಿಮಾ ಬಿಡುಗಡೆ ಮಾಡಲು ಮತ್ತೆ ನಾಲ್ಕು ಲಕ್ಷ ಹಣವನ್ನು ಡಿಮ್ಯಾಂಡ್ ಮಾಡುತ್ತಾರೆ. ಇದರಿಂದ ಬೇಸರಗೊಂಡು ಕಂಠಪೂರ್ತಿ ಕುಡಿದು ಅಂಬರೀಶ್ ಅವರ ಮನೆಗೆ ಮಧ್ಯರಾತ್ರಿ ಜಗ್ಗೇಶ್ ಹೋಗುತ್ತಾರೆ. ಆ ಸಮಯದಲ್ಲಿ ಅಂಬರೀಶ್ ಅವರು ರಾಜಕೀಯದ ಕುರಿತಾಗಿ ಸಚಿವರ ಜೊತೆ ಸಭೆ ನಡೆಸುತ್ತಿದ್ದರು.
ಅಂತಹ ಸಂದರ್ಭದಲ್ಲಿ ಜಗ್ಗೇಶ್ ಕುಡಿದು ಬಂದಿದ್ದನ್ನು ನೋಡಿ ಅಂಬರೀಶ್ ಬೈದರಂತೆ. ಅಲ್ಲದೆ ವಿಷ್ಣುವರ್ಧನ್ ಅವರ ಬಳಿ ಕಳುಹಿಸಿ ಈ ಕುರಿತು ಹೇಳುವಂತೆ ಹೇಳಿದ್ರಂತೆ. ಅದರಂತೆ ಜಗ್ಗೇಶ್ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿ ಎಲ್ಲಾ ಮಾಹಿತಿಯನ್ನು ಹಂಚಿಕೊಂಡಾಗ ಸ್ವತಃ ವಿಷ್ಣುವರ್ಧನ್ ಅವರೇ ತಮ್ಮ ನಾಲ್ಕು ಲಕ್ಷ ಹಣವನ್ನು ಬಂಡ ನನ್ನ ಗಂಡ ಸಿನಿಮಾ ಗೆ ನೀಡಿದರಂತೆ..
ಸಿನಿಮಾ ಬಹುದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತದೆ, ಕೇವಲ 14 ಲಕ್ಷದಲ್ಲಿ ತಯಾರಾದಂತಹ ಈ ಸಿನಿಮಾ 60 ಕೋಟಿ ಹಣವನ್ನು ಗಳಿಸುತ್ತದೆ ಆನಂತರ ಜಗ್ಗೇಶ್ ಮತ್ತೆಂದೂ ಹಿಂದಿರುಗಿ ನೋಡಿಯೇ ಇಲ್ಲ. ಇಂದಿಗೂ ಸಹ ನವರಸ ನಾಯಕ ಜಗ್ಗೇಶ್ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಅಲ್ಲದೆ ಅವರು ರಿಯಾಲಿಟಿ ಶೋಗಳ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.
Actor Jaggesh Shares Old Memories in Raghavendra Stores Cinema Promotion Goes Viral
Follow us On
Google News |