ಇನ್ಮುಂದೆ ವಿಷ್ಣು ಜೊತೆ ನಟಿಸುವುದಿಲ್ಲ, ದಿಗ್ಗಜರು ಸಿನಿಮಾನೇ ಕೊನೆ ಎಂದು ನಟ ಅಂಬರೀಶ್ ಹೇಳಿದ್ಯಾಕೆ? ಇವರಿಬ್ಬರ ಸ್ನೇಹದಲ್ಲಿ ಬಿರುಕು ಮೂಡಿತ್ತ?
ದಿಗ್ಗಜರು ಸಿನಿಮಾ ಬಿಡುಗಡೆಯಾದಾಗ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಅಂಬಿ ಈ ಚಿತ್ರನೇ ಲಾಸ್ಟ್ ಮತ್ತೆಂದು ನಿನ್ನೊಂದಿಗೆ ನಟಿಸುವುದಿಲ್ಲ ಎಂದು ವಿಷ್ಣುವರ್ಧನ್ ಅವರಿಗೆ ಹೇಳಿಬಿಡುತ್ತಾರೆ.
ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ತಯಾರಾದ ನಾಗರಹಾವು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ (Kannada Film Industry) ಪ್ರವೇಶ ಮಾಡಿದಂತಹ ನಟ ವಿಷ್ಣುವರ್ಧನ್ (Actor Vishnuvardhan) ತಮ್ಮ ಅಮೋಘ ಅಭಿನಯದ ಮೂಲಕ ಯಶಸ್ವಿ ಸಿನಿಮಾಗಳನ್ನು ಕನ್ನಡಕ್ಕೆ ಕೊಡುಗೆಯಾಗಿ ನೀಡುವುದರ ಜೊತೆಗೆ ಅಸಂಖ್ಯಾತ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡರು.
ಹೀಗೆ 200ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿಮಾ ರಂಗದ (Kannada Movies) ಯಶಸ್ಸನ್ನು ಉತ್ತುಂಗದ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಮೈಲುಗಲ್ಲನ್ನು ಹಾಕಿದಂತಹ ಮೇರು ನಟ.
ವಿಷ್ಣುವರ್ಧನ್ ಅವರೊಂದಿಗೆ ಅದ್ಭುತವಾದ ಬಾಂಧವ್ಯವನ್ನು ಬೆಳೆಸಿಕೊಂಡು ಕುಚಿಕು ಗೆಳೆಯರು ಎಂದು ಕರೆಯಲ್ಪಡುತ್ತಿದ್ದ ಅಂಬರೀಶ್ (Actor Ambareesh) ಕೂಡ ತಮ್ಮದೇ ಆದ ವಿಶೇಷ ಜಾನರ್ ಇರುವಂತಹ ಸಿನಿಮಾಗಳ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡಿದಂತಹ ನಟ.
ತೆರೆಯ ಮೇಲೆ ಇವರಿಬ್ಬರ ಜೋಡಿ ಎಷ್ಟು ಅದ್ಭುತವಾಗಿ ಕಾಣಿಸಿಕೊಳ್ಳುತ್ತಿತ್ತೋ ತೆರೆಯ ಹಿಂದೆಯೂ ಅಷ್ಟೇ ಒಳ್ಳೆಯ ಸ್ನೇಹ ಬಾಂಧವ್ಯವನ್ನು ಅಂಬಿ ಹಾಗೂ ವಿಷ್ಣುವರ್ಧನ್ ಹೊಂದಿದ್ದರು.
ಅದರಲ್ಲೂ ಇವರಿಬ್ಬರ ಕಾಂಬಿನೇಷನ್ನಲ್ಲಿ ತೆರೆಗೆ ಬಂದ ದಿಗ್ಗಜರು ಚಿತ್ರವನ್ನು ಎಂದಾದರೂ ಕನ್ನಡಿಗರು ಮರೆಯಲು ಸಾಧ್ಯವೇ? ಸ್ನೇಹ ಎಂಬ ಹೆಸರು ಕೇಳಿದೊಡನೆ ಕುಚಿಕು ಕುಚಿಕು ಎಂದು ಹಾಡಲು ಪ್ರಾರಂಭಿಸಿ ಬಿಡುತ್ತಾರೆ ಅಷ್ಟರ ಮಟ್ಟಿಗೆ ಈ ಒಂದು ಸಿನಿಮಾ ಕನ್ನಡಿಗರನ್ನು ಆಕರ್ಷಿಸಿತ್ತು.
ಅಷ್ಟಕ್ಕೂ ಅಂಬಿ ಹೀಗೆಲ್ಲ ಮಾತನಾಡಲು ಕಾರಣವಾದರೂ ಏನು? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸುವ ಹೊರಟಿದ್ದು ನಿಮಗೂ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಸ್ನೇಹಿತರೆ, ಇವರಿಬ್ಬರೂ ದಿಗ್ಗಜರು ಸಿನಿಮಾಗೂ ಮುಂಚೆ ಸಾಕಷ್ಟು ಚಿತ್ರಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಆದರೆ ದಿಗ್ಗಜರು ಸಿನಿಮಾ ಅಂಬರೀಶ್ ಹಾಗೂ ವಿಷ್ಣುವರ್ಧನ್ ಅವರ ಸ್ನೇಹಕ್ಕೆ ವಿಶೇಷ ಮೆರುಗನ್ನು ತದಂತಹ ಚಿತ್ರ ಎಂದರೆ ತಪ್ಪಾಗಲಾರದು.
ಈ ಕಾರಣದಿಂದ ಸಂದರ್ಶನ ಒಂದರಲ್ಲಿ ಮಾತನಾಡುವಾಗ “ಬೇರೆ ಸಿನಿಮಾಗಳಿಗಿಂತ ದಿಗ್ಗಜರು ಸಿನಿಮಾ ನನ್ನ ಹಾಗೂ ವಿಷ್ಣುವಿನ ಸ್ನೇಹ ಸಂಬಂಧಕ್ಕೆ ಇರುವಂತಹ ಹೆಗ್ಗುರುತು. ಈ ಸಿನಿಮಾ ನನಗಂತೂ ಬಹಳನೇ ಸ್ಪೆಷಲ್ ಆಗಿದ್ದು, ಇದಾದ ನಂತರ ಯಾವ ಸಿನಿಮಾ ಕೂಡ ಒಟ್ಟಿಗೆ ಮಾಡಬೇಕೆನಿಸುತ್ತಿಲ್ಲ” ಎಂದಿದ್ದರು.
ಕೆಜಿಎಫ್ ಅಲ್ಲ, ಕಾಂತಾರ ಅಲ್ಲ.. ಬಾಹುಬಲಿಯಂತೂ ಅಲ್ವೇ ಅಲ್ಲ, ಮೊದಲ ಕನ್ನಡ ಪ್ಯಾನ್ ಇಂಡಿಯಾ ಸಿನಿಮಾ ಯಾವುದು ಗೊತ್ತಾ?
ಕಾಕತಾಳಿಯ ಎಂಬಂತೆ ವಿಷ್ಣುವರ್ಧನ್ ಹಾಗೂ ಅಂಬರೀಶ್ ಮತ್ತೆಂದು ಒಟ್ಟಿಗೆ ಅಭಿನಯಿಸುವಂತಹ ಅವಕಾಶವೇ ದೊರಕಲಿಲ್ಲ. ದಿಗ್ಗಜರು ಸಿನಿಮಾವೇ ವಿಷ್ಣು ಹಾಗೂ ಅಂಬರೀಶ್ ಸ್ನೇಹದ ಕೊನೆಯ ಚಿತ್ರವಾಗಿ ಉಳಿದುಬಿಟ್ಟಿದೆ.
Kannada Actor Ambareesh Comments on that Days About Diggajaru Movie and Vishnuvardhan
Follow us On
Google News |