ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ ಕುರಿತು ರಾತ್ರೋರಾತ್ರಿ ಹೊಸ ಅಪ್ಡೇಟ್

ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳು (free guarantee schemes) ಹೆಚ್ಚು ಸೌಂಡ್ ಮಾಡುತ್ತಿವೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಮಾತ್ರ ಸೆನ್ಸೇಶನ್ ಕ್ರಿಯೆ ಮಾಡಿದೆ ಎಂದೇ ಹೇಳಬಹುದು.

ಗೃಹಜ್ಯೋತಿ ಯೋಜನೆಯಾಗಲಿ ಅಥವಾ ಶಕ್ತಿ ಯೋಜನೆ (Shakti Yojana) ಯಾಗಲಿ ಸರ್ಕಾರಕ್ಕೆ ದೊಡ್ಡ ತಲೆನೋವು ಆಗಿರಲಿಲ್ಲ, ಆದರೆ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಾಗೂ ಅನ್ನಭಾಗ್ಯ ಯೋಜನೆಯ (Annabhagya scheme) ಅಡಿಯಲ್ಲಿ ಫಲಾನುಭವಿಗಳ ಖಾತೆಗೆ (Bank Account) ಹಣ ಜಮಾ ಮಾಡುವುದು ಸರ್ಕಾರಕ್ಕೆ ಸವಾಲಾಗಿದೆ

ಮಾಹಿತಿಯ ಪ್ರಕಾರ ಈಗಾಗಲೇ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವ (DBT) ವಿಷಯದಲ್ಲಿ ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ಹಣ ಸಂದಾಯ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ಯಾವುದೇ ಕಾರಣಕ್ಕೂ ಗೃಹಿಣಿ ಅಥವಾ ಯಾವೊಬ್ಬ ಫಲಾನುಭವಿ ಕೂಡ ಸರ್ಕಾರದ ಯೋಜನೆಯನ್ನು ಮಿಸ್ ಮಾಡಿಕೊಳ್ಳಬಾರದು ಎಂದು ಸಿಎಂ ಸಿದ್ದರಾಮಯ್ಯ (CM siddaramaiah) ಹೊಸದಾಗಿರುವ ತಂತ್ರ ರೂಪಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಎಪಿಎಲ್, ಬಿಪಿಎಲ್ ಕಾರ್ಡುದಾರರಿಗೆ ಸಿಹಿ ಸುದ್ದಿ, ಇನ್ಮುಂದೆ ಇನ್ನಷ್ಟು ಉಚಿತ ಸೇವೆ

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಬಾರದೆ ಇರುವವರಿಗೆ ಹೊಸ ಆದೇಶ

Gruha Lakshmi Yojanaಪ್ರತಿ ತಿಂಗಳು ಕೂಡ ರಾಜ್ಯ ಸರ್ಕಾರ ಪರಿಶೀಲನ ಸಭೆ ನಡೆಸುತ್ತಿದ್ದು ಈ ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ, ಈ ಎಲ್ಲಾ ಸಮಸ್ಯೆಗಳಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ (State government) ಮಹತ್ವದ ಕ್ರಮ ಕೈಗೊಳ್ಳಲಿದೆ.

ಇತ್ತೀಚಿಗೆ ವಿಧಾನಸೌಧದಲ್ಲಿ (vidhana soudha) ಸಭೆಯನ್ನು ನಡೆಸಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಮಿತಿ ಅನ್ನಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ಹಣ ಜಮಾ (Money Deposit) ಆಗದಿದ್ದರೆ ಯಾವುದೇ ರೀತಿಯ ತಾಂತ್ರಿಕ ಸಮಸ್ಯೆ (technical error) ಇದ್ದರೂ ಕೂಡ ಅದನ್ನು ನಿವಾರಿಸಿಕೊಂಡು ಇದೇ ಡಿಸೆಂಬರ್ ತಿಂಗಳ (month of December) ಕೊನೆಯ ಒಳಗೆ ಹಣ ಸಂದಾಯ ಮಾಡುವುದಾಗಿ ತಿಳಿಸಲಾಗಿದೆ.

ಗೃಹಲಕ್ಷ್ಮಿ 4ನೇ ಕಂತಿನ ಹಣಕ್ಕೆ ಹೊಸ ಕಂಡೀಷನ್; ಪಾಲಿಸದೆ ಇದ್ರೆ ಹಣ ಬರೋಕೆ ಚಾನ್ಸೇ ಇಲ್ಲ

ಅದಾಲತ್ ನಡೆಸಿಯಾದರು ಹಣ ಜಮಾ! (Gruha Lakshmi Adaalat)

ಸಿಎಂ ಸಿದ್ದರಾಮಯ್ಯಸರ್ಕಾರ ಈಗಾಗಲೇ ನೀಡಿರುವ ಮಾಹಿತಿಯ ಪ್ರಕಾರ ಅಂಗನವಾಡಿ ಸಹಾಯಕಿಯರು ಯಾವ ಮಹಿಳೆಯ ಖಾತೆಗೆ ಹಣ ಸಂದಾಯ (Money Transfer) ಆಗಿಲ್ಲವೋ ಅಂತಹ ಮಹಿಳೆಯ ಜೊತೆಗೆ ಬ್ಯಾಂಕಿಗೆ ಹೋಗಿ ಬ್ಯಾಂಕನ ಖಾತೆಯಲ್ಲಿ (Bank account ) ಇರುವ ಸಮಸ್ಯೆಗಳನ್ನು ಪರಿಹರಿಸಿ ಕೊಡಲಿದ್ದಾರೆ.

ಬಳಿಕ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡಲಾಗುತ್ತದೆ, ಡಿಸೆಂಬರ್ ಒಳಗೆ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ ಈವರೆಗೆ ಬಾಕಿ ಇರುವ ಹಣವನ್ನು ಕೂಡ ವರ್ಗಾವಣೆ (Money Transfer) ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗೃಹಲಕ್ಷ್ಮಿ ಅದಾಲತ್ ನಡೆಸಲು ಸರ್ಕಾರ ನಿರ್ಧರಿಸಿದ್ದು, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ಯಾವುದೇ ಸಮಸ್ಯೆ ಇದ್ದರೂ ಕೂಡ ಗ್ರಾಮ ಪಂಚಾಯತ್ ಸಿಬ್ಬಂದಿಗಳು (gram Panchayat officer) ಅದನ್ನ ನಿವಾರಿಸಿಕೊಡಲಿದ್ದಾರೆ

ರೇಷನ್ ಕಾರ್ಡ್ ರದ್ದುಪಡಿಗೆ ಆದೇಶ; ಇಂತಹವರಿಗೆ ಸಿಗೋಲ್ಲ ಬಿಪಿಎಲ್ ಕಾರ್ಡ್ ಬೆನಿಫಿಟ್

ಅಷ್ಟೇ ಅಲ್ಲದೆ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಯೊಂದು ಮನೆಗೂ ಭೇಟಿ ನೀಡಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ. ಯಾವ ಮಹಿಳೆ ತನಗೆ ಹಣ ಸಂದಾಯ ಆಗದೇ ಇದ್ದರೂ ಕೂಡ ದೂರು ದಾಖಲಿಸಬಹುದು

ಈ ರೀತಿ ಮಾಡಿದರೆ ತಾಂತ್ರಿಕ ದೋಷ ಇದ್ದರೆ ಅದನ್ನು ತಕ್ಷಣ ನಿವಾರಣೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಮಹಿಳೆಯ ಖಾತೆಯಲ್ಲಿ ಸಮಸ್ಯೆ ಇದ್ದರೆ ಅದನ್ನು ಕೂಡ ಪರಿಹರಿಸಿ ಕೊಡಲಾಗುವುದು. ಡಿಸೆಂಬರ್ ತಿಂಗಳು ಮುಗಿಯುವುದರ ಒಳಗೆ ಅಂದರೆ 2023 ವರ್ಷ ಮುಗಿಯುವದರ ಒಳಗೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಖಾತೆಗೆ (Bank Account) ಶೇಕಡ 100 ರಷ್ಟು ಹಣ ವರ್ಗಾವಣೆ ಆಗಲಿದೆ ಎಂದು ಸರ್ಕಾರ ಭರವಸೆ ನೀಡಿದೆ.

Changes in Gruha Lakshmi and Annabhagya Yojana Money Transfer

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories