ರವಿಚಂದ್ರನ್ ಅವರ ಕನಸಿನ ಕೂಸಾಗಿದ್ದ ಶಾಂತಿ ಕ್ರಾಂತಿ ಸಿನಿಮಾ ಸೋಲಿಗೆ ಕಾರಣವೇನು ಗೊತ್ತಾ? ಈ ಚಿತ್ರಕ್ಕೆ ರವಿಮಾಮ ಹೂಡಿದ್ದ ಬಂಡವಾಳ ಎಷ್ಟು?
ಶಾಂತಿ ಕ್ರಾಂತಿ ಸಿನಿಮಾದ ನಟನೆಯಿಂದ ಹಿಡಿದು ಸಿನಿಮಾದ ನಿರ್ಮಾಣ, ಕಥೆ ಮತ್ತು ಸಂಭಾಷಣೆ, ನಿರ್ದೇಶನ, ಕಥೆಯ ಬರವಣಿಗೆ ಎಲ್ಲವೂ ರವಿಚಂದ್ರನ್ ಅವರೇ ಮಾಡಿದ್ದರು. ಇದಕ್ಕೆ ನಟಿ ಜೂಹಿ ಚಾವ್ಲಾ ಮತ್ತು ಖುಷ್ಬೂ ಜೊತೆಯಾಗಿ ಸಾತ್ ನೀಡಿದರು.
ನಟ ಕ್ರೇಜಿ ಸ್ಟಾರ್ ರವಿಚಂದ್ರನ್ (Actor Ravichandran) ಅವರ ಸಾಲು ಸಾಲು ಅದ್ಭುತ ಸಿನಿಮಾಗಳಲ್ಲಿ ಶಾಂತಿ ಕ್ರಾಂತಿ ಸಿನಿಮಾ (Shanti Kranti Kannada movie) ಕೂಡ ಒಂದು. ಪ್ರೇಮಲೋಕದ ಮೂಲಕ ಚರಿತ್ರೆ ಸೃಷ್ಟಿ ಮಾಡಿದಂತಹ ರವಿಮಾಮ ಮಗದೊಂದು ಹಿಟ್ ಸಿನಿಮಾ ಕೊಡುವ ಸಲುವಾಗಿ ಹಲವಾರು ವರ್ಷಗಳ ಕಾಲ ಶ್ರಮಪಟ್ಟು ಸತತ ಪ್ರಯತ್ನದ ಮೂಲಕ ಶಾಂತಿ ಕ್ರಾಂತಿ ಸಿನಿಮಾವನ್ನು ತೆರೆಗೆ ತಂದರು.
ಆದರೆ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗದೇ ಆಗಿನ ಕಾಲದಲ್ಲಿ ಸೋಲಿಗೀಡಾಗಿತ್ತು. ಹಾಗಾದರೆ ಈ ಸಿನಿಮಾದ ಸೋಲಿಗೆ ಬಹುಮುಖ್ಯ ಕಾರಣವೇನು? ಚಿತ್ರಕ್ಕೆ ಈಶ್ವರಿ ಕಂಬೈನ್ಸ್ ಸಂಸ್ಥೆಯಿಂದ ಹೋಡಿಕೆ ಮಾಡಲಾಗಿದ್ದ ಹಣ (Budget) ಎಷ್ಟು ಕೋಟಿ? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಶಾಂತಿ ಕ್ರಾಂತಿ ಸಿನಿಮಾದ ಸಂಕ್ಷಿಪ್ತ ಮಾಹಿತಿ ನೋಡುತ್ತ ಹೋದರೆ ಎಲ್ಲವೂ ರವಿಚಂದ್ರನ್ ಅವರ ಹೆಸರಿನಲ್ಲಿಯೇ ಇರುತ್ತದೆ.
ಶಾಂತಿ ಕ್ರಾಂತಿ ಸಿನಿಮಾದ ನಟನೆಯಿಂದ ಹಿಡಿದು ಸಿನಿಮಾದ ನಿರ್ಮಾಣ, ಕಥೆ ಮತ್ತು ಸಂಭಾಷಣೆ, ನಿರ್ದೇಶನ, ಕಥೆಯ ಬರವಣಿಗೆ ಎಲ್ಲವೂ ರವಿಚಂದ್ರನ್ ಅವರೇ ಮಾಡಿದ್ದರು. ಇದಕ್ಕೆ ನಟಿ ಜೂಹಿ ಚಾವ್ಲಾ ಮತ್ತು ಖುಷ್ಬೂ ಜೊತೆಯಾಗಿ ಸಾತ್ ನೀಡಿದರು.
ಸೆಪ್ಟೆಂಬರ್ 19ನೇ ತಾರೀಕು 1991 ರಂದು 10 ಕೋಟಿ ಬಜೆಟ್ ನ ಈ ಸಿನಿಮಾ ಈಶ್ವರಿ ಪ್ರೊಡಕ್ಷನ್ ಮೂಲಕ ತೆರಿಗೆ ಬಂದಾಗ ಗಳಿಸಿದ್ದು ಕೇವಲ ಐದು ಕೋಟಿ ಅಷ್ಟೇ. ಖುಷ್ಬು, ಜೂಹಿ ಚಾವ್ಲಾ, ರಮೇಶ್ ಅರವಿಂದ್, ಅನಂತನಾಗ್, ಶ್ರೀ ನಾಥ್, ಅನು ಪ್ರಭಾಕರ್, ಸಂಗೀತ ಸೇರಿದಂತೆ ಮುಂತಾದ ಸ್ಟಾರ್ ಕಲಾವಿದರು ನಟಿಸಿದ್ದರು.
ಆದರೆ ಯಾವಾಗ ಸಿನಿಮಾ ಟಿವಿ ಚಾನೆಲ್ಗಳಲ್ಲಿ (TV Channel) ಪ್ರಸಾರವಾಯಿತೋ ಆಗ ಪ್ರೇಕ್ಷಕರು ಬಹಳ ಇಷ್ಟ ಪಟ್ಟು ನೋಡಿದಂತಹ ಉದಾಹರಣೆಗಳು ಸಾಕಷ್ಟಿವೆ. ಇನ್ನು ಅದೆಷ್ಟೋ ಜನರು ಇಂಥ ಒಳ್ಳೆ ಸಿನಿಮಾವನ್ನು ಥಿಯೇಟರ್ಗೆ ಹೋಗಿ ನೋಡಲಿಲ್ಲವಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದುಂಟು.
ಹೀಗೆ ಜನರಿಂದ ಒಂದೊಳ್ಳೆ ರೆಸ್ಪಾನ್ಸ್ ನಿರೀಕ್ಷಿಸುತ್ತಿದಂತಹ ರವಿಚಂದ್ರನ್ ಅವರಿಗೆ ಅಂದು ಮುಖಭಂಗವಾಗಿತ್ತು. ಬರೋಬ್ಬರಿ ಮೂರರಿಂದ ನಾಲ್ಕು ವರ್ಷಗಳ ಕಾಲ ರವಿಚಂದ್ರನ್ ಈ ಒಂದು ಸಿನಿಮಾಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು.
ಸ್ಟಾರ್ ನಟ-ನಟಿಯರ ಕಾಲ್ ಶೀಟ್ ಸಿಗುವುದು ಆಗಿನ ಕಾಲಕ್ಕೆ ಅಷ್ಟು ಸುಲಭವಾಗಿರಲಿಲ್ಲ. ಎಲ್ಲರ ಮನೆ ಮುಂದೆ ಅಲೆದು ಡೇಟ್ ಗಳಿಗಾಗಿ ಕೇಳಿಕೊಂಡಿದ್ದರು, ಇಷ್ಟೆಲ್ಲ ಪ್ರಯತ್ನ ಮಾಡಿದರು ಕೂಡ ರವಿಚಂದ್ರನ್ ಅಂದುಕೊಂಡಂತಹ ರೀತಿ ಶಾಂತಿ ಕ್ರಾಂತಿ ಸಿನಿಮಾ ಯಶಸ್ಸನ್ನು ಗಳಿಸದೆ ನೆಲಕಚ್ಚಿತ್ತು.
Do you know the reason for the failure of Actor Ravichandran Shanti Kranti Kannada movie
Follow us On
Google News |