Sandalwood News

ಸಂಪತ್ತಿಗೆ ಸವಾಲ್ ಸಿನಿಮಾದ ಬಜಾರಿ-ಬಾಯ್ಬಡಕಿ ಪಾತ್ರಕ್ಕೆ ಮಂಜುಳಾನೇ ನಾಯಕಿಯಾಗಬೇಕೆಂದು ಅಣ್ಣವ್ರು ಪಟ್ಟು ಹಿಡಿದು ಕುಳಿತಿದ್ದು ಯಾಕೆ ಗೊತ್ತಾ?

ಸ್ನೇಹಿತರೆ, ನಟಿ ಮಂಜುಳಾ (Actress Manjula) ಅವರ ಹೆಸರು ಕೇಳುತ್ತಿದ್ದ ಹಾಗೆ ಅವರ ವಟ ವಟ ಮಾತು, ಜಂಬದ ನಡಿಗೆ ಹಾಗೂ ಯಾವುದಕ್ಕೂ ಸೋಲೊಪ್ಪಿಕೊಳ್ಳದಂತಹ ವ್ಯಕ್ತಿತ್ವ ನಮ್ಮೆಲ್ಲರ ನೆನಪಿಗೆ ಬಂದುಬಿಡುತ್ತದೆ.

ಹೀಗೆ ಸಂಪತ್ತಿಗೆ ಸವಾಲ್ ಸಿನಿಮಾದ (Sampathige Savaal Cinema) ಮೂಲಕ ಬಾಯಿಬಡಕಿ ಜಗಳಗಂಟಿ ಎಂಬ ಬಿರುದುಗಳನ್ನು ಪಡೆದುಕೊಂಡು ಇನ್ನಷ್ಟು ಹೊಸ ಹೊಸ ಸಿನಿಮಾಗಳ ಆಫರ್ ಪಡೆದುಕೊಂಡಂತಹ ಮಂಜುಳಾ ಅವರಿಗಿಂತ ಮೊದಲಾಗಿ ಬೇರೆ ಸ್ಟಾರ್ ನಟಿ ಈ ಸಿನಿಮಾಗೆ ನಾಯಕನಟಿಯಾಗಿ ಆಯ್ಕೆಯಾಗಿರುತ್ತಾರೆ.

How Actress Manjula Selected For Sampathige Savaal Cinema Durgi Character

ಖಳನಾಟನಾಗಿ ಅಭಿನಯಿಸುತ್ತಿದ್ದ ಶಶಿಕುಮಾರ್ ನಾಯಕ ನಟನಾಗಿದ್ದು ಹೇಗೆ ಗೊತ್ತಾ? ಧಿಡೀರ್ ಅವರ ಬೇಡಿಕೆ ಕುಸಿಯಲು ಕಾರಣವೇನು?

ಆದರೆ ಸ್ವತಃ ರಾಜ್ ಕುಮಾರ್ (Dr Rajkumar) ಅವರೇ ಮಂಜುಳಾ ಅವರನ್ನು ಈ ಸಿನಿಮಾದಲ್ಲಿ ಹಾಕಿಕೊಳ್ಳಿ ಎಂದು ಹೇಳಿದ್ದು ಯಾಕೆ? ಈ ಮುನ್ನ ಆಯ್ಕೆಯಾಗಿದಂತಹ ನಾಯಕ ನಟಿ ಯಾರು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೆ ಆಗಿನ ಕಾಲದಲ್ಲಿ ಕಾದಂಬರಿಯನ್ನು ಸಿನಿಮಾವನ್ನಾಗಿಸಿ ಇದರಲ್ಲಿ ಬರುವಂತಹ ಪಾತ್ರದೊಳಗೆ ಪ್ರತಿಯೊಬ್ಬ ಕಲಾವಿದರು ಪರಕಾಯ ಪ್ರವೇಶ ಮಾಡಿ ಜನರ ಮನಸ್ಸನ್ನು ಸೆಳೆಯುತ್ತಿದ್ದರು.

50 ವರ್ಷವಾದರೂ ನಟಿ ಸಿತಾರ ಮದುವೆಯಾಗದೆ ಯಾರಿಗಾಗಿ ಕಾಯುತ್ತಿದ್ದಾರೆ ಗೊತ್ತೇ? ಅಷ್ಟಕ್ಕೂ ಆತ ಯಾರು ಗೊತ್ತಾ?

ಹೀಗೆ ಅಣ್ಣಾವ್ರು ಸಂಪತ್ತಿಗೆ ಸವಾಲ್ ಸಿನಿಮಾದ ನಾಯಕರಾಗಿ ಆಯ್ಕೆಯಾಗುತ್ತಾರೆ ಇನ್ನು ಸಿನಿಮಾದಲ್ಲಿ ಬರುವಂತಹ ರಗಡ್ ಸಾವ್ಕಾರ ಸಿದ್ದಪ್ಪನ ಪಾತ್ರ ವಜ್ರಮುನಿಯವರನ್ನು ಆಯ್ಕೆ ಮಾಡುತ್ತಾರೆ. ಇನ್ನು ನಾಯಕ ಹಾಗೂ ವಿಲ್ಲನ್ನ ನಡುವೆ ಒಂದು ಪಾತ್ರ ಬರುತ್ತದೆ ಅದುವೇ ದುರ್ಗಿ ನಾಯಕ ನಟಿಯ ಪಾತ್ರ.

ಈ ಒಂದು ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂದು ಜೋರಾದ ಚರ್ಚೆಯನ್ನ ನಡೆಸುತ್ತಿರುವಾಗ ಪಾರ್ವತಮ್ಮನವರು ಜಯಂತಿಯವರ ಹೆಸರನ್ನು ಸೂಚಿಸುತ್ತಾರೆ. ಹೌದು ಅಲ್ಲಿಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮ ಹಾವಭಾವ ಹಾಗೂ ಅದ್ಭುತ ಅಭಿನಯದ ಮೂಲಕವೇ ಅಭಿನಯ ಶಾರದೆ ಎಂಬ ಬಿರುದನ್ನು ಗಿಟ್ಟಿಸಿಕೊಂಡಿದ್ದಂತಹ ಜಯಂತಿಯವರನ್ನು ಪಾರ್ವತಮ್ಮ ಫೈನಲ್ ಮಾಡುತ್ತಾರೆ.

ಭಕ್ತ ಪ್ರಹ್ಲಾದ ಚಿತ್ರಕ್ಕೆ ಅಪ್ಪು ಪಡೆದ ಸಂಭಾವನೆ ಎಷ್ಟು ಗೊತ್ತಾ? ತಿಳಿದರೆ ನಿಜಕ್ಕೂ ನೀವು ನಂಬೋದಿಲ್ಲ!

Actress Manjula Sampathige Savaal

ಆದರೆ ಡಾಕ್ಟರ್ ರಾಜಕುಮಾರ್ ಅವರು ನೀನು ಹೇಳುತ್ತಿರುವುದೇನು ಸರಿ ಆದರೆ ಇದು ಕಾದಂಬರಿ ಆಧಾರಿತ ಚಿತ್ರವಾದ್ದರಿಂದ ಖಂಡಿತ ಜನರ ಮನಸ್ಸಿನಲ್ಲಿ ಆಳವಾಗಿ ಕೂರುತ್ತದೆ ಹೀಗಾಗಿ ಹೊಸ ನಟಿಯನ್ನು ನಮ್ಮ ಸಿನಿಮಾಗೆ ಹಾಕಿಕೊಂಡರೆ ಇನ್ನಷ್ಟು ಚೆನ್ನಾಗಿರುತ್ತದೆ ಎಂದು ಯೋಚಿಸಿ ಹೊಸ ನಟಿಯ ಅನ್ವೇಷಣೆಯಲ್ಲಿ ಪಾರ್ವತಮ್ಮ ರಾಜಕುಮಾರ್ ತೊಡಗಿಕೊಳ್ಳುತ್ತಾರೆ.

ಕಾಂತಾರ ಸಿನಿಮಾಗೆ ನಟಿ ಸಪ್ತಮಿ ಗೌಡ ಡಿಮ್ಯಾಂಡ್ ಮಾಡಿದ ಹಣ ಎಷ್ಟು ಕೋಟಿ ಗೊತ್ತಾ? ಚಿತ್ರ ಯಶಸ್ಸು ಕಂಡ ನಂತರ ರಿಷಬ್ ಶೆಟ್ಟಿ ಕೊಟ್ಟಿದ್ದೆಷ್ಟು?

ಆಗ ಕನ್ನಡ ಸಿನಿಮಾ ರಂಗಕ್ಕೆ ಕರೆದುಕೊಂಡು ಬಂದಂತಹ ಪ್ರತಿಭೆಯೇ ಮಂಜುಳಾ, ತಮ್ಮ ಪ್ರಥಮ ಸಿನಿಮಾದಲ್ಲಿಯೇ ಡಾ. ರಾಜಕುಮಾರ್ ಅವರಂತಹ ಅದ್ಭುತ ನಟರೊಂದಿಗೆ ತೆರೆ ಹಂಚಿಕೊಂಡು ತಮ್ಮ ದುರ್ಗಿ ಪಾತ್ರದ ಮೂಲಕ ಬಜಾರಿ ಜಗಳಗಂಟಿ ಎಂಬೆಲ್ಲಾ ಬಿರುದು ಪಡೆದು ಪಾತ್ರಕ್ಕೆ ತಕ್ಕನಾಗಿದ್ದ ಅಭಿನಯವನ್ನು ಮಾಡುವ ಮೂಲಕ ಮಂಜುಳಾ ಅವರು ಅದೆಷ್ಟೋ ಕನ್ನಡಿಗರ ಹೃದಯವನ್ನು ಸಂಪತ್ತಿಗೆ ಸವಾಲ್ ಸಿನಿಮಾದ ಮೂಲಕ ಗೆದ್ದಿದ್ದರು ಎಂದರೆ ತಪ್ಪಾಗಲಾರದು.

How Actress Manjula Selected For Sampathige Savaal Cinema Durgi Character

Our Whatsapp Channel is Live Now 👇

Whatsapp Channel

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories