ಅಂಬರೀಶ್ ಮಾಡಿ ಚರಿತ್ರೆ ಸೃಷ್ಟಿಸಿದ ಆ ಒಂದು ಸಿನಿಮಾದಲ್ಲಿ ಅಣ್ಣಾವ್ರು ಅಥವಾ ವಿಷ್ಣುವರ್ಧನ್ ನಟಿಸಬೇಕಿತ್ತು ಎಂದ ರಾಜೇಂದ್ರ ಸಿಂಗ್ ಬಾಬು! ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತೇ?
ಮಂಡ್ಯದ ಗಂಡು ಅಂಬರೀಶ್ ಅವರು ಮಾಡಿ ಇತಿಹಾಸ ಸೃಷ್ಟಿ ಮಾಡಿದಂತಹ ಆ ಒಂದು ಸಿನಿಮಾದಲ್ಲಿ ಮೊದಲಿಗೆ ರಾಜಕುಮಾರ್ ಅಥವಾ ವಿಷ್ಣುವರ್ಧನ್ ಅವರು ನಟಿಸಬೇಕು ಎಂದು ನಿಶ್ಚಯವಾಗಿರುತ್ತದೆ
ಕನ್ನಡ ಸಿನಿಮಾ ರಂಗದ ಪ್ರಖ್ಯಾತ ನಿರ್ದೇಶಕರಾದಂತ ರಾಜೇಂದ್ರ ಸಿಂಗ್ ಬಾಬು (Kannada Director Rajendra Singh Babu) ಅವರು ಸಂದರ್ಶನ ಒಂದರಲ್ಲಿ ಮಾತನಾಡುವಾಗ ರೋಚಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.
ಹೌದು ಗೆಳೆಯರೇ ಮಂಡ್ಯದ ಗಂಡು ಅಂಬರೀಶ್ (Actor Ambareesh) ಅವರು ಮಾಡಿ ಇತಿಹಾಸ ಸೃಷ್ಟಿ ಮಾಡಿದಂತಹ ಆ ಒಂದು ಸಿನಿಮಾದಲ್ಲಿ ಮೊದಲಿಗೆ ರಾಜಕುಮಾರ್ (Dr Rajkumar) ಅಥವಾ ವಿಷ್ಣುವರ್ಧನ್ (Dr Vishnuvardhan) ಅವರು ನಟಿಸಬೇಕು ಎಂದು ನಿಶ್ಚಯವಾಗಿರುತ್ತದೆ. ಆದರೆ ಆ ಸಿನಿಮಾ ಅಂಬರೀಶ್ ಅವರ ಪಾಲಾಯಿತು ಎಂದರು.
ಹೀಗೆ ಹೇಳಿದಾದ್ದರೂ ಯಾಕೆ? ಆ ಸಿನಿಮಾ ಯಾವುದು ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ರಾಜೇಂದ್ರ ಸಿಂಗ್ ಬಾಬು ಅವರು ಸದಾ ಕಾಲ ಕಥೆ ಕಾದಂಬರಿಗಳನ್ನು ಓದುತ್ತಲೆ ಇದ್ದರು. ಅದರಲ್ಲೂ ಸುಧಾ ಮ್ಯಾಕ್ಸಿನ್ ನಲ್ಲಿ ಬರುತ್ತಿದ್ದಂತಹ ಪುಟಗಳನ್ನು ಅವರು ಬಿಡದೆ ಓದುತ್ತಿದ್ದರು. ಹೀಗೆ ಒಂದು ದಿನ ಮ್ಯಾಗ್ಜಿನ್ ಓದಬೇಕಾದರೆ ರಾಜೇಂದ್ರ ಬಾಬು ಅವರಿಗೆ ಸಿಕ್ಕಂತಹ ಅದ್ಭುತ ಕಥೆಯೇ ‘ಅಂತ’.
ಈ ಒಂದು ಕಥೆಯನ್ನು ಸಿನಿಮಾ ಮಾಡಬೇಕೆಂದು ನಿರ್ಧರಿಸಿದಾಗ ಸಿನಿಮಾದ ನಾಯಕ ನಟನಾಗಿ ಯಾರನ್ನು ಹುಡುಕುವುದು ಎಂಬ ಯೋಚನೆಯಲ್ಲಿ ರಾಜೇಂದ್ರ ಸಿಂಗ್ ಬಾಬು ಅವರು ಇರುವಾಗ ಡಾ. ರಾಜಕುಮಾರ್ ಅವರಿಗೆ ಈ ಒಂದು ವಿಚಾರ ತಿಳಿದು, ಆ ಸಿನಿಮಾದವನ್ನು ತಾನು ಮಾಡುವುದಾಗಿ ಹೇಳುತ್ತಾರೆ ಆದರೆ ಭಗವಾನ್ ಅವರು ಈ ರೀತಿಯಾದಂತಹ ಮಾಸ್ ಕ್ಯಾರೆಕ್ಟರ್ ನಿಮಗೆ ಸೂಕ್ತವಾಗುವುದಿಲ್ಲ ನಿಮ್ಮ ಅಭಿಮಾನಿಗಳ ಮೇಲೆ ಇದು ಬೇರೆ ರೀತಿಯ ಪ್ರಭಾವವನ್ನು ಬೀರುತ್ತದೆ ಎಂದಾಗ ಆ ಸಿನಿಮಾ ಮಾಡುವುದರಿಂದ ಹಿಂದೆಟ್ ಹಾಕಿದರು.
ಒಂದಾದ ಮೇಲೆ ಒಂದರಂತೆ, ಹಿಟ್ ಸಿನಿಮಾಗಳನ್ನು ನೀಡಿದ ಸ್ಯಾಂಡಲ್ ವುಡ್ ಸ್ಟಾರ್ ಸೆಲೆಬ್ರಿಟಿಗಳು ಯಾರ್ ಯಾರು ಗೊತ್ತೇ ?
ಅದರಂತೆ ವಿಷ್ಣುವರ್ಧನ್ ಅವರ ಬಳಿ ಈ ಒಂದು ಕಥೆ ಹೋದಾಗ ಸ್ವತಃ ರಾಜೇಂದ್ರ ಸಿಂಗ್ ಬಾಬು ಅವರೇ ಸರ್ ಈ ಸಿನಿಮಾದಲ್ಲಿ ನೀವು ನಟಿಸುವುದು ಬೇಡ ಏಕೆಂದರೆ ಇದರಲ್ಲಿ ಈ ಸಿನಿಮಾದ ಕೆಲ ಸೀನ್ ಗಳಲ್ಲಿ ನಾಯಕನಟನನ್ನು ಚೇರ್ ಮೇಲೆ ಕಟ್ಟಿ ಹಾಕಿ ಹೆಂಡತಿಯನ್ನು ಹೊಡೆಯುವ ದೃಶ್ಯಗಳಿವೆ ಎಂದರು.
ಇದೇನಿದು ವಿಚಿತ್ರ? ಎಮ್ಮೆಗೆ ಮಾತು ಕಲಿಸಿದ ನಟಿ ಹರ್ಷಿಕಾ ಪೂಣಚ್ಚ! ವೈರಲ್ ಆಯ್ತು ಕ್ಯೂಟ್ ವಿಡಿಯೋ!
ಇಂತಹದ್ದನ್ನು ನಿಮ್ಮ ಕೈಯಲ್ಲಿ ಮಾಡಿಸಿದರೆ ಜನ ಸುಮ್ಮನೆ ಬಿಡುವುದಿಲ್ಲ ಹಾಗೂ ನೀವು ಸಾಹಸ ಸಿಂಹನಾಗಿ ಬಿಟ್ಟಿದ್ದೀರಾ ಈ ರೀತಿಯಾದಂತಹ ಪಾತ್ರಗಳು ನಿಮಗೆ ಸರಿ ಹೊಂದುವುದಿಲ್ಲ ಎನ್ನುತ್ತಾರೆ.
ಆನಂತರ ಈ ಒಂದು ಸಿನಿಮಾದ ಕಥೆ ಅಂಬರೀಶ್ ಅವರ ಕೈ ಸೇರುತ್ತದೆ. ಮಂಡ್ಯದ ಗಂಡು ಅಂಬರೀಶ್ ಅವರ ಅಂತ ಸಿನಿಮಾದ ನಾಯಕ ಎಂದು ರಾಜೇಂದ್ರ ಸಿಂಗ್ ಬಾಬು ಅವರು ನಿರ್ಧರಿಸಿ ಚಿತ್ರೀಕರಣ ಪ್ರಾರಂಭ ಮಾಡುತ್ತಾರೆ. ಹೀಗೆ ಅಂತ ಸಿನಿಮಾ ಅಂಬರೀಶ್ ಅವರ ಅಭಿನಯದಲ್ಲಿ ಅದ್ಭುತವಾಗಿ ಮೂಡಿ ಬರುತ್ತದೆ.
Kannada Director Rajendra Singh Babu Viral Comments on Actor Ambareesh Movie
Follow us On
Google News |