ಅಂದು ಮಲಗಿದ್ದ ತನ್ನ ಎಳೆ ಕಂದನನ್ನು ಲೀಲಾವತಿ ಅಮ್ಮನವರು ಸಾಯಿಸಲು ಮುಂದಾದದ್ದು ಏಕೆ? ಇಂದು ನಟ ವಿನೋದ್ ರಾಜ್ ಬದುಕುಳಿದಿದ್ದಾರೆ ಎಂದರೆ ಅದಕ್ಕೆ ಆ ವ್ಯಕ್ತಿಯೇ ಕಾರಣ?
ಸಿನಿ ಸೆಲೆಬ್ರಿಟಿಗಳ ಬದುಕು ನಾವಂದುಕೊಂಡಷ್ಟು ಸುಲಭವಾಗಿ ಇರೋದಿಲ್ಲ, ವೃತ್ತಿ ಬದುಕಿನಲ್ಲಿ ಅಘಾತವಾದ ಯಶಸ್ಸನ್ನು ಕಂಡಂತಹ ಸಾಕಷ್ಟು ನಟ ನಟಿಯರು ಬಾಳ ಸಂಗಾತಿಯ ಆಯ್ಕೆಯಲ್ಲಿ ಎಡವಿ ತಮ್ಮ ವೈಯಕ್ತಿಕ ಜೀವನವನ್ನು ಹಾಳು ಮಾಡಿಕೊಂಡಂತಹ ಸಾಕಷ್ಟು ಉದಾಹರಣೆಗಳು ನಮ್ಮ ಕನ್ನಡ ಸಿನಿಮಾರಂಗದಲ್ಲಿವೆ.
ಅದರಂತೆ ನಾವಿವತ್ತು ಸದಾ ಕಾಲ ವೈಯಕ್ತಿಕ ವಿಚಾರಗಳಿಂದಲೇ ಸುದ್ದಿಯಲ್ಲಿರುವ ಲೀಲಾವತಿ (Actress Leelavathi) ಮತ್ತು ವಿನೋದ್ ರಾಜ್ (Actor Vinod Raj) ಅವರ ಕುರಿತು ಕೆಲ ಆಸಕ್ತಿಕರ ಸಂಗತಿಯನ್ನು ತಿಳಿಸಲು ಹೊರಟಿದ್ದೇವೆ.
ಹೌದು ಗೆಳೆಯರೇ ವಿನೋದ್ ರಾಜ್, ಎಳೆ ಕಂದನಾಗಿರುವಾಗ ಲೀಲಾವತಿ ಅಮ್ಮನವರು ಆತನನ್ನು ಸಾಯಿಸುವ ಪ್ರಯತ್ನಕ್ಕೆ ಮುಂದಾಗಿದ್ದರಂತೆ. ಅಷ್ಟಕ್ಕೂ ಮಗುವಿನಂತಹ ಮನಸ್ಸುಳ್ಳ ಲೀಲಾವತಿ ಅಮ್ಮನವರಿಗೆ ಇಷ್ಟು ಕ್ರೂರವಾದ ಯೋಚನೆ ಬರಲು ಕಾರಣವಾದರೂ ಏನು?
ಅಂದು ಅವರ ಮನಸ್ಸನ್ನು ವಿಚಲಿತಗೊಳಿಸಿದಂತಹ ಘಟನೆ ಯಾವುದು? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸುವ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
1,500 ಚಿತ್ರಗಳ ಒಡತಿ ಪಂಡರಿಬಾಯಿ ಅವರು ಆಗಿನ ಕಾಲದಲ್ಲಿ ಒಂದು ಸಿನಿಮಾಗೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತೇ?
ಹೌದು ಸ್ನೇಹಿತರೆ ಪ್ರಪಂಚದಲ್ಲಿ ಅಮ್ಮ-ಮಗನ ಬಾಂಧವ್ಯ ಹೇಗಿರಬೇಕು ಎಂಬುದನ್ನು ನಾವೆಲ್ಲರೂ ಲೀಲಾವತಿ ಮತ್ತು ವಿನೋದ್ ರಾಜ್ ಅವರನ್ನು ನೋಡಿ ಕಲಿಯಬೇಕು. ಹುಟ್ಟಿದಾಗಿನಿಂದಲೂ ಲೀಲಾವತಿ ಸಾಕಷ್ಟು ಕಷ್ಟ, ನೋವು, ಅವಮಾನ, ಹಿಂಸೆಗಳನ್ನು ಅನುಭವಿಸಿ ತಮ್ಮ ಮಗನನ್ನು ಅಂಗೈಯಲ್ಲಿ ಬಚ್ಚಿಟ್ಟುಕೊಂಡು ಇಲ್ಲಿಯವರೆಗೂ ಬೆಳೆಸಿದ್ದಾರೆ.
ಹೀಗೆ ಸಂದರ್ಶನ ಒಂದರಲ್ಲಿ ಕಹಿ ಘಟನೆಯನ್ನು ನೆನೆದು ಕಣ್ಣೀರು ಹಾಕಿದ ಲೀಲಾವತಿ ಅಮ್ಮನವರು “ನನ್ನ ಹೊಟ್ಟೆಯಲ್ಲಿ ಒಂದು ಮಗು ಬೆಳೆಯುತ್ತಿದೆ ಎಂದು ತಿಳಿದ ತಕ್ಷಣ ಚಿತ್ರರಂಗ, ಸೀರಿಯಲ್ ಹಾಗೂ ಇನ್ನಿತರ ನಾಟಕ ಮಂಡಳಿಗಳು ನನ್ನನ್ನು ಸಂಪೂರ್ಣವಾಗಿ ದೂರ ಮಾಡಿಬಿಟ್ಟರು. ಆ ಸಂದರ್ಭದಲ್ಲಿ ಯಾರ ನೆರವಿಲ್ಲದೆ ಒಂದು ಹೊತ್ತು ಊಟ ಮಾಡುತ್ತಿದ್ದೆ ಹೀಗಿರುವಾಗ ವಿನೋದ್ ಹುಟ್ಟಿ ಬಿಟ್ಟ.
ಅಂತಹ ಸಂದರ್ಭದಲ್ಲಿ ಅವನನ್ನು ನನ್ನ ಸೆರಗಿನಲ್ಲಿ ಕಟ್ಟಿಕೊಂಡು ನಾನು ಗದ್ದೆಗಿಳಿದು ವ್ಯವಸಾಯ ಮಾಡಿ ಬದುಕು ಸಾಗಿಸುತ್ತಿದ್ದೇ, ಹೀಗೆ ಜೀವನದಲ್ಲಿ ಹಣಕಾಸಿನ ಸಮಸ್ಯೆ ಮಾತ್ರವಲ್ಲದೆ ಜನರು ಮಾತಾನಾಡುತ್ತಿದ್ದಂತಹ ಒಂದೊಂದು ಮಾತು ಕೂಡ ನನಗೆ ಬಹಳ ಹಿಂಸೆ ನೀಡುತ್ತಿತ್ತು. ಒಂದು ವರ್ಷದ ಪುಟ್ಟ ಕಂದ ನನ್ನ ಮಗ ವಿನೋದ್ ರಾಜ್ ತೊಟ್ಟಿಲಲ್ಲಿ ಮಲಗಿ ಜೋರಾಗಿ ಹೊಟ್ಟೆ ಹಸಿವಿನಿಂದ ಅಳುತ್ತಿದ್ದ,
ಯಾರಿಗೂ ಕಾಣಿಸಿಕೊಳ್ಳದ ವಿಷ್ಣುವರ್ಧನ್ ಅವರ ಮತ್ತೋರ್ವ ಪುತ್ರಿ ಯಾರು ಗೊತ್ತಾ? ಮಾಧ್ಯಮದ ಮುಂದೆ ಬರಲು ಹಿಂಜರಿಕೆ ಯಾಕೆ?
ಅವನಿಗೆ ತಿನ್ನಿಸಲು ನನ್ನ ಬಳಿ ಏನು ಸಹ ಇರಲಿಲ್ಲ.. ಹೀಗಾಗಿ ಅದೊಂದು ದಿನ ಅವನನ್ನು ಸಾಯಿಸಿ ನಾನು ಕೂಡ ಸತ್ತು ಹೋಗೋಣ ಎಂಬ ನಿರ್ಧಾರ ಮಾಡಿದ್ದೆ. ಅದೇ ಕೋಪದಿಂದ ನಾನು ಆತ ಮಲಗಿದ್ದಂತಹ ತೊಟ್ಟಿಲನ್ನು ಜೋರಾಗಿ ತೂಗಿಬಿಟ್ಟೆ, ಆದರೆ ಅವನು ಅಮ್ಮ ನನ್ನನ್ನು ಆಡಿಸುತ್ತಿದ್ದಾಳೆ ಎಂದು ಕಿಲಕಿಲನೆ ನಗಲು ಶುರುಮಾಡಿದ. ಅವನ ನಗು ನನ್ನಲ್ಲಿ ಚೈತನ್ಯ ಮೂಡಿಸಿ ಪ್ರಪಂಚದಲ್ಲಿ ಇದ್ದು, ಜಯಿಸಬೇಕು ಎಂಬ ಸ್ಫೂರ್ತಿ ತುಂಬಿತ್ತು.
ಇನ್ನು ಕೂಡ ವಿನೋದ್ ಒಂದು ವರ್ಷವಿದ್ದಾಗ ಆತ ತೊಟ್ಟಿಲಲ್ಲಿ ಮಲಗಿ ನಗುತ್ತಿದ್ದ ದೃಶ್ಯ ನನ್ನ ಕಣ್ಣ ಮುಂದೆ ಹಾಗೆ ಇದೆ ಅವನ ಮುದ್ದಾದ ನಗುವೆ ಇಂದು ಅವನನ್ನು ಉಳಿಸಿದೆ” ಎಂದು ಭಾವುಕರಾದರು.
Unknown Facts About Kannada Senior Actress Leelavathi