Karnataka NewsBangalore News

ರೈತರಿಗೆ ಗುಡ್ ನ್ಯೂಸ್; ಕೃಷಿ ಸಾಲದ ಬಡ್ಡಿ ಮನ್ನಾ, ಯಾರಿಗೆ ಸಿಗಲಿದೆ ಬೆನಿಫಿಟ್?

agriculture loan : ಈ ಬಾರಿ ಮುಂಗಾರು ಹಾಗೂ ಹಿಂಗಾರು ಮಳೆ, ಬೆಳೆ ಅಭಾವದಿಂದ ರೈತರು (farmers) ಸಾಕಷ್ಟು ಕಷ್ಟ ಪಡುವಂತೆ ಆಗಿದೆ. ಸರ್ಕಾರ ರಾಜ್ಯದ ಸಾಕಷ್ಟು ಪ್ರದೇಶಗಳನ್ನ ಬರಪೀಡಿತ ಪ್ರದೇಶ ಎಂಬುದಾಗಿ ಘೋಷಿಸಿದ್ದು, ಈ ಎಲ್ಲಾ ಸ್ಥಳಗಳಲ್ಲಿಯೂ ಕೂಡ ವಾಸಿಸುವ ಅ ರೈತರಿಗೆ ಬರ ಪರಿಹಾರವನ್ನು ಕೂಡ ಘೋಷಿಸಲಾಗಿದೆ.

ರೈತರಿಗೆ ಈಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು, ಈ ವರ್ಷದ ಕೃಷಿ ಸಾಲದ ಬಡ್ಡಿ ಮನ್ನಾ (Loan Interest waived) ಮಾಡಲು ಸರ್ಕಾರ ನಿರ್ಧರಿಸಿದೆ. ಕೃಷಿ ಸಾಲದ (agriculture loan) ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಲು ಬ್ಯಾಂಕ್ ಗಳಿಗೂ ಕೂಡ ಮನವಿ ಮಾಡಲಾಗಿದೆ.

This is the Right time to register for crop compensation amount to be deposit

ಯುವನಿಧಿ ಯೋಜನೆ ಹಣ ಪಡೆಯಲು ಈ ದಾಖಲೆ ಕಡ್ಡಾಯ! ಇಲ್ಲಿದೆ ಹೊಸ ರೂಲ್ಸ್

ರೈತರ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ಯಾರೆಲ್ಲ ಅರ್ಹರು ಎಂಬುದನ್ನು ನೋಡೋಣ.

*2023 ಡಿಸೆಂಬರ್ 31ಕ್ಕೆ ಸುಸ್ತಿಯಾಗುವ ಮಧ್ಯಮ ಅವಧಿ ಹಾಗೂ ದೀರ್ಘಾವಧಿ ಕೃಷಿ ಸಾಲವನ್ನು ಕೃಷಿ ಚಟುವಟಿಕೆಗಳಿಗಾಗಿ ತೆಗೆದುಕೊಂಡಿದ್ದರೆ, ಅಂತಹ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಆಗಲಿದೆ. ಆದರೆ ಫೆಬ್ರವರಿ 29 2024ಕ್ಕೆ ಸಾಲದ ಸಂಪೂರ್ಣ ಅಸಲು ಪಾವತಿ ಮಾಡಿರಬೇಕು.

*ಕೃಷಿಯೇತರ ಸಾಲಕ್ಕೆ ಇದು ಅನ್ವಯವಾಗುವುದಿಲ್ಲ.

* ನಿಗದಿತ ಸಹಕಾರ ಸಂಘಗಳನ್ನು ಹೊರತುಪಡಿಸಿ ಬೇರೆ ಕಡೆ ಸಾಲ ತೆಗೆದುಕೊಂಡಿದ್ದರೆ ಈ ಯೋಜನೆ ಅನ್ವಯವಾಗುವುದಿಲ್ಲ.

ಇಷ್ಟು ದಿನ ಗೃಹಲಕ್ಷ್ಮಿ ಯೋಜನೆ ಹಣ ಪಡೆದವರಿಗೆ ರಾತ್ರೋ-ರಾತ್ರಿ ಹೊಸ ಅಪ್ಡೇಟ್!

Loan*ಪಶು ಸಂಗೋಪನೆ, ಹೈನುಗಾರಿಕೆ, ಪ್ಲಾಂಟೇಶನ್, ತೋಟಗಾರಿಕೆ, ಮೀನು ಕೃಷಿ, ರೇಷ್ಮೆ ಕೃಷಿ, ಸಾವಯವ ಕೃಷಿ, ಭೂ ಅಭಿವೃದ್ಧಿ ನಬಾರ್ಡ್ (NABARD) ಸೂಚಿಸಿದ ಮೊದಲಾದ ಕೃಷಿ ಕಾರಣಗಳಿಗಾಗಿ ಮಧ್ಯಮ ಅವಧಿಯ ಹಾಗೂ ದೀರ್ಘಾವಧಿಯ ಸಾಲ ತೆಗೆದುಕೊಂಡಿದ್ದರೆ ಅಂತಹ ಸಾಲದ ಬಡ್ಡಿ ಮನ್ನ ಮಾಡಲಾಗುವುದು.

*ರಾಜ್ಯ ಸರ್ಕಾರದ ಬಡ್ಡಿ ಮನ್ನಾ, ಪದ್ಧತಿಯ ಅಡಿ ಕೃಷಿ ಸಾಲ ಅಥವಾ ಕೃಷಿ ಚಟುವಟಿಕೆಗಳಿಗಾಗಿ ಸಾಲ ತೆಗೆದುಕೊಂಡರೆ ಅನ್ವಯವಾಗುತ್ತದೆ.

ರೇಷನ್ ಕಾರ್ಡ್ ಬದಲಾವಣೆ ಹಾಗೂ ತಿದ್ದುಪಡಿಗೆ ಅವಕಾಶ! ಇಲ್ಲಿದೆ ಮಹತ್ವದ ಮಾಹಿತಿ

*10 ಲಕ್ಷದವರೆಗಿನ ಸಾಲದ ಬಡ್ಡಿ ಮನ್ನಾ ಮಾಡಲಾಗುತ್ತದೆ.

*ಫೆಬ್ರುವರಿ 29 2024ಕ್ಕೆ ಸಂಪೂರ್ಣ ಅಸಲು ಪಾವತಿ ಮಾಡಿದ್ದರೆ ಮಾತ್ರ, ಬಡ್ಡಿ ಮನ್ನಾ ಮಾಡಲಾಗುತ್ತದೆ.

*ಮಾರಟೋರಿಯಂ ಅವಧಿಯಲ್ಲಿ ಸುಸ್ತಿ ಯಾಗುವ ಸಾಲಕ್ಕೆ ಬಡ್ಡಿ ಮನ್ನಾ ಅನ್ವಯವಾಗಲಿದೆ.

Good news for farmers, Agricultural loan interest waiver

Our Whatsapp Channel is Live Now 👇

Whatsapp Channel

Related Stories