ಅನಾರೋಗ್ಯದಿಂದ ಹಾಸಿಗೆ ಹಿಡಿದಿರೋ ಲೀಲಾವತಿ ಅಮ್ಮ ಕಣ್ಣೀರು ಹಾಕುತ್ತ ಕೊನೆ ಆಸೆ ಕೇಳಿದ್ದು ಏನು ಗೊತ್ತಾ?
ಕನ್ನಡ ಸಿನಿಮಾ ರಂಗದ ಕಲಾವಿದರು ಲೀಲಾವತಿ ಅಮ್ಮನವರ ಮನೆಗೆ ತೆರಳಿ ವಿನೋದ್ ರಾಜ್ ಹಾಗೂ ಲೀಲಾವತಿಯವರ ಆರೋಗ್ಯ ಕ್ಷೇಮವನ್ನು ವಿಚಾರಿಸುವುದರ ಜೊತೆಗೆ ಅವರ ಮನೆಯಲ್ಲಿಯೇ ಬಿರಿಯಾನಿ ಕಬಾಬ್ ಸವಿದು ಲೀಲಾವತಿ ಅಮ್ಮನೊಂದಿಗೆ ಮುದ್ದಾಗಿ ಫೋಟೋ ಕ್ಲಿಕ್ಕಿಸಿಕೊಂಡರು.
ಹಲವಾರು ದಶಕಗಳಿಂದ ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ಸಕ್ರಿಯರಾಗಿರುವಂತಹ ನಟಿ ಲೀಲಾವತಿ (Actress Leelavathi) ಅಮ್ಮನವರು ಸದ್ಯ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ಅವರ ಆರೋಗ್ಯ ತೀರ ಕ್ಷೀಣಿಸಿದಾಗ ಸಿನಿಮಾ ರಂಗದ ಹಿರಿಯ ಕಲಾವಿದರಾದ ಸುಂದರರಾಜ್, ಪ್ರಮೀಳಾ ಜೋಷಾಯಿ, ಶ್ರೀನಾಥ್, ಪದ್ಮ ವಾಸಂತಿ ಸೇರಿದಂತೆ ಮುಂತಾದ ನಟ ನಟಿಯರು ಲೀಲಾವತಿ ಅಮ್ಮನವರನ್ನು ಭೇಟಿ ಮಾಡಿ ಅವರ ಆರೋಗ್ಯ ಕ್ಷೇಮ ವಿಚಾರಿಸಿದರು.
ಆ ಸಂದರ್ಭದಲ್ಲಿ ಎದ್ದು ಕೂರಲು ಆಗದಂತಹ ಪರಿಸ್ಥಿತಿಯಲ್ಲಿ ಸುಂದರರಾಜ್ ಅವರನ್ನು ಕರೆದು ಲೀಲಾವತಿ ಅಮ್ಮನವರು ತಮ್ಮ ಆಸೆ ಹೇಳಿಕೊಂಡಿದ್ದಾರೆ. ಈಗಾಗಲೇ ಎಲ್ಲಾ ಕ್ಷೇತ್ರದಲ್ಲಿಯೂ ಬಹು ದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿರುವ ಲೀಲಾವತಿ ಅಮ್ಮ ಬಯಸುತ್ತಿರುವುದು ಏನನ್ನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ಕೆಲ ದಿನಗಳ ಹಿಂದಷ್ಟೇ ಕನ್ನಡ ಸಿನಿಮಾ ರಂಗದ (Kannada Cinema) ಕಲಾವಿದರು ಲೀಲಾವತಿ ಅಮ್ಮನವರ ಮನೆಗೆ ತೆರಳಿ ವಿನೋದ್ ರಾಜ್ ಹಾಗೂ ಲೀಲಾವತಿಯವರ ಆರೋಗ್ಯ ಕ್ಷೇಮವನ್ನು ವಿಚಾರಿಸುವುದರ ಜೊತೆಗೆ ಅವರ ಮನೆಯಲ್ಲಿಯೇ ಬಿರಿಯಾನಿ ಕಬಾಬ್ ಸವಿದು ಲೀಲಾವತಿ ಅಮ್ಮನೊಂದಿಗೆ ಮುದ್ದಾಗಿ ಫೋಟೋ ಕ್ಲಿಕ್ಕಿಸಿಕೊಂಡು ಅದನ್ನೆಲ್ಲ ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು.
ಆ ಫೋಟೋಗಳೆಲ್ಲವೂ ಬಾರಿ ವೈರಲ್ ಆಗಿ ಕನ್ನಡ ಸಿನಿಮಾ ರಂಗದ (Kannada Movies) ಅಪೂರ್ವ ಕ್ಷಣಗಳಾಗಿ ಮಾರ್ಪಟ್ಟಿವೆ. ಹೀಗೆ ಲೀಲಾವತಿ ಅಮ್ಮನವರನ್ನು ಭೇಟಿ ಮಾಡಿದ ಕಲಾವಿದರು ವಾಪಸ್ ತಮ್ಮ ಮನೆಗೆ ತೆರಳುವಾಗ ಲೀಲಾವತಿ ಅಮ್ಮನವರು ನನಗೊಂದು ಆಸೆ ಇದೆ ಅದನ್ನೆಲ್ಲ ನೀವು ಈಡೇರಿಸುವಿರಾ ಎಂದು ಕೇಳಿಕೊಂಡರಂತೆ.
ಆಗ ಅದೇನೆಂದು ಹೇಳಿ ಅಮ್ಮ ಮಾಡೋಣ ಎಂದು ಕೇಳಿದಾಗ ನಮ್ಮ ಉದ್ಯಮದವರನ್ನೆಲ್ಲಾ ನಾನು ಒಟ್ಟಾಗಿ ನೋಡಬೇಕೆಂಬ ಆಸೆ ಇದೆ. ನನಗೆ ಅನ್ನ ಹಾಕಿದಂತಹ ನಿರ್ಮಾಪಕರು, ಸಿನಿಮಾದ ಅವಕಾಶ ಕೊಟ್ಟ ನಿರ್ದೇಶಕರು, ನನ್ನ ಜೊತೆ ಅಭಿನಯಿಸಿದಂತಹ ಕಲಾವಿದರು, ಛಾಯಾಗ್ರಾಹಕರು, ನನಗೆ ಡ್ಯಾನ್ಸ್ ಹೇಳಿಕೊಟ್ಟ ಕೊರಿಯೋಗ್ರಾಫರ್, ಎಲ್ಲರನ್ನೂ ನಾನು ಒಟ್ಟಾಗಿ ನೋಡಬೇಕೆಂಬುದೇ ನನ್ನ ಆಸೆ.
ಇದನ್ನೆಲ್ಲ ನೀವು ಈಡೇರಿಸುತ್ತೀರಾ? ಎಂದು ಕೇಳಿಕೊಂಡರಂತೆ. ಹೀಗೆ ಲೀಲಾವತಿ ಅಮ್ಮನವರ ಮಾತನ್ನು ಒಪ್ಪಿಕೊಂಡಂತಹ ಕಲಾವಿದರು ಎಲ್ಲಾ ನಟ ನಟಿಯರನ್ನು ನಿರ್ದೇಶಕ ನಿರ್ಮಾಪಕರನ್ನು ಮಹಿಳಾ ದಿನಾಚರಣೆಯ ಶುಭ ದಿನದಂದು ಒಟ್ಟಾಗಿ ಸೇರಿಸಿ ಲೀಲಾವತಿ ಅಮ್ಮನವರ ಆಸೆಯನ್ನು ಈಡೇರಿಸುವ ಪ್ರಯತ್ನದಲ್ಲಿ ಇರುತ್ತಾರೆ.
ಆದರೆ ಆ ಒಂದು ಕಾರ್ಯ ಈಡೇರುವುದಿಲ್ಲ, ನಂತರ ಲೀಲಾವತಿ ಅಮ್ಮನವರ ಹುಟ್ಟು ಹಬ್ಬದ ದಿನದಂದು ‘ಅಮ್ಮ ಲೀಲಮ್ಮ ನಿಮ್ಮೊಳಗೆ ನಾವಮ್ಮ’ ಎಂಬ ಶೀರ್ಷಿಕೆ ಇಟ್ಟು ಕಾರ್ಯಕ್ರಮವನ್ನು ಆಯೋಜಿಸಿದರು. ಅದರಂತೆ ಅಸಂಖ್ಯಾತ ಕನ್ನಡ ಸಿನಿಮಾ ರಂಗದ ಕಲಾವಿದರು ಬಂದು ಲೀಲಾವತಿ ಅಮ್ಮನವರನ್ನು ಮಾತನಾಡಿಸಿ ಸಂತೋಷಪಡಿಸಿದರು.
Do you know what Was the Kannada Actress Leelavathi Last Wish
Follow us On
Google News |