ಇಂತಹವರಿಗೆ ಸಿಗಲಿದೆ ಉಚಿತ ಮನೆ, ಸರ್ಕಾರದಿಂದ ಆರನೇ ಗ್ಯಾರಂಟಿ ಯೋಜನೆ ಘೋಷಣೆ
Subsidy Loan for Home : ರಾಜ್ಯ ಕಾಂಗ್ರೆಸ್ ಸರ್ಕಾರ (state government) ಅಧಿಕಾರಕ್ಕೆ ಬರುವುದಕ್ಕೂ ಮೊದಲು ತನ್ನ ಪ್ರಣಾಳಿಕೆಯಲ್ಲಿ ಹೇಳಿದ ಗ್ಯಾರಂಟಿ ಯೋಜನೆಗಳ (guarantee schemes) ಅನುಷ್ಠಾನಗೊಳಿಸುವಲ್ಲಿ ನಿರತವಾಗಿದೆ
ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು ಜನರಿಗೆ ಇದರಿಂದ ಪ್ರಯೋಜನ ಆಗಲಿದೆ. ಇದರ ಜೊತೆಗೆ ಆರನೇ ಗ್ಯಾರಂಟಿ ಯೋಜನೆಯಲ್ಲೂ ಕೂಡ ಘೋಷಿಸಿದ್ದು ವಸತಿ ನಿರ್ಮಾಣದ (housing scheme) ಜವಾಬ್ದಾರಿ ಹೊತ್ತಿದೆ.
ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡಿದ್ರೆ ಗುಡ್ ನ್ಯೂಸ್! ಸದ್ಯದಲ್ಲೇ 2.95 ಲಕ್ಷ ಕಾರ್ಡುಗಳು ವಿತರಣೆ
ಕೊಳಗೇರಿ ಅಭಿವೃದ್ಧಿ ಮಂಡಳಿ ಅಡಿಯಲ್ಲಿ ಮನೆ ನಿರ್ಮಾಣ! (Free housing scheme)
ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ (Zameer Ahmed Khan) ಖಾನ್ ಅವರು ರಾಜ್ಯದ ಜನತೆಗೆ ಉಚಿತ ಮನೆ ನೀಡುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮ (Rajiv Gandhi vasati Yojana) ಬಡವರಿಗೆ ಸೂರು ನಿರ್ಮಿಸಿ (House For Poor People) ಕೊಡುವ ಜವಾಬ್ದಾರಿ ಹೊತ್ತಿತ್ತು. ಆದರೆ ಜನರಿಗೆ ಕೊಡಬೇಕಾಗಿರುವ ಹಣ ಇನ್ನು ಬಾಕಿ ಉಳಿದಿದೆ. ಹಾಗಾಗಿ ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸಲಿದೆ. ಅಪೂರ್ಣಗೊಂಡಿರುವ 2.32 ಲಕ್ಷ ಮನೆಗಳನ್ನು ಮುಂದಿನ ವರ್ಷದ ಅಂತ್ಯದ ಒಳಗೆ ಪೂರ್ಣಗೊಳಿಸಲು ಸರ್ಕಾರ ತೀರ್ಮಾನಿಸಿದೆ.
ರಾಜ್ಯ ರೈತರಿಗಾಗಿ ಹೊಸ ಯೋಜನೆ; ಸೋಲಾರ್ ಪಂಪ್ ಸೆಟ್ ಗೆ 1.5 ಲಕ್ಷ ಸಹಾಯಧನ; ಅರ್ಜಿ ಸಲ್ಲಿಸಿ
ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ!
2.32 ಲಕ್ಷ ಉಚಿತ ಮನೆಯನ್ನು ನೀಡುವ ಭರವಸೆಯನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ನೀಡಿದ್ದಾರೆ. ಹಂಪಿಯಲ್ಲಿ ನಡೆದ ಕರ್ನಾಟಕ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು 8,000 ಕೋಟಿ ರೂಪಾಯಿಗಳನ್ನು ಸರ್ಕಾರ ಹಂತ ಹಂತವಾಗಿ ಉಚಿತ ಮನೆ ನಿರ್ಮಾಣ ಮಾಡಿಕೊಡಲು ಬಿಡುಗಡೆ ಮಾಡಲಿದೆ. ಈ ಸಂಬಂಧ ಹಣಕಾಸು ಇಲಾಖೆ (financer department) ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.
ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ಲವೇ! ಸರ್ಕಾರವೇ ಕೊಡುತ್ತೆ ಪರಿಹಾರ; ಅರ್ಜಿ ಸಲ್ಲಿಸಿ
ಸರ್ಕಾರದಿಂದ ಸಿಗುತ್ತೆ ಸಬ್ಸಿಡಿ!
ಜಮೀರ್ ಅಹ್ಮದ್ ಖಾನ್ ಅವರು ತಿಳಿಸಿರುವಂತೆ ಈವರೆಗೆ ನೆನೆಗುದಿಗೆ ಬಿದ್ದಿರುವ ಮನೆ ನಿರ್ಮಾಣ ಕಾರ್ಯವನ್ನು ಸರ್ಕಾರ ಮುಂದುವರೆಸಲಿದೆ. ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ಅಭಿವೃದ್ಧಿ ಮಂಡಳಿ ಬಡವರಿಗೆ ನಿರ್ಮಿಸಿ ಕೊಡಲು ಹೊರಟಿರುವ ಮನೆಯ ವೆಚ್ಚ 7 ಲಕ್ಷ ರೂಪಾಯಿ.
ಇದಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಎರಡೂ ಕಡೆಯಿಂದ ಮೂರು ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿ (Subsidy Loan) ಸಿಗುತ್ತದೆ. ಇದರಲ್ಲಿ ನಾಲ್ಕು ಲಕ್ಷ ರೂಪಾಯಿಗಳನ್ನು ಫಲಾನುಭವಿಗಳು ಭರಿಸಬೇಕು. ಹಂತ ಹಂತವಾಗಿ ಹಣವನ್ನು ಪಾವತಿ ಮಾಡಬಹುದು. ಒಟ್ಟಿನಲ್ಲಿ ಮುಂದಿನ ವರ್ಷದ ಅಂತ್ಯದ ಒಳಗೆ ರಾಜ್ಯದ್ಯಂತ ಎರಡುವರೆ ಲಕ್ಷದಷ್ಟು ಮನೆ ನಿರ್ಮಾಣ ಮಾಡುವ ಭರವಸೆ ಸರ್ಕಾರ ನೀಡಿದೆ.
ಬಂಪರ್ ಆಫರ್; ಜಮೀನು ಖರೀದಿಸುವುದಕ್ಕೆ ಸರ್ಕಾರವೇ ಕೊಡುತ್ತೆ 25 ಲಕ್ಷ ಸಹಾಯಧನ