Business NewsIndia News

ರೈತರಿಗೆ ಗುಡ್ ನ್ಯೂಸ್! ಟ್ರ್ಯಾಕ್ಟರ್ ಖರೀದಿಗೆ ಸರ್ಕಾರವೇ ಕೊಡುತ್ತೆ ಹಣ, 50% ಸಬ್ಸಿಡಿ

ಕೃಷಿಯನ್ನು ತಮ್ಮ ಜೀವಾಳವಾಗಿಸಿಕೊಂಡು ಜೀವನ ಪರ್ಯಂತ ಕೃಷಿ ಉದ್ಯೋಗ (agriculture) ಮಾಡುವ ರೈತರಿಗೆ ಸರ್ಕಾರದ ಆರ್ಥಿಕ ನೆರವು (financial help) ಅತ್ಯಗತ್ಯ. ವರ್ಷದ ಬೆಳೆಯನ್ನು ನಂಬಿಕೊಂಡು ಇರುವ ರೈತ ಕೃಷಿ ಚಟುವಟಿಕೆಗೆ ಬೇಕಾಗುವ ಯಾವುದೇ ವಸ್ತು ಖರೀದಿ ಮಾಡುವುದಾದರೂ ಅದಕ್ಕೆ ಸಾಕಷ್ಟು ಹಣವನ್ನು ವ್ಯಯಿಸಬೇಕು.

ಅದರಿಂದ ರೈತರ ಉದ್ದಾರಕ್ಕಾಗಿ ಸರ್ಕಾರದ ಕೆಲವು ಯೋಜನೆಗಳು ಪ್ರಯೋಜನಕಾರಿ ಆಗಲಿವೆ. ಇದೀಗ ರೈತರಿಗೆ ಕೃಷಿ ಉತ್ಪನ್ನ ಖರೀದಿ ಮಾಡಲು ಸಬ್ಸಿಡಿ ದರದಲ್ಲಿ ಸಾಲ (subsidy loan) ಸೌಲಭ್ಯವನ್ನು ಕೂಡ ಸರ್ಕಾರ ಒದಗಿಸುತ್ತಿದ್ದು, ಅವುಗಳಲ್ಲಿ ಟ್ರ್ಯಾಕ್ಟರ್ (tractor) ಖರೀದಿಗೆ 50% ವರೆಗೆ ಸಬ್ಸಿಡಿ ದೊರೆಯುತ್ತಿದೆ.

Huge subsidy under PM Kisan Tractor Scheme

ಸರ್ಕಾರದಿಂದ ಬಡವರಿಗೆ ಉಚಿತ ಮನೆಗಳು ಮಂಜೂರು! ಹೊಸ ಪಟ್ಟಿ ಬಿಡುಗಡೆ

ರೈತರಿಗೆ ಟ್ರ್ಯಾಕ್ಟರ್ ಖರೀದಿಗೆ 50% ನಷ್ಟು ಸಬ್ಸಿಡಿ (Subsidy Loan to purchase tractor)

ಸರ್ಕಾರ ರೈತರಿಗಾಗಿ ಕೆಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಮೂಲಕ ಕೃಷಿಗೆ ಬೇಕಾಗಿರುವ ಉತ್ಪನ್ನಗಳನ್ನು (agriculture equipment) ಸರ್ಕಾರ ಅತಿ ಕಡಿಮೆ ಬೆಲೆಗೆ ರೈತರಿಗೆ ಒದಗಿಸುತ್ತಿದೆ. ಇದೀಗ ಮುಖ್ಯಮಂತ್ರಿ ಟ್ರ್ಯಾಕ್ಟರ್ ಯೋಜನೆಯ ಅಡಿಯಲ್ಲಿ 50% ವರೆಗೆ ಟ್ರ್ಯಾಕ್ಟರ್ ಖರೀದಿಗೆ ಸಬ್ಸಿಡಿ ಪಡೆದುಕೊಳ್ಳಬಹುದು. 970 ಕೃಷಿ ಉಪಕರಣಗಳನ್ನು 90% ಸಬ್ಸಿಡಿ ದರದಲ್ಲಿ ಪಡೆಯಬಹುದಾಗಿದೆ.

3 ಲಕ್ಷದವರೆಗೆ ಸಿಗುತ್ತೆ ಕಿಸಾನ್ ಲೋನ್; ಉಪಕಸುಬು ಮಾಡೋ ರೈತರಿಗೆ ಗುಡ್ ನ್ಯೂಸ್

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು (Documents to get subsidy Loan)

Subsidy to purchase tractorಪ್ಯಾನ್ ಕಾರ್ಡ್
ಆಧಾರ್ ಕಾರ್ಡ್
ವಾಸ ಸ್ಥಳದ ಗುರುತಿನ ಪುರಾವೆ
ನಿವಾಸದ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಭೂಮಿಯ ಪಹಣಿ
ಬ್ಯಾಂಕ್ ಖಾತೆಯ ವಿವರ (ಆಧಾರ್ ಲಿಂಕ್ ಆಗಿರಬೇಕು)
ಭೂಮಿ ಪತ್ರ
ಮೊಬೈಲ್ ಸಂಖ್ಯೆ
ಪಾಸ್ಪೋರ್ಟ್ ಅಳತೆಯ ಫೋಟೋ

ಸ್ವಂತ ವ್ಯಾಪಾರಕ್ಕೆ ಕೇಂದ್ರ ಸರ್ಕಾರದಿಂದಲೇ ಸಿಗುತ್ತೆ 50 ಸಾವಿರ ತನಕ ಸಾಲ! ಪಡೆದುಕೊಳ್ಳಿ

ಈ ಎಲ್ಲಾ ದಾಖಲೆಗಳ ನಕಲು ಪ್ರತಿಯನ್ನು ಸಿದ್ಧಪಡಿಸಿಕೊಂಡು ಟ್ರ್ಯಾಕ್ಟರ್ ಸಬ್ಸಿಡಿ ಪಡೆದುಕೊಳ್ಳಲು ಕೃಷಿ ಇಲಾಖೆ ಅಥವಾ ಹತ್ತಿರದ ಸಬ್ಸಿಡಿ ಕೇಂದ್ರಕ್ಕೆ ಹೋಗಿ ಅಥವಾ ಗ್ರಾಮ ಪಂಚಾಯತ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಸದ್ಯ ಈ ಟ್ರ್ಯಾಕ್ಟರ್ ಯೋಜನೆ ಜಾರ್ಖಂಡ್ ರಾಜ್ಯದಲ್ಲಿ ಜಾರಿಯಲ್ಲಿದ್ದು ಅಲ್ಲಿ ವಾಸಿಸುವ ರೈತರಿಗೆ ಅದರಲ್ಲೂ ಬಡ ರೈತರಿಗೆ 90% ವರೆಗೂ ಕೂಡ ಟ್ರ್ಯಾಕ್ಟರ್ ಖರೀದಿಗೆ ಸರ್ಕಾರ ಸಬ್ಸಿಡಿ ಒದಗಿಸುತ್ತಿದೆ.

ಇನ್ನೇನು ಸದ್ಯದಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಕೂಡ ಮುಖ್ಯಮಂತ್ರಿ ಟ್ರ್ಯಾಕ್ಟರ್ ಯೋಜನೆ ಜಾರಿಗೆ ಬರಲಿದ್ದು, ಇಲ್ಲಿನ ರೈತರು ಅತಿ ಕಡಿಮೆ ಬೆಲೆಗೆ ಟ್ರಾಕ್ಟರ್ ಖರೀದಿಸಿ ತಮ್ಮ ಹೊಲಕ್ಕೆ ಬಳಸಿಕೊಳ್ಳಬಹುದು.

ಇನ್ಮುಂದೆ ಕೋಳಿ ಸಾಕಾಣಿಕೆಗೂ ಬೇಕಾಗುತ್ತೆ ಪರ್ಮಿಷನ್; ಇಲ್ಲಿದೆ ಮಹತ್ವದ ಮಾಹಿತಿ

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ನಲ್ಲಿ ರೈತರಿಗಾಗಿಯೇ ಕೋಟ್ಯಾಂತರ ರೂಪಾಯಿಗಳ ಹಣವನ್ನು ಮೀಸಲಿಟ್ಟಿದ್ದಾರೆ. ಹಾಗಾಗಿ ಬೇರೆ ಬೇರೆ ಯೋಜನೆಯ ಮೂಲಕ ರೈತರ ಸಬಲೀಕರಣಕ್ಕೆ ಸರ್ಕಾರ ಪ್ರಯತ್ನಿಸುತ್ತಿದೆ ಎನ್ನಬಹುದು.

50 Percent subsidy is provided by the government for the purchase of tractors

Our Whatsapp Channel is Live Now 👇

Whatsapp Channel

Kannada News Today

Kannada News Today 🌐

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
FacebookX
We value your thoughts!
Send your feedback to us at kannadanewstoday@gmail.com

Related Stories