ನಾಗರಹಾವು ಸಿನಿಮಾ ಬಳಿಕ ಪುಟ್ಟಣ್ಣ ಕಣಗಾಲ್ ಮತ್ತೆಂದೂ ವಿಷ್ಣುವರ್ಧನ್ ಅವರಿಗೆ ಆಕ್ಷನ್ ಕಟ್ ಹೇಳದೇ ಇರಲು ಕಾರಣವೇನು ಗೊತ್ತಾ?
ಕನ್ನಡ ಸಿನಿಮಾ ರಂಗದ (Kannada Film Industry) ಮಾಂತ್ರಿಕ ನಿರ್ದೇಶಕನೆಂದೇ ಗುರುತಿಸಿಕೊಂಡಿರುವ ಪುಟ್ಟಣ್ಣ ಕಣಗಾಲ್ (Puttanna Kanagal) ಕನ್ನಡ ಸಿನಿಮಾ ರಂಗಕ್ಕೆ ತಮ್ಮದೇ ಆದ ಅಭೂತಪೂರ್ವ ಕೊಡುಗೆಯನ್ನು ನೀಡಿದ್ದಾರೆ.
ಇವರ ಡೈರೆಕ್ಷನ್ನಲ್ಲಿ ಮೂಡಿ ಬಂದಿರುವಂತಹ ಎಲ್ಲಾ ಸಿನಿಮಾಗಳು ಎಂದಿಗೂ ಕನ್ನಡ ಸಿನಿ (Kannada Cinema) ಪ್ರೇಕ್ಷಕರ ಹಾರ್ಟ್ ಫೇವರೆಟ್ ಸಿನಿಮಾಗಳ ಪಟ್ಟಿಯಲ್ಲಿವೆ. ಅದರಲ್ಲೂ ಪುಟ್ಟಣ್ಣ ಕಣಗಾಲ್ ತನ್ನ ಪ್ರಿಯ ಶಿಷ್ಯ ವಿಷ್ಣುವರ್ಧನ್ ಅವರಿಗೆ ಆಕ್ಷನ್ ಕಟ್ ಹೇಳಿದಂತಹ ನಾಗರಹಾವು (Naagarahaavu Movie) ಸಿನಿಮಾವನ್ನು ಎಂದಿಗೂ ವಿಷ್ಣು ಅಭಿಮಾನಿಗಳು (Vishnuvardhan Fans) ಮರೆಯಲು ಸಾಧ್ಯವೇ ಇಲ್ಲ.
ಚಾಮಯ್ಯ ಮೇಷ್ಟ್ರು ರಾಮಾಚಾರಿ ಅಲಮೇಲುರಂತಹ ಪಾತ್ರಗಳನ್ನು ಸೃಷ್ಟಿಸಿದ ಪುಟ್ಟಣ್ಣ ನಾಗರಹಾವು ಸಿನಿಮಾದ ಬಳಿಕ ಮತ್ತೆಂದು ವಿಷ್ಣುವರ್ಧನ್ ಅವರಿಗೆ ಆಕ್ಷನ್ ಕಟ್ ಹೇಳಲೇ ಇಲ್ಲ. ಹಾಗಾದ್ರೆ ವಿಷ್ಣುವರ್ಧನ್ (Actor Vishnuvardhan) ಅವರಿಗೆ ಹೋಲುವಂತಹ ಸಿನಿಮಾ ಕಥೆ ಇದ್ದರೂ ಅದನ್ನು ಶ್ರೀನಾಥ್ ಅವರಿಗೆ ಪುಟ್ಟಣ್ಣ ಮಾಡುತ್ತಿದ್ದದ್ದು ಯಾಕೆ?
ಅನಾರೋಗ್ಯದಿಂದ ಹಾಸಿಗೆ ಹಿಡಿದಿರೋ ಲೀಲಾವತಿ ಅಮ್ಮ ಕಣ್ಣೀರು ಹಾಕುತ್ತ ಕೊನೆ ಆಸೆ ಕೇಳಿದ್ದು ಏನು ಗೊತ್ತಾ?
ನಾಗರಹಾವು ಹಿಟ್ ಆಯಿತು, ಆದರೂ ನನಗೆ ಇನ್ನೊಂದು ಸಿನಿಮಾ ಯಾಕೆ ಮಾಡುತ್ತಿಲ್ಲ? ಎಂದು ವಿಷ್ಣು ಪದೇ ಪದೇ ಕೇಳುತ್ತಿದ್ದ ಪ್ರಶ್ನೆಗೆ ಪುಟ್ಟಣ್ಣ ನೀಡುತ್ತಿದ್ದ ಉತ್ತರ ಎಂತದ್ದು? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಪುಟ್ಟಣ್ಣನವರ ನಿರ್ದೇಶನದಲ್ಲಿ ಮೂಡಿ ಬಂದ ನಾಗರಹಾವು ಸಿನಿಮಾದ ಮೂಲಕ ಆಂಗ್ರಿ ಯಂಗ್ ಮ್ಯಾನ್ ಆಗಿ ರೋಷಾವೇಶದಿಂದ ಘರ್ಜಿಸಿ ವಿಷ್ಣುದಾದಾ ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟರು.
ಈ ಒಂದೇ ಒಂದು ಸಿನಿಮಾದ ಸಕ್ಸಸ್ ವಿಷ್ಣುವರ್ಧನ್ ಅವರಿಗೆ ಸಾಲು ಸಾಲು ಹಿಟ್ ಸಿನಿಮಾಗಳ ಅವಕಾಶ ಹರಸಿ ಬರುವಂತೆ ಮಾಡಿಕೊಟ್ಟಿತ್ತು. ಈ ಕಾರಣದಿಂದ ವಿಷ್ಣುವರ್ಧನ್ ಯಾವುದೇ ಸಂದರ್ಶನಗಳಲ್ಲಿ ಭಾಗಿಯಾದರು ತಮ್ಮ ಗುರುಗಳಾದ ಪುಟ್ಟಣ್ಣ ಕಣಗಾಲ್ ಅವರ ಕುರಿತು ಮಾತನಾಡದೆ ಎಂದು ತಮ್ಮ ಸಂದರ್ಶನವನ್ನು ಮುಗಿಸುತ್ತಿರಲಿಲ್ಲ.
ಹೀಗೆ ಇವರಿಬ್ಬರ ಕಾಂಬಿನೇಷನ್ ತೆರೆಯ ಮೇಲೆ ಬಹು ದೊಡ್ಡ ಮಟ್ಟದಲ್ಲಿ ಫೇಮಸ್ ಆದ ನಂತರ ಪುಟ್ಟಣ್ಣ ವಿಷ್ಣುವರ್ಧನ್ ಅವರೊಂದಿಗೆ ಮತ್ತೊಂದು ಸಿನಿಮಾ ಮಾಡಲಿಲ್ಲ ಎಂಬುದು ಇಂದಿಗೂ ವಿಷ್ಣು ಹಾಗು ಪುಟ್ಟಣ್ಣನ ಅಭಿಮಾನಿಗಳಿಗೆ ಇರುವಂತಹ ಕೊರಗು.
ಈ ಕುರಿತು ವಿಷ್ಣುವರ್ಧನ್ ಅವರು ನನಗೆ ಮತ್ತೆ ಯಾಕೆ ಸಿನಿಮಾ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದಾಗಲೆಲ್ಲ ಪುಟ್ಟಣ್ಣ ಕಣಗಾಲ್ ಮೌನವಹಿಸುತ್ತಿದ್ದರಂತೆ. ಹೌದು ಗೆಳೆಯರೇ ಪುಟ್ಟಣ್ಣ ಕಣಗಾಲ್ ಅವರು ಶುಭಮಂಗಳ ಸಿನಿಮಾವನ್ನು ನಿರ್ದೇಶಿಸುವಾಗ ಚಿತ್ರದ ನಾಯಕನಾಗಿ ವಿಷ್ಣು ಸೂಕ್ತ ಆಗುತ್ತಾರೆ ಎಂಬ ಇಚ್ಛೆ ಅವರಲ್ಲಿತ್ತು. ಅದು ವಿಷ್ಣುದಾದಾಗೂ ಕೂಡ ಗೊತ್ತಾಗಿ ಚಿತ್ರದಲ್ಲಿ ನಟಿಸಲು ಉತ್ಸುಕರಾಗಿದ್ದರು.
ಆದರೆ ಆ ಸಿನಿಮಾ ಪುಟ್ಟಣ್ಣನವರ ಮತ್ತೊಬ್ಬ ಪ್ರೀತಿಪಾತ್ರ ಶಿಷ್ಯರಾದ ಪ್ರಣಯ ರಾಜ ಶ್ರೀನಾಥ್ ಅವರ ಪಾಲಾಗುತ್ತದೆ. ಮಾನಸ ಸರೋವರ ಚಿತ್ರವನ್ನು ಸಹ ವಿಷ್ಣುವರ್ಧನ್ ಅವರನ್ನು ನೆನಪಿನಲ್ಲಿಟ್ಟುಕೊಂಡು ಪುಟ್ಟಣ್ಣ ಕಣಗಾಲ್ ಕಥೆ ರೆಡಿ ಮಾಡಿರುತ್ತಾರೆ, ಕಾರಣಾಂತರಗಳಿಂದ ಅದು ಕೂಡ ಶ್ರೀನಾಥ್ ಅವರ ಪಾಲಾಯಿತು.
ಆನಂತರ ನಡೆದದ್ದೆಲ್ಲವೂ ವಿಧಿ ವಿಪರೀತ, ವಿಧಿ ವಿಲಾಸ. ವಿಷ್ಣು ಹಾಗೂ ಪುಟ್ಟಣ್ಣ ಅವರ ಜೋಡಿಯಲ್ಲಿ ಬರಬೇಕಿದ್ದಂತಹ ಹಲವು ಸಿನಿಮಾಗಳನ್ನು ನಾವು ಕಳೆದುಕೊಂಡುಬಿಟ್ಟೆವು.
why Puttanna Kanagal Not Did movie with Vishnuvardhan again after Naagarahaavu Movie