ರೈತರಿಗೆ ಗುಡ್ ನ್ಯೂಸ್; ಈ ಯೋಜನೆಯ ಮೂಲಕ ಪಡೆಯಬಹುದು 20 ಲಕ್ಷ ಸಬ್ಸಿಡಿ
ಕೃಷಿ ಕ್ಷೇತ್ರ (agriculture field) ಇನ್ನಷ್ಟು ಮುಂದುವರೆಯಬೇಕಿದೆ. ಕೇವಲ ಸಾಂಪ್ರದಾಯಿಕ ಕೃಷಿ ಬೇಸಾಯ (traditional agriculture cropping method) ಪದ್ಧತಿಯನ್ನು ಮಾತ್ರ ನಂಬಿಕೊಂಡು ಮುಂದೆ ಹೋದರೆ ಕೃಷಿಗೆ ಹೆಚ್ಚಿನ ಜೀವನ ಇರುವುದಿಲ್ಲ. ಹೀಗಾಗಿ ಕೃಷಿಯಲ್ಲಿ ಆಧುನಿಕತೆಯನ್ನು, ತಂತ್ರಜ್ಞಾನ (technology in agriculture) ವನ್ನು ಅಳವಡಿಸುವುದು ಬಹಳ ಮುಖ್ಯ.
ಇತ್ತೀಚಿನ ದಿನಗಳಲ್ಲಿ ಯುವಕರು ಕೂಡ ಕೃಷಿಯ ಬಗ್ಗೆ ಒಲವು ತೋರಿಸುತ್ತಿದ್ದಾರೆ. ಯುವಕರು ಕೃಷಿಯನ್ನು ಇನ್ನಷ್ಟು ಮೆಚ್ಚಿಕೊಳ್ಳುವಂತೆ ಮಾಡಲು ಸರ್ಕಾರ “ಕೃಷಿ ನವೋದ್ಯಮ” ಯೋಜನೆಯನ್ನು ಜಾರಿಗೆ ತಂದಿದೆ. ಇದು ದೇಶದಲ್ಲಿ ವಾಸಿಸುವ ರೈತ ಮಕ್ಕಳಿಗೆ ಹೆಚ್ಚಿನ ಪ್ರಯೋಜನ ಆಗಬಹುದು.
ಗೃಹಲಕ್ಷ್ಮಿ ಹಣ ಬರುವಂತೆ ಮಾಡಿಕೊಳ್ಳಲು ಇಂದೇ ಕೊನೆ! ಹಣ ಬಾರದವರಿಗೆ ಸೂಚನೆ
ಕೃಷಿ ನವೋದ್ಯಮ ಯೋಜನೆ! (Agriculture startup scheme)
ಕೃಷಿಯಲ್ಲಿ ತಾಂತ್ರಿಕತೆ, ಆವಿಷ್ಕಾರ ನವೀನ ಪರಿಕಲ್ಪನೆಗಳನ್ನು ಅಳವಡಿಸುವ ಉದ್ದೇಶದಿಂದ ಕೃಷಿ ನವೋದ್ಯಮ ಯೋಜನೆ ಜಾರಿಗೆ ತರಲಾಗಿದೆ.
ಕೃಷಿ ನವೋದ್ಯಮ ಯೋಜನೆಯ ಪ್ರಯೋಜನಗಳು! (Benefits of agriculture start up)
ಈ ಯೋಜನೆಯಲ್ಲಿ ಕೃಷಿಯ ಬಗ್ಗೆ ಆಸಕ್ತಿ ಹೊಂದಿರುವ ಯುವಕರು, ಕೃಷಿಯ ಬಗ್ಗೆ ಹೊಸ ಕಲ್ಪನೆಯನ್ನು ಹೊಂದಿದ್ದು ಕೃಷಿಯಲ್ಲಿಯೇ ಏನಾದರೂ ಸಾಧನೆ ಮಾಡಬೇಕು, ಎಂದು ಬಯಸುವ ಇಂದಿನ ಜನರೇಶನ್ ಹುಡುಗರಿಗಾಗಿ ಶೇಕಡ 50. ನಷ್ಟು ಅಂದರೆ ಸುಮಾರು 20 ಲಕ್ಷ ರೂಪಾಯಿಗಳ ವರೆಗೆ ಸರ್ಕಾರ ಸಬ್ಸಿಡಿ ನೀಡಲಿದೆ.
ಇಂತಹ ರೇಷನ್ ಕಾರ್ಡುಗಳು ಕ್ಯಾನ್ಸಲ್! ನಿಮ್ಮ ಕಾರ್ಡ್ ಸ್ಟೇಟಸ್ ಈ ರೀತಿ ಚೆಕ್ ಮಾಡಿ
ಕರೋನಾ ಸಮಯದ ನಂತರ, ಯುವಕರು ನಗರ ಪ್ರದೇಶವನ್ನು ಬಿಟ್ಟು ಗ್ರಾಮದ ಕಡೆಗೆ ಮುಖ ಮಾಡಿ ಕೃಷಿ ಉದ್ಯಮದಲ್ಲಿ (agriculture business) ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕೃಷಿಯನ್ನು ಉತ್ತೇಜಿಸುವುದರ ಜೊತೆಗೆ ಯುವಕರಿಗೆ ಉದ್ಯೋಗಾವಕಾಶವನ್ನು (job opportunities) ಕೂಡ ಒದಗಿಸಿಕೊಡಲು ಕೃಷಿ ನವೋದ್ಯಮ ಯೋಜನೆ ಜಾರಿಗೆ ತರಲಾಗಿದೆ.
ರಾಜ್ಯ ಸರ್ಕಾರ ಕೃಷಿ ನವೋದ್ಯಮ ಯೋಜನೆಯನ್ನು ಉತ್ತೇಜಿಸುವ ಸಲುವಾಗಿ 10 ಕೋಟಿಗಳನ್ನು ರಾಜ್ಯ ಬಜೆಟ್ (state budget) ನಲ್ಲಿ ಮೀಸಲಿಟ್ಟಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ. ಮುಂದಿನ ಬಜೆಟ್ ನಲ್ಲಿ ಈ ಮೊತ್ತವನ್ನು ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ. ಬ್ಯಾಂಕ್ ಮೂಲಕ ಗರಿಷ್ಠ 50 ಲಕ್ಷ ರೂಪಾಯಿಗಳ ವರೆಗೂ ಕೂಡ ಸಬ್ಸಿಡಿ ಸಾಲ (subsidy loan) ಪಡೆದುಕೊಳ್ಳಲು ಈ ಯೋಜನೆ ಸಹಕಾರಿಯಾಗಿದೆ.
ಇಂದಿನಿಂದ ಗೃಹಲಕ್ಷ್ಮಿ ಸಮಸ್ಯೆ ಬಂದ್! ಹಣ ಸಿಗದವರಿಗೆ ಸ್ಪಾಟ್ ಅಲ್ಲೇ ಪರಿಹಾರ
ಫಲಾನುಭವಿಗಳ ಆಯ್ಕೆ ಹೇಗೆ?
ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ ಹಾಗೂ ಸಲಹಾ ಸಮಿತಿಯ ಒಪ್ಪಿಗೆಯ ನಂತರ ಮಟ್ಟದಲ್ಲಿಯೂ ಅನುಮೋದನೆ ಪಡೆದುಕೊಳ್ಳಬೇಕು. ಬಳಿಕ ಫಲಾನುಭವಿಗಳ ಅರ್ಜಿಯನ್ನು ಪರಿಶೀಲಿಸಿ ಆಯ್ಕೆಯಾದ ಫಲಾನುಭವಿಗಳಿಗೆ ಕೃಷಿ ಚಟುವಟಿಕೆ ಮಾಡಲು ಸುಲಭ ಸಾಲ ಸೌಲಭ್ಯ ಕಲ್ಪಿಸಿ ಕೊಡಲಾಗುತ್ತದೆ.
ಕೃಷಿ ನವೋದ್ಯಮ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಆಸಕ್ತ ಅಭ್ಯರ್ಥಿಗಳು, ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.
ದೇಶದಲ್ಲಿ 70,000ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳು ಇವೆ. ಆದರೆ ಕೃಷಿಗೆ ಸಂಬಂಧಿಸಿದ ನವೋದ್ಯಮಗಳು ಕಡಿಮೆ. ಇದನ್ನು ಉತ್ತೇಜಿಸುವ ಸಲುವಾಗಿ ಸಬ್ಸಿಡಿ ನೀಡಲು ಸರ್ಕಾರ ಮುಂದಾಗಿದೆ. ಯುವ ಕೃಷಿಕರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
ಇನ್ಮುಂದೆ ಯಾರಿಗೂ ಸಿಗಲ್ಲ ಬಿಪಿಎಲ್ ಕಾರ್ಡ್; ಸರ್ಕಾರದಿಂದ ಹೊರಬಿತ್ತು ಆದೇಶ
Good news for farmers, 20 lakh subsidy can be availed through this scheme