ಉತ್ತುಂಗದ ಶಿಖರದಲ್ಲಿದ್ದ ನಟಿ ಕಲ್ಪನಾ, ಇದ್ದಕಿದ್ದ ಹಾಗೆ ಸಾವಿಗೆ ಶರಣಾಗಲು ಕಾರಣವೇನು ಗೊತ್ತೇ ?

ಮಿನುಗುತಾರೆ ಕಲ್ಪನಾ ಅವರಿಗೆ ಸೂಪರ್ ಸ್ಟಾರ್ ಪಟ್ಟವನ್ನು ನೀಡಲಾಗಿತ್ತು. ಕೇವಲ 15 ವರ್ಷಗಳು ಮಾತ್ರ ಸಿನಿಮಾರಂಗದಲ್ಲಿ ಇದ್ದರೂ ಬರೋಬ್ಬರಿ 78 ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಸ್ನೇಹಿತರೆ, ನಟಿ ಕಲ್ಪನಾ ರವರ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರಿಗೂ 80-90ರ ದಶಕದ ಅತ್ಯದ್ಭುತ ಸಿನಿಮಾಗಳ ಪಟ್ಟಿ ನೆನಪಿಗೆ ಬಂದುಬಿಡುತ್ತದೆ. ಶರಪಂಜರ ಚಿತ್ರದಲ್ಲಿ ನನ್ ಬಂದೆ ನನ್ ನೋಡ್ದೆ ಅಂತ ವಿಚಿತ್ರವಾದ ಡೈಲಾಗ್ ಹೇಳುತ್ತಾ ಮನೋಜ್ಞ ಅಭಿನಯ ಮಾಡಿದ ಕಲ್ಪನಾ ಎಂತಹ ಪಾತ್ರ ನೀಡಿದರು ಅದರೊಳಗೆ ಪರಕಾಯ ಪ್ರವೇಶ ಮಾಡಿ ಸಿನಿ ಪ್ರೇಕ್ಷಕರಿಗೆ ಮನೋರಂಜನೆಯ ಬಹದೂಟವನ್ನು ಬಡಿಸಿದ್ದರು.

ಆಗಿನ ಕಾಲದಲ್ಲಿ ಸಾಧಾರಣವಾಗಿ ಹೀರೋಗಳನ್ನು ಮಾತ್ರ ಸೂಪರ್ ಸ್ಟಾರ್ ಎಂದು ಕರೆಯಲಾಗುತ್ತಿತ್ತು ಆದರೆ ತಮ್ಮ ಅತಿ ಅದ್ಬುತ ಅಭಿನಯದ ಮೂಲಕ ನಟಿಯಯೊಬ್ಬರು ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡಿದ್ದೆ ವಿಶೇಷ.

ಟಾಪ್ ನಲ್ಲಿರುವ ಕನ್ನಡ ಧಾರಾವಾಹಿಗಳು ಯಾವುದು ಗೊತ್ತೇ? ಮೊದಲ ಸ್ಥಾನವನ್ನು ಯಾವ ಸೀರಿಯಲ್ ಪಡೆದುಕೊಂಡಿದೆ?

ಉತ್ತುಂಗದ ಶಿಖರದಲ್ಲಿದ್ದ ನಟಿ ಕಲ್ಪನಾ, ಇದ್ದಕಿದ್ದ ಹಾಗೆ ಸಾವಿಗೆ ಶರಣಾಗಲು ಕಾರಣವೇನು ಗೊತ್ತೇ ? - Kannada News

ಹೌದು ಮಿನುಗುತಾರೆ ಕಲ್ಪನಾ ಅವರಿಗೆ ಸೂಪರ್ ಸ್ಟಾರ್ ಪಟ್ಟವನ್ನು ನೀಡಲಾಗಿತ್ತು. ಕೇವಲ 15 ವರ್ಷಗಳು ಮಾತ್ರ ಸಿನಿಮಾರಂಗದಲ್ಲಿ ಇದ್ದರೂ ಬರೋಬ್ಬರಿ 78 ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಇಂತಹ ಅದ್ಭುತ ನಟಿ ಚಿಕ್ಕ ವಯಸ್ಸಿನಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಳ್ಳಲು ಕಾರಣವಾದರೂ ಏನು? ಯಾವ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಈ ನಟಿ? ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸುವ ಮೂಲಕ 70-80ರ ದಶಕದಲ್ಲಿ ಕಲ್ಪನಾ ಸೂಪರ್ ಸ್ಟಾರ್ ಆಗಿ ಮಿಂಚಿದ್ದರು.

20 ಲಕ್ಷ ಸಂಭಾವನೆ ಪಡೆಯೋ ಕಾಂತಾರ ಖ್ಯಾತಿಯ ನಟ ಕಿಶೋರ್ ಅವರ ಹೆಂಡತಿ ಮಾಡುತ್ತಿರುವುದೇನು ಗೊತ್ತೇ?

ಇಂತಹ ಅದ್ಭುತ ನಟಿ ತಮ್ಮ 36 ವರ್ಷಕ್ಕೆ ಜೀವನವನ್ನು ಇಲ್ಲವಾಗಿಸಿಕೊಂಡರು. ಹೌದು 1963 ರಲ್ಲಿ ಮೂಡಿಬಂದ ಸಾಕು ಮಗಳು ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ (Kannada Film industry) ಪಾದರ್ಪಣೆ ಮಾಡಿದ ಕಲ್ಪನಾ ಅವರು, ಅನಂತರ ಸಾಲುಸಾಲು ಸಿನಿಮಾಗಳ ಆಫರ್ಗಳನ್ನು ಗಿಟ್ಟಿಸಿಕೊಂಡರು.

Kannada Actress Kalpana Life Story

ಅಲ್ಲದೇ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಸಿನಿಮಾಗಳನ್ನು ಮಾಡಿದ ಕಲ್ಪನಾ ಯಶಸ್ಸನ್ನು ಪಡೆಯುತ್ತಿರುವಾಗಲೇ ಇವರ ಹಾಗೂ ಪುಟ್ಟಣ್ಣ ಕಣಗಾಲ್ ನಡುವೆ ಭಿನ್ನಾಭಿಪ್ರಾಯ ಮೂಡುತ್ತದೆ.

ಆಟೋರಾಜ ಶಂಕ್ರಣ್ಣ ಚಿತ್ರರಂಗದಲ್ಲಿ ಇದ್ದದ್ದು ಎಷ್ಟು ವರ್ಷ ಗೊತ್ತಾ? ಈ ಅವಧಿಯಲ್ಲಿ ಅವರು ನೀಡಿದ ಮಹಾನ್ ಸಿನಿಮಾಗಳು ಎಷ್ಟು?

ಇದೇ ಕಾರಣದಿಂದಾಗಿ ನಟಿ ಕಲ್ಪನಾ ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡುವ ಯಾವ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ. ಈ ಕಾರಣದಿಂದಾಗಿ ಆಕೆಗೆ ಬರುತ್ತಿದ್ದ ಆಪರ್ ಹಾಗೂ ವರ್ಚಸ್ಸು ಕಡಿಮೆಯಾಗುತ್ತದೆ. 1978ಕ್ಕೆ ಕಂಪ್ಲೀಟಾಗಿ ನಟಿ ಕಲ್ಪನಾ ಚಿಕ್ಕವಯಸ್ಸಿನಲ್ಲಿ ಸಿನಿಮಾರಂಗದಿಂದ ದೂರ ಉಳಿಯುತ್ತಾರೆ. ಇದರಿಂದ ತಾನು ಪ್ರೀತಿಸುತ್ತಿದ್ದ ಚಿತ್ರರಂಗವೇ ಕೆಟ್ಟ ಕೆಟ್ಟ ಮಾತುಗಳನ್ನಾಡಲು ಶುರು ಮಾಡುತ್ತದೆ.

ಇವೆಲ್ಲದರಿಂದ ಖಿನ್ನತೆಗೊಳಗಾದ ಕಲ್ಪನಾ ಪ್ರತಿನಿತ್ಯ ನಿದ್ರೆ ಮಾತ್ರೆ ಸೇವಿಸಲು ಶುರು ಮಾಡಿಕೊಳ್ಳುತ್ತಾರೆ. ಅಲ್ಲದೆ ಅಪಾರವಾದ ಖಿನ್ನತೆಗೆ ಒಳಗಾಗಿದ್ದ ಕಲ್ಪನಾ ಅವರು ನಾಟಕ ಮಾಡುವಾಗ ತಪ್ಪು ಡೈಲಾಗ್ ಹೇಳಿದ್ದಕ್ಕೆ ಗುಡಿಗೇರಿ ಬಸವರಾಜ್ ಅವರು ನಾಟಕವನ್ನು ಅರ್ಧಕ್ಕೆ ನಿಲ್ಲಿಸಿ ಬ್ಯಾಕ್ ಸ್ಟೇಜ್ಗೆ ಆಕೆಯನ್ನು ಕರೆದು ಚೆನ್ನಾಗಿ ಬಯ್ಯುತ್ತಾ ಕೆನ್ನೆಗೆ ಬರಿಸುತ್ತಾರೆ.

ಕಾಂತಾರ ಸಿನಿಮಾದ ಮೂಲಕ ಅಬ್ಬರಿಸಿದ ನಟ ರಿಷಬ್ ಶೆಟ್ಟಿ ಓದಿರುವುದು ಎಷ್ಟನೇ ತರಗತಿ ಗೊತ್ತಾ?

ಇದರಿಂದ ನೊಂದ ಕಲ್ಪನಾ ತಮ್ಮ ಉಂಗುರದ ಹರಳನ್ನು ಸೇವಿಸಿ ಹಾಗೂ ಇನ್ನೊಂದಿಷ್ಟು 56 ನಿದ್ರೆ ಮಾತ್ರೆ ಸೇವಿಸಿ ತಮ್ಮ ಪ್ರಾಣವನ್ನು ಕಳೆದುಕೊಂಡರು ಎಂಬ ಮಾಹಿತಿ ಅಭಿಮಾನಿಗಳನ್ನು ಇಂದಿಗೂ ನಂಬಲಾಗದಂತೆ ಮಾಡಿದೆ..

Why Kannada Actress Kalpana Suddenly Surrendered to Death, Read The Story

Follow us On

FaceBook Google News

Why Kannada Actress Kalpana Suddenly Surrendered to Death, Read The Story

Read More News Today