ಶಂಕರ್ ನಾಗ್ ನಿರ್ದೇಶನದ ಒಂದು ಮುತ್ತಿನ ಕಥೆ ಸಿನಿಮಾ ಪಾರ್ವತಮ್ಮನವರಿಗೆ ಇಷ್ಟವಾಗಿರಲಿಲ್ಲ! ಕಾರಣ ಏನು ಗೊತ್ತಾ?
ಡಾಕ್ಟರ್ ರಾಜಕುಮಾರ್ ಅವರ ಪ್ರತಿಯೊಂದು ಸಿನಿಮಾಗಳ ಆಯ್ಕೆ ಮಾಡುತ್ತಿದ್ದದ್ದು ಅವರ ಧರ್ಮಪತ್ನಿ ಪಾರ್ವತಮ್ಮ ರಾಜಕುಮಾರ್, ಅಣ್ಣವರಿಗೆ ಯಾವ ಸಿನಿಮಾ ಸರಿಹೊಂದುತ್ತದೆ? ಹಾಗೂ ಅವರಿಗೆ ತಕ್ಕನಾದ ಯಾವ ನಟಿ ಇರಬೇಕು ಎಂಬುದಲ್ಲವನ್ನು ಸೂಕ್ಷ್ಮವಾಗಿ ಗ್ರಹಿಸುವಂತಹ ಶಕ್ತಿಯನ್ನು ಪಾರ್ವತಮ್ಮನವರು ಹೊಂದಿದ್ದರು.
ಡಾಕ್ಟರ್ ರಾಜಕುಮಾರ್ (Dr Rajkumar) ಅವರ ನಟನೆ, ಕಲೆಯ ಮೇಲಿನ ಗೌರವ, ಅಭಿಮಾನಿಗಳ ಮೇಲಿನ ಪ್ರೀತಿ ಮತ್ತೆ ಯಾರಲ್ಲೂ ಕಾಣಲು ಸಾಧ್ಯವೇ ಇಲ್ಲ, ಅವರನ್ನು ಕೇವಲ ಪದಗಳಲ್ಲಿ ವರ್ಣಿಸಲು ಸಹ ಎಂದಿಗೂ ಆಗದು, ಹೀಗೆ ಡಾಕ್ಟರ್ ರಾಜಕುಮಾರ್ ಅವರ ಅಭಿನಯವನ್ನು ಪ್ರತಿಯೊಬ್ಬ ಕನ್ನಡಿಗರು ಎಷ್ಟು ಮೆಚ್ಚಿಕೊಳ್ಳುತ್ತಾರೋ ಅಷ್ಟೇ ಸಮಾನವಾದ ಪ್ರೀತಿಯನ್ನು ಶಂಕರ್ ನಾಗ್ (Actor Shankar Nag) ಅವರ ನಿರ್ದೇಶನಕ್ಕೂ ತೋರುತ್ತಾರೆ.
ಹೌದು ಗೆಳೆಯರೇ ಕೇವಲ ನಟನೆಯಲ್ಲಿ ಮಾತ್ರವಲ್ಲ ನಿರ್ದೇಶನದಲ್ಲಿಯೂ ತಮ್ಮ ಚಾಲಾಕಿತನವನ್ನು ತೋರಿದಂತಹ ಶಂಕರ್ ನಾಗ್ ಅಣ್ಣವರಿಗೆ ಒಂದು ಮುತ್ತಿನ ಕಥೆ ಸಿನಿಮಾ ನಿರ್ದೇಶನ ಮಾಡಬೇಕು ಎಂದು ನಿರ್ಧರಿಸಿದಾಗ ಪಾರ್ವತಮ್ಮ ರಾಜಕುಮಾರ್ (Parvathamma Rajkumar) ಈ ಒಂದು ಕಥೆಯನ್ನು ಒಪ್ಪಿಕೊಂಡಿರಲಿಲ್ಲವಂತೆ.
ಟಾಪ್ ನಟಿ ಎನಿಸಿಕೊಂಡಿದ್ದ ಮೋಹಕ ತಾರೆ ರಮ್ಯಾ ಇದ್ದಕಿದ್ದ ಹಾಗೆ ನಟನೆ ನಿಲ್ಲಿಸಿದ್ದು ಯಾಕೆ ಗೊತ್ತೇ?
ಅಷ್ಟಕ್ಕೂ ಇದರ ಅಸಲಿ ಕಾರಣವೇನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಡಾಕ್ಟರ್ ರಾಜಕುಮಾರ್ ಅವರ ಪ್ರತಿಯೊಂದು ಸಿನಿಮಾಗಳ ಆಯ್ಕೆ ಮಾಡುತ್ತಿದ್ದದ್ದು ಅವರ ಧರ್ಮಪತ್ನಿ ಪಾರ್ವತಮ್ಮ ರಾಜಕುಮಾರ್, ಅಣ್ಣವರಿಗೆ ಯಾವ ಸಿನಿಮಾ ಸರಿಹೊಂದುತ್ತದೆ? ಹಾಗೂ ಅವರಿಗೆ ತಕ್ಕನಾದ ಯಾವ ನಟಿ ಇರಬೇಕು ಎಂಬುದಲ್ಲವನ್ನು ಸೂಕ್ಷ್ಮವಾಗಿ ಗ್ರಹಿಸುವಂತಹ ಶಕ್ತಿಯನ್ನು ಪಾರ್ವತಮ್ಮನವರು ಹೊಂದಿದ್ದರು.
ಅಪ್ಪು ಸಿನಿಮಾಗೆ ಪುನೀತ್ ರಾಜಕುಮಾರ್ ಪಡೆದ ಮೊದಲ ಸಂಭಾವನೆ ಎಷ್ಟು? ಆ ದುಡ್ಡನ್ನು ಅವರು ಏನು ಮಾಡಿದ್ರು ಗೊತ್ತಾ?
ಹೀಗಾಗಿ ಪಾರ್ವತಮ್ಮನವರಿಗೆ ಹಿಡಿಸದಂತಹ ಸಿನಿಮಾಗಳನ್ನು ಅಣ್ಣಾವ್ರು ಮಾಡಲು ಹೋಗುತ್ತಿರಲಿಲ್ಲ. ಅಲ್ಲದೆ ಕೆಲವೊಮ್ಮೆ ಸಿನಿಮಾದ ಕಥೆಯನ್ನು ಸಂಪೂರ್ಣ ಪಾರ್ವತಮ್ಮನವರೇ ಕೇಳಿ ಅದನ್ನು ತಮ್ಮದೇ ದಾಟಿಯಲ್ಲಿ ಅಣ್ಣವರಿಗೆ ವರ್ಣಿಸುತ್ತಿದ್ದಂತಹ ಉದಾಹರಣೆಗಳು ಇವೆ.
ಹೀಗಿರುವಾಗ ಶಂಕರ್ ನಾಗ್ ಅಣ್ಣಾವ್ರಿಗೆ ಸಿನಿಮಾ ಮಾಡಬೇಕು ಎಂದು ನಿರ್ಧರಿಸಿದಗ ಡಾಕ್ಟರ್ ರಾಜಕುಮಾರ್ ಅವರು ಹಿಂದೆ ಮುಂದೆ ನೋಡದೆ ಒಪ್ಪಿಗೆ ಸೂಚಿಸಿಬಿಡುತ್ತಾರೆ.
ತಮ್ಮ ಬೊಕ್ಕ ತಲೆಯಿಂದಲೇ ಫೇಮಸ್ ಆದ ರಾಜ್ ಬಿ ಶೆಟ್ಟಿ ಅವರ ಬಗ್ಗೆ ನಿಮಗೆಷ್ಟು ಗೊತ್ತು?
ಆದರೆ ಆ ಸಿನಿಮಾದ ಕಥೆಯನ್ನು ಕೇಳಿದ ಪಾರ್ವತಮ್ಮನವರು ಸಿನಿಮಾದ ಕಥೆಯೇನೊ ಚೆನ್ನಾಗಿದೆ. ಆದರೆ ಇದಕ್ಕೆ ಏನೋ ಕಡಿಮೆಯಾಗಿದೆ ಎಂಬ ಹೇಳಿಕೆ ನೀಡಿ ಬಿಡುತ್ತಾರೆ. ಆದರೆ ಶಂಕರ್ ನಾಗ್ ಅವರಿಗೆ ತಮ್ಮ ಕಥೆಯ ಮೇಲೆ ಅಪಾರವಾದ ನಂಬಿಕೆ ಇದ್ದ ಕಾರಣ ಕಥೆಯ ಯಾವ ಸೀನ್ಗಳನ್ನು ಬದಲಾವಣೆ ಮಾಡಲು ಒಪ್ಪಿಕೊಳ್ಳಲಿಲ್ಲ. ಹೀಗೆ ತಮ್ಮ ಕಥೆಯ ಪ್ರಕಾರ ಅಣ್ಣವರಿಗೆ ಆಕ್ಷನ್ ಕಟ್ ಹೇಳಿದರು.
ಆ ಒಂದು ಕಾಲದಲ್ಲಿ ಶಂಕರ್ ನಾಗ್ ಹಾಗೂ ಅಣ್ಣಾವ್ರ ಜೋಡಿ ಬಹುದೊಡ್ಡ ಮಟ್ಟದ ಮೋಡಿ ಮಾಡಿತ್ತು ಎಂದರೆ ತಪ್ಪಾಗಲಾರದು. ಒಬ್ಬ ವ್ಯಕ್ತಿ ಪ್ರಕೃತಿದತ್ತವಾದ ಮುತ್ತಿನ ಹಿಂದೆ ಹೋದರೆ ಏನೆಲ್ಲ ಸಂಕಷ್ಟದೊಳಗೆ ಸಿಲುಕಿಕೊಳ್ಳುತ್ತಾನೆ ಎಂಬುದನ್ನು ಒಂದು ಮುತ್ತಿನ ಕಥೆ ಸಿನಿಮಾದಲ್ಲಿ (Ondu Muttina Kathe Cinema) ಹಂತ ಹಂತವಾಗಿ ಬಹಳ ಅಚ್ಚುಕಟ್ಟಾಗಿ ವಿವರಿಸಿದ್ದರು. ಆದರೆ ಪಾರ್ವತಮ್ಮನವರು ಹೇಳಿದ ಹಾಗೆ ಈ ಒಂದು ಕಥೆಗೆ ಏನೋ ಕಡಿಮೆ ಇತ್ತು.
ರವಿಚಂದ್ರನ್ ಅವರ ಸಣ್ಣ ತಪ್ಪಿನಿಂದ ದೊಡ್ಡ ಸಿನಿಮಾ ಆಫರ್ ಮಿಸ್ ಆಗಿತ್ತು! ಆ ಸೂಪರ್ ಹಿಟ್ ಸಿನಿಮಾ ಯಾವುದು ಗೊತ್ತಾ?
ಈ ಕಾರಣದಿಂದ ಸಿನಿಮಾ ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲ. ಇದರ ಮೂಲಕವೇ ಪಾರ್ವತಮ್ಮನವರಿಗೆ ಸಿನಿಮಾದ ಗ್ರಹಿಕಾ ಶಕ್ತಿ ಎಷ್ಟರಮಟ್ಟಿಗೆ ಇತ್ತು ಎಂಬುದನ್ನು ತಿಳಿಯಬಹುದಾಗಿದೆ.
Parvathamma Rajkumar Not Likes Ondu Muttina Kathe Cinema Story directed by Shankar Nag
Follow us On
Google News |