ರವಿಚಂದ್ರನ್ ಮತ್ತು ಹಂಸಲೇಖ ಸ್ನೇಹದ ಮಧ್ಯೆ ಹುಳಿ ಹಿಂಡಿದ್ದು ಯಾರು? ಇಬ್ಬರ ನಡುವೆ ಬಿರುಕಿಗೆ ಕಾರಣವೇನು ಗೊತ್ತಾ?
Actor Ravichandran and Hamsalekha : ಡಾಕ್ಟರ್ ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಅಂಬರೀಶ್ ಅವರಂತಹ ದಿಗ್ಗಜ ನಟರುಗಳ ಆಳ್ವಿಕೆ ಇದ್ದಂತಹ 80-90 ದಶಕದಲ್ಲಿ ರವಿಚಂದ್ರನ್ ತಮ್ಮ ಅಮೋಘ ಅಭಿನಯ ಹಾಗೂ ನಿರ್ದೇಶನ ನಿರ್ಮಾಣದ ಮೂಲಕ ಗುರುತಿಸಿಕೊಂಡರು.
ಇದಕ್ಕೆ ಹಂಸಲೇಖ ಅವರು ಮುಖ್ಯ ಕಾರಣರಾಗಿದ್ದರು ಏಕೆಂದರೆ ಹಂಸಲೇಖ ನೀಡುತ್ತಿದ್ದಂತಹ ಹಾಡುಗಳೆಲ್ಲವೂ (Songs) ಮ್ಯೂಸಿಕಲ್ ಬ್ಲಾಕ್ ಭಾಸ್ಟರ್ ಹಿಟ್ ಪಟ್ಟಿಗೆ ಸೇರುತ್ತಿದ್ದವು. ಇಂತಹ ಹಾಡಿಗಳಿಂದಲೇ ಸಿನಿಮಾ ಯಶಸ್ವಿಯಾಗುತ್ತಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ.

ಹೀಗಿರುವಾಗ ಬಹಳನೇ ಅನ್ಯೂನ್ಯವಾಗಿದ್ದ ಹಂಸಲೇಖ ಹಾಗೂ ರವಿಚಂದ್ರನ್ ಹಲವು ತಿಂಗಳುಗಳ ಕಾಲ ಮಾತನಾಡದೆ ದೂರಾದರಂತೆ. ಹಾಗಾದ್ರೆ ಇವರಿಬ್ಬರ ನಡುವೆ ಮನಸ್ತಾಪ ಮೂಡಲು ಕಾರಣವಾದರೂ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ರವಿಚಂದ್ರನ್ ಅವರು ಪ್ರೇಮಲೋಕ, ಅಂಜದಗಂಡು, ರಣಧೀರ ಮುಂತಾದ ಯಶಸ್ವಿ ಸಿನಿಮಾಗಳ (Kannada Movies) ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ಇಂದಿಗೂ ಕೂಡ ಅಷ್ಟೇ ಬೇಡಿಕೆಯನ್ನು ಪಡೆದುಕೊಂಡಿರುವಂತಹ ನಟರಾಗಿದ್ದಾರೆ.
ಅದರಲ್ಲೂ ಹೆಚ್ಚಿನ ಮಹಿಳಾ ಅಭಿಮಾನಿಗಳಿರುವಂತಹ ಕನ್ನಡದ ನಟ (Kannada Actor) ಎಂಬ ಹೆಗ್ಗಳಿಕೆಗೂ ರವಿಮಾಮ ಪಾತ್ರರಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ತೆರೆಯ ಮೇಲೆ ಅದ್ಭುತವಾಗಿ ವರ್ಕ್ ಆಗುತ್ತಿದ್ದ ಹಂಸಲೇಖ ಮತ್ತು ರವಿಚಂದ್ರನ್ ಅವರ ಕಾಂಬಿನೇಷನ್.
ಹೌದು ಗೆಳೆಯರೇ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದ್ದ ಇವರಿಬ್ಬರ ಜುಗಲ್ ಬಂದಿ ಆಗಿನ ಸಿನಿ ರಸಿಕರ ಮನಸ್ಸನ್ನು ಮುದಗೊಳಿಸುವಲ್ಲಿ ಯಶಸ್ವಿಯಾಗುತ್ತಿತ್ತು.
ಕನ್ನಡ ಸಿನಿಮಾ ಮೂಲಕ ಎಂಟ್ರಿ ಕೊಟ್ಟು ಬಾಲಿವುಡ್, ಹಾಲಿವುಡ್ ನಲ್ಲಿ ಮಿಂಚುತ್ತಿರುವ ಸ್ಟಾರ್ ನಟಿಯರು ಯಾರ್ಯಾರು ಗೊತ್ತಾ?
ಹೀಗಿರುವಾಗ ಹಂಸಲೇಖ ಮತ್ತು ರವಿಚಂದ್ರನ್ ಮಾತನಾಡದೆ ದೂರಾಗಿದ್ದಾರೆ ಎಂಬ ವರದಿ ಆಗಿನ ಕಾಲದಲ್ಲಿ ಬಹು ದೊಡ್ಡ ಮಟ್ಟದ ಸಂಚಲನ ಸೃಷ್ಟಿ ಮಾಡಿತ್ತು. ಹೌದು ಗೆಳೆಯರೇ ಅದು 1988ರ ಅಂಜದ ಗಂಡು ಸಿನಿಮಾ ಬಿಡುಗಡೆಯ ಸಮಯ.
ಈ ಚಿತ್ರದಲ್ಲಿ ಹಂಸಲೇಖ ಅವರ ಮ್ಯೂಸಿಕಲ್ ಕಾಂಪೋಸಿಶನ್ ಇರುತ್ತದೆ, ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಎಂಬ ಹಾಡನ್ನು ಬೆಂಗಳೂರಿನಲ್ಲಿ ರೆಕಾರ್ಡಿಂಗ್ ಮಾಡೋಣವೆಂದು ಹಂಸಲೇಖ ರವಿಚಂದ್ರನ್ ಅವರನ್ನು ಕೇಳಿದಾಗ, ರವಿಚಂದ್ರನ್ ಇದಕ್ಕೆ ಒಪ್ಪಿಗೆ ಸೂಚಿಸುವುದಿಲ್ಲ.
ಕೊನೆಗೂ ಮದುವೆಯ ಬಗ್ಗೆ ಮೌನ ಮುರಿದ 36 ವರ್ಷದ ನಿರೂಪಕಿ ಅನುಶ್ರೀ ಯಾವಾಗ ಮದುವೆ ಆಗ್ತಾರಂತೆ ಗೊತ್ತಾ?
ಹೌದು ಗೆಳೆಯರೇ ಆಗಸ್ಟೆ ಮದ್ರಾಸಿನಿಂದ ಬೆಂಗಳೂರಿಗೆ ಕನ್ನಡ ಚಿತ್ರರಂಗ ಶಿಫ್ಟ್ ಆಗುತ್ತಿತ್ತು. ಈ ಸಂದರ್ಭದಲ್ಲಿ ಆಧುನಿಕ ಉಪಕರಣಗಳೆಲ್ಲವೂ ಬೆಂಗಳೂರಿನಲ್ಲಿ ಲಭ್ಯವಿರುವುದಿಲ್ಲ ಹೀಗಾಗಿ ಮದ್ರಾಸ್ನಲ್ಲಿಯೇ ಮಾಡಿದರೆ ಚೆನ್ನಾಗಿರುತ್ತದೆ ಎಂಬ ಅಭಿಪ್ರಾಯ ರವಿಮಾಮನದಾಗಿತ್ತು. ಆದರೆ ಹಂಸಲೇಖಾ ಅವರು ಇದಕ್ಕೆ ಅಲ್ಲಗೆಳೆದು ಮದ್ರಾಸ್ನಲ್ಲೆ ರೆಕಾರ್ಡಿಂಗ್ ಮಾಡೋಣ ಎನ್ನುತ್ತಾರೆ.
ತನ್ನ ಮಾತನ್ನು ರವಿಚಂದ್ರನ್ ಕೇಳದೆ ಇದ್ದದ್ದಕ್ಕೆ ಕೋಪಿಸಿಕೊಂಡರು ನಾನು ಯಾವುದೇ ಕಾರಣಕ್ಕೂ ಈ ಹಾಡನ್ನು ಮದ್ರಾಸ್ನಲ್ಲಿ ರೆಕಾರ್ಡಿಂಗ್ ಮಾಡೋದಿಲ್ಲ ಎಂದು ಹೇಳಿ ಹೊರಟುಬಿಟ್ಟರು.
ಮುಲಾಜಿಲ್ಲದೆ, ಫಸ್ಟ್ ನೈಟ್ ಅಲ್ಲಿ ನೀವೆಲ್ಲ ಏನ್ ಮಾಡ್ತೀರೋ? ನಾನು ಅದನ್ನೇ ಮಾಡಿದೀನಿ ಎಂದ ರಚಿತಾ ರಾಮ್!
ಹೀಗೆ ತಿಂಗಳಾನುಗಟ್ಟಲೆ ಹಾಡು ಹಾಗೆ ಉಳಿದಿರುತ್ತದೆ ಈ ಮಧ್ಯ ರವಿಚಂದ್ರನ್ ಹಾಗೂ ಹಂಸಲೇಖ ಅವರು ಮಾತನಾಡುತ್ತಿರಲಿಲ್ಲ ಫೋನ್ ಕರೆಯು ಇರಲಿಲ್ಲ. ಈ ಮಧ್ಯೆ ಹಂಸಲೇಖ ಅವರು ತಮ್ಮ ಶಪಥದಂತೆ ಬೆಂಗಳೂರಿನಲ್ಲಿ ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಎಂಬ ಹಾಡನ್ನು ರೆಕಾರ್ಡಿಂಗ್ ಮಾಡಿಸಿ ರವಿಚಂದ್ರನ್ ಅವರ ಮುಂದೆ ಪ್ರೆಸೆಂಟ್ ಮಾಡಿದಾಗ ಹಾಡಿನ ವೈಶಿಷ್ಟ್ಯತೆಯನ್ನು ಕಂಡು ನಿಬ್ಬೆರಿಗಾಗಿ ಹೋದರು. ಹಂಸಲೇಖ ಅವರನ್ನು ಅಪ್ಪಿಕೊಂಡು ಕ್ಷಮೆಯಾಸಿಸಿ ಅವರ ಕಾರ್ಯ ವೈಖರಿಯನ್ನು ಹಾಡಿ ಹೋಗಳಿದರು.
Interesting Facts About Kannada Actor Ravichandran and Music Director Hamsalekha