ಮನೆ ಬಾಗಿಲಿಗೆ ಸರ್ಕಾರಿ ಸೇವೆ! ಸರ್ಕಾರದಿಂದ ಇನ್ನೊಂದು ಮಹತ್ವದ ಯೋಜನೆ
ಜನಮಿತ್ರ ನೇಮಕಾತಿ (Jana Mitra recruitment) ಆರಂಭವಾಗಲಿದ್ದು ಹಳ್ಳಿಯಲ್ಲಿ ಸರ್ಕಾರದ ಪ್ರತಿಯೊಂದು ಸೇವೆಗಳು ಮನೆ ಬಾಗಿಲಿಗೆ ತಲುಪಿಸಲು ಜನಮಿತ್ರ ಸಿಬ್ಬಂದಿಗಳೇ ಬರಲಿದ್ದಾರೆ.
ನಿರುದ್ಯೋಗಿಗಳಿಗೆ (unemployed) ಉದ್ಯೋಗ (government job) ವು ಸಿಗಬೇಕು, ಅದೇ ರೀತಿ ಸರ್ಕಾರದ ಯೋಜನೆಗಳು ಫಲಾನುಭವಿಗಳ ಮನೆ ಮನೆಗೆ ತಲುಪಬೇಕು. ಈ ಎರಡು ಕೆಲಸಗಳನ್ನು ಒಂದೇ ಯೋಜನೆಯ ಮೂಲಕ ಸರ್ಕಾರ ಸಾಧಿಸಲು ಹೊರಟಿದೆ.
ಜನಮಿತ್ರ ನೇಮಕಾತಿ (Jana Mitra recruitment) ಆರಂಭವಾಗಲಿದ್ದು ಹಳ್ಳಿಯಲ್ಲಿ ಸರ್ಕಾರದ ಪ್ರತಿಯೊಂದು ಸೇವೆಗಳು ಮನೆ ಬಾಗಿಲಿಗೆ ತಲುಪಿಸಲು ಜನಮಿತ್ರ ಸಿಬ್ಬಂದಿಗಳೇ ಬರಲಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಮರು-ಪರಿಶೀಲನೆ! 26,000 ಮಹಿಳೆಯರಿಗೆ ಸಿಗೋದಿಲ್ಲ ಹಣ
ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರ್ಕಾರದ ಮಾಸ್ಟರ್ ಪ್ಲಾನ್!
ನಿರುದ್ಯೋಗ ಸಮಸ್ಯೆ (employment problem) ಇಂದು ಯುವಕರನ್ನು ಬಹುವಾಗಿ ಕಾಡುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ನಿರುದ್ಯೋಗಿ ಯುವಕ ಯುವತಿಯರನ್ನು ಕಾಣಬಹುದು ಉದ್ಯೋಗ ಮಾಡುವ ಮನಸಿದ್ದರೆ ಕೂಡ ಎಷ್ಟು ಯುವಕ ಯುವತಿಯರಿಗೆ ಇಂದು ಉದ್ಯೋಗ ಸಿಗುತ್ತಿಲ್ಲ.
ಇದೀಗ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದರ ಮೂಲಕ ಸರ್ಕಾರಿ ಸೇವೆಯಲ್ಲಿ ತೊಡಗಿಕೊಳ್ಳುವಂತೆ ಮಾಡಲು ಸರ್ಕಾರ ಯೋಜನೆ ರೂಪಿಸಿದೆ.
ಜನಮಿತ್ರದ ಮೂಲಕ ಸರ್ಕಾರಿ ಸೇವೆ!
ಈ ಆಡಳಿತ ಇಲಾಖೆಯ ಮೂಲಕ ಜನರಿಗೆ ಜನ ಮಿತ್ರ ಸಿಬ್ಬಂದಿಗಳಿಂದ ನೇರವಾಗಿ ಎಲ್ಲಾ ಸರ್ಕಾರಿ ಸೇವೆಗಳು (government facility) ಲಭ್ಯವಾಗುವಂತೆ ಮಾಡಲಾಗುವುದು. ಜನಮಿತ್ರ ಯೋಜನೆಯಿಂದಾಗಿ ಜನರು ಯಾವುದೇ ಸರ್ಕಾರಿ ಕೆಲಸಕ್ಕೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಅಗತ್ಯ ಇಲ್ಲ.
ಸರ್ಕಾರಿ ಕೆಲಸ ಮಾಡಿಸಿ ಕೊಡುತ್ತೇವೆ ಎಂದು ಹೇಳಿ ಜನರಿಂದ ಹಣ ತೆಗೆದುಕೊಳ್ಳುವ ಮಧ್ಯವರ್ತಿಗಳ (agent) ಕಾಟ ಇನ್ನು ಮುಂದೆ ಇರುವುದಿಲ್ಲ. ಗ್ರಾಮೀಣ ಉದ್ಯೋಗಾವಕಾಶಕ್ಕೆ ಉತ್ತೇಜನ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ರೇಷನ್ ಕಾರ್ಡ್ ಇರೋರಿಗೆ ಇನ್ನಷ್ಟು ಬೆನಿಫಿಟ್! ನಾಳೆಯಿಂದ ಹೊಸ ಸೇವೆ ಆರಂಭ
25000 ಜನರಿಗೆ ಸಿಗಲಿದೆ ಕೆಲಸ!
ಜನ ಮಿತ್ರ ಯೋಜನೆ ಆರಂಭ ಆದರೆ ಸರ್ಕಾರಿ ಕೆಲಸಗಳಾದ ಪ್ರಮಾಣ ಪತ್ರ ಮಾಡಿಸಿಕೊಳ್ಳುವುದು, ರಸಗೊಬ್ಬರ ಸಾಲಕ್ಕೆ ಅರ್ಜಿ ಸಲ್ಲಿಸುವುದು, ಜಾತಿ ಪ್ರಮಾಣ ಪತ್ರ, ವಿವಿಧ ಲೈಸನ್ಸ್ ಗಳನ್ನು ನವೀಕರಿಸುವುದು, ಟ್ರೇಡರ್ ಲೈಸೆನ್ಸ್, ಅರ್ಜಿ ಸಲ್ಲಿಸುವುದು, ಅಂಕಪಟ್ಟಿ ಪಡೆದುಕೊಳ್ಳಲು, ವಿವಿಧ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು ಹೀಗೆ ಹಲವಾರು ಸರ್ಕಾರಿ ಸೇವೆಗಳನ್ನು ಜನರಿಗೆ ಸುಲಭವಾಗಿ ಒದಗಿಸುವ ಸಲುವಾಗಿ 25,000 ಜನರನ್ನು ಜನಮಿತ್ರ ಯೋಜನೆ ಅಡಿಯಲ್ಲಿ ನೇಮಕ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ.
ರೈತರಿಗೆ ಭರ್ಜರಿ ಗಿಫ್ಟ್! ಕೃಷಿ ಉಪಕರಣಗಳ ಖರೀದಿಗೆ ಸಿಗಲಿದೆ 50% ರಿಯಾಯಿತಿ!
ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು! (Eligibilities)
ಗ್ರಾಮ ಪಂಚಾಯಿತಿ (Gram Panchayat) ವ್ಯಾಪ್ತಿಯವರಾಗಿರಬೇಕು
10ನೇ ತರಗತಿ ಉತ್ತೀರ್ಣರಾಗಿರಬೇಕು.
ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಸ್ವಂತ ದ್ವಿಚಕ್ರ ವಾಹನ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು ಯಾವುದೇ ಕಾನೂನು ಪ್ರಕರಣದಿಂದ ಮುಕ್ತವಾಗಿರಬೇಕು.
ಆಯ್ಕೆ ಮಾಡುವುದು ಹೇಗೆ? (Selection process)
ಆನ್ಲೈನ್ ನಲ್ಲಿಯೇ ಅರ್ಜಿ (online application) ಪರಿಶೀಲನೆ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಹಾಗೂ ಆನ್ಲೈನ್ ನಲ್ಲಿಯೇ ತರಬೇತಿ ನೀಡಲಾಗುತ್ತದೆ.
ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಪೆಂಡಿಂಗ್ ಹಣ ಪಡೆಯಲು ಈ ರೀತಿ ಮಾಡಿ!
ಅರ್ಜಿ ಶುಲ್ಕ! (Application fee)
ಅರ್ಜಿ ಶುಲ್ಕವಾಗಿ 50 ರೂಪಾಯಿ ಹಾಗೂ ಪ್ರಮಾಣ ಪತ್ರ ಸಲ್ಲಿಕೆ 25 ರೂಪಾಯಿಗಳನ್ನು ಚಾರ್ಜ್ ಮಾಡಲಾಗುತ್ತದೆ. ಇದರಲ್ಲಿ 50 ರೂಪಾಯಿ ಸರ್ಕಾರಕ್ಕೆ ಹಾಗೂ ಉಳಿದ ಹಣ ಜನ ಮಿತ್ರನಿಗೆ ಸೇರುತ್ತದೆ. ಯೋಜನೆಗೆ ಸರ್ಕಾರದ ಅನುಮೋದನೆ ಸಿಕ್ಕ ನಂತರ ಕಂದಾಯ ಇಲಾಖೆ ಪ್ರತಿ ಜಿಲ್ಲೆಯ ಒಂದು ಹಳ್ಳಿಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಿದೆ.
ಜನಮಿತ್ರ ಯೋಜನೆಯ ಅಡಿಯಲ್ಲಿ ಬೆಳಿಗ್ಗೆ 8ರಿಂದ ಸಂಜೆ 8 ಗಂಟೆಯವರೆಗೂ ಕೂಡ ನಿಮ್ಮ ಯಾವುದೇ ಸಮಸ್ಯೆ ಇದ್ದರೆ ಅಥವಾ ದೂರು ಸಲ್ಲಿಕೆ ಮಾಡುವುದಿದ್ದರೆ ಅವಕಾಶ ನೀಡಲಾಗುವುದು. ಜನ ಮಿತ್ರ ಮೊಬೈಲ್ ಸಂಖ್ಯೆಗೆ ಮಿಸ್ ಕಾಲ್ ನೀಡಿದರೆ ಜನಮಿತ್ರ ಆಪ್ ಮೂಲಕ, ಯಾವುದೇ ಸಮಸ್ಯೆ ಪರಿಹಾರಕ್ಕೆ ಜನಮಿತ್ರನಿಗೆ ನಿಮ್ಮ ಮಾಹಿತಿಯನ್ನು ಕೊಡಲಾಗುತ್ತದೆ. ಅವರು ಮಾಹಿತಿ ಸಿಕ್ಕ ಒಂದು ಗಂಟೆಗಳ ಒಳಗಾಗಿ ನಿಮ್ಮನ್ನು ಸಂಪರ್ಕಿಸುತ್ತಾರೆ. ಹಳ್ಳಿಯಲ್ಲಿ ವಾಸಿಸುವವರಿಗೆ ಅತ್ಯಂತ ಉತ್ತಮವಾಗಿರುವ ಹಾಗೂ ಪ್ರಯೋಜನಕಾರಿಯಾದ ಯೋಜನೆ ಇದಾಗಿದೆ.
ಅನ್ನಭಾಗ್ಯ ಯೋಜನೆಗೆ ಹೊಸ ರೂಲ್ಸ್; ಇನ್ಮುಂದೆ ಹಣ ಪಡೆಯೋಕೆ ಈ ಕೆಲಸ ಕಡ್ಡಾಯ
Government service at doorstep, Another Scheme from Govt