ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ದೊಡ್ಡ ಶಾಕಿಂಗ್ ಸುದ್ದಿ ನೀಡಿದ ಸರ್ಕಾರ! ಮುಂದಿನ ಆದೇಶದವರೆಗೆ ಸಿಗೋಲ್ಲ ಕಾರ್ಡ್
ರಾಜ್ಯ ಸರ್ಕಾರ ನೀಡುತ್ತಿರುವ ಅನ್ನಭಾಗ್ಯ ಸೌಲಭ್ಯವನ್ನು (Annabhagya Scheme) ಪಡೆಯಲು ಹಾಗೂ ಸರ್ಕಾರದಿಂದ ಸಿಗುವ ಇನ್ನಿತರ ಸೌಲಭ್ಯಗಳನ್ನು ಪಡೆಯಲು ರೇಷನ್ ಕಾರ್ಡ್ (Ration Card) ಬಹಳ ಅಗತ್ಯ. ಇನ್ನು ಇತ್ತೀಚೆಗೆ ರಾಜ್ಯ ಸರ್ಕಾರ ಅನೇಕ ಹೊಸ ಯೋಜನೆಗಳನ್ನು (Govt Schemes) ಜಾರಿಗೆ ತರುವ ಮೂಲಕ ಜನರ ಆರ್ಥಿಕ ಪರಿಸ್ಥಿತಿಯನ್ನು ಸ್ಥಿರ ಪಡಿಸಲು ಮುಂದಾಗಿದೆ.
ಇನ್ನು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ರೀತಿಯೆ ರೇಷನ್ ಕಾರ್ಡ್ ಕೂಡ ಬಹಳ ಮುಖ್ಯವಾದ ದಾಖಲೆಗಳಲ್ಲಿ ಒಂದು. ಸರ್ಕಾರ ರೇಷನ್ ಕಾರ್ಡ್ ಹೊಂದಿರುವ ಸದಸ್ಯರಿಗೆ ಅನೇಕ ಸೌಲಭ್ಯ ಸೌಲತ್ತುಗಳನ್ನು ಒದಗಿಸುತ್ತಿದೆ.
ಇನ್ನು ನೀವು ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಅನ್ನು ಹೊಂದಿದ್ದರೆ ನೀವು ಸರ್ಕಾರದಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು. ಇನ್ನು ಇತ್ತೀಚೆಗೆ ಸರ್ಕಾರವು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಆಹ್ವಾನ ನೀಡಿತ್ತು.
ಇನ್ನು ಬಿಪಿಎಲ್ ಪಡಿತರ ಚೀಟಿಗೆ ಹೆಚ್ಚಿನ ಸೌಲಭ್ಯಗಳು ಸಿಗುತ್ತಿರುವ ಕಾರಣ ಎಲ್ಲರೂ ಬಿಪಿಎಲ್ ಪಡಿತರ ಚೀಟಿ ಮಾಡಿಸಿಕೊಳ್ಳಲು ಅರ್ಜಿಗಳನ್ನು ಸಲಿಸುತ್ತಿದ್ದಾರೆ. ಈಗಾಗಲೇ ಅನೇಕರು ಬಿಪಿಎಲ್ ಪಡಿತರ ಚೀಟಿಗೆ ಅರ್ಜಿಗಳನ್ನು ಸಲ್ಲಿಸಿದ್ದು, ಇದೀಗ ರಾಜ್ಯ ಸರ್ಕಾರವೂ ಅರ್ಜಿ ಸಲ್ಲಿಸಿದವರಿಗೆ ಊಹಿಸದ ಶಾಕ್ ನೀಡಿದೆ.
ಶೀಘ್ರದಲ್ಲೇ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಆರೋಗ್ಯ ಸಚಿವ ಮುನಿಯಪ್ಪ ಅವರು ಈ ಹಿಂದೆ ಮಾಹಿತಿ ಹಂಚಿಕೊಂಡಿದ್ದರು. ಇನ್ನು ಇದೀಗ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅನೇಕರು ಈಗಾಗಲೇ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ರಾಜ್ಯದ ಎಲ್ಲಾ 6 ವರ್ಷದ ಮಕ್ಕಳಿಗಾಗಿ ಹೊಸ ನಿಯಮ ಜಾರಿಗೆ ತಂದ ಸರಕಾರ! ರಾತ್ರಿಯಿಂದಲೇ ಜಾರಿಗೆ
ಇನ್ನು ಇದೀಗ ಸರ್ಕಾರವೂ ಹೊಸ ಆದೇಶವನ್ನು ಹೊರಡಿಸುವ ಮೂಲಕ ಅರ್ಜಿದಾರರಿಗೆ ದೊಡ್ಡ ಶಾಕ್ ನೀಡಿದೆ. ಹೌದು, ಸರ್ಕಾರದ ಮುಂದಿನ ಆದೇಶದವರೆಗೆ ಹೊಸ ರೇಷನ್ ಕಾರ್ಡ್ ಗಳನ್ನು ಮಂಜೂರು ಮಾಡಬಾರದು ಎನ್ನುವ ಆದೇಶ ಹೊರಡಿಸಲಾಗಿದೆ ಎನ್ನಲಾಗುತ್ತಿದೆ.
ಇನ್ನು ಮಾತು ಮುಂದುವರೆಸಿದ ಸಚಿವ ಮುನಿಯಪ್ಪ ಅವರು ಈ ಹಿಂದೆ ಸರ್ಕಾರವೂ 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಘೋಷಣೆ ಮಾಡಿತ್ತು, ಆದರೆ ಅಕ್ಕಿಯ ಕೊರತೆಯಿಂದಾಗಿ ಇದೀಗ 10 ಕೆಜಿ ಬದಲು 5 ಕೆಜಿ ಅಕ್ಕಿ, ಹಾಗೂ ಇನ್ನು 5 ಕೆಜಿ ಅಕ್ಕಿಯ ಬದಲು ಹಣ ನೀಡುವುದಾಗಿ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ. ಇನ್ನು ಇದೆ ಸೆಪ್ಟಂಬರ್ ತಿಂಗಳಿನಿಂದ ಅನ್ನಭಾಗ್ಯ ಸೌಲಭ್ಯವನ್ನು ಜನರು ಪಡೆಯಬಹುದು ಎಂದಿದ್ದಾರೆ.
Government gave big shocking news to those who applied for new ration card