ಕ್ಷುದ್ರ ಪೂಜೆ ನೆರವೇರಿಸಿ 14 ವರ್ಷದ ಮಗಳನ್ನು ಬಲಿಕೊಟ್ಟ ತಂದೆ
ಕೇರಳದಲ್ಲಿ ಮಹಿಳೆಯರ ನರಬಲಿ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಗುಜರಾತ್ ನಲ್ಲಿ ಮತ್ತೊಂದು ದೌರ್ಜನ್ಯ ನಡೆದಿದೆ. ಆರ್ಥಿಕ ಲಾಭದ ನಂಬಿಕೆಯಿಂದ ಕ್ಷುದ್ರ ಪೂಜೆ ನೆರವೇರಿಸಿ 14 ವರ್ಷದ ಮಗಳನ್ನು ತಂದೆ ಕೊಂದಿರುವುದು ಗೊತ್ತಾಗಿದೆ. ಈ ಘಟನೆ ಸಂಚಲನ ಮೂಡಿಸುತ್ತಿದೆ. ನವರಾತ್ರಿಯ ದಿನವೇ ಕುಟುಂಬದವರು ಮಗಳನ್ನು ಬಲಿಕೊಟ್ಟಿದ್ದಾರೆ ಎಂದು ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಸ್ಥಳಕ್ಕಾಗಮಿಸಿ ವಿಧಿವಿಜ್ಞಾನ ತಜ್ಞರ ತಂಡದೊಂದಿಗೆ ಬಾಲಕಿಯ ಚಿತಾಭಸ್ಮವನ್ನು ಹೊರತೆಗೆದಿದ್ದಾರೆ. ಬಾಲಕಿಯ ತಂದೆ ಭವೇಶ್ ಅಕ್ಬರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಆಕೆಯ ಮರಣದ ನಂತರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕುಟುಂಬಸ್ಥರ ವರ್ತನೆಯಲ್ಲಿ ವ್ಯತ್ಯಾಸ ಕಂಡು ಬಂದ ನಂತರ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಬಾಲಕಿಯ ತಂದೆ ಭಾವೇಶ್ ನೀಡಿದ ಉತ್ತರಗಳು ಗೊಂದಲಮಯವಾಗಿದ್ದುದರಿಂದ ಪೊಲೀಸರ ಅನುಮಾನಗಳು ಬಲಗೊಂಡಿವೆ. ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಮನೋಹರಸಿಂಹ ಜಡೇಜಾ ತಿಳಿಸಿದ್ದಾರೆ.
After Human Sacrifice In Kerala Man Kills Possessed Teen Daughter In Occult Ritual In Gujarat