ಮಹಿಳೆಯರಿಗೆ 4,000 ರೂಪಾಯಿ ಕೊಡಲು ಮುಂದಾದ ಸರ್ಕಾರ! ಹೊಸ ಯೋಜನೆ
ಇಂದು ಮಹಿಳೆಯರು ಸ್ವಾವಲಂಬಿ ಜೀವನದ (independence life) ಕಂಡುಕೊಳ್ಳುತ್ತಿದ್ದಾರೆ, ನಗರ ಪ್ರದೇಶ ಇರಬಹುದು ಅಥವಾ ಹಳ್ಳಿಯಲ್ಲಿಯೇ ಆಗಿರಬಹುದು ಹೆಣ್ಣು ಮಕ್ಕಳು ಮನೆಯಲ್ಲಿಯೇ ಕುಳಿತು ಅಡುಗೆ ಕೆಲಸವನ್ನು ಮಾಡುವುದಕ್ಕೆ ಸೀಮಿತವಾಗಿಲ್ಲ ಎಂಬುದನ್ನ ತೋರಿಸಿಕೊಡುತ್ತಿದ್ದಾರೆ.
ಹಳ್ಳಿಗಳಲ್ಲಿ ಗದ್ದೆ ಕೆಲಸಕ್ಕೆ ಹೋಗಿಯಾದರೂ ಕೂಡ ಹೆಂಗಸರು ದುಡಿಯುತ್ತಾರೆ. ಇನ್ನು ಮಹಿಳೆಯರಿಗೆ ಆರ್ಥಿಕ ಭದ್ರತೆ (financial security) ಯನ್ನು ಒದಗಿಸುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡ ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ ಸಾಧಿಸುವ ಸರ್ಕಾರದ ಉದ್ದೇಶ ಈಡೇರುತ್ತಿದೆ ಎನ್ನಬಹುದು.
ನಿಮ್ಮ ಬಳಿ ಯಾವುದೇ ಬ್ಯಾಂಕ್ ಖಾತೆ ಇದ್ರೂ ಸಾಕು, ಸಿಗುತ್ತೆ 2 ಲಕ್ಷ ರೂಪಾಯಿಗಳ ಲಾಭ!
ಮಹಾತ್ಮ ಗಾಂಧಿ ನ್ಯಾಷನಲ್ ರೂರಲ್ ಎಂಪ್ಲಾಯ್ಮೆಂಟ್ ಆಕ್ಟ್! (Mahatma Gandhi National Rural Employment act)
ಮಹಿಳೆಯರಿಗೆ ಮುಖ್ಯವಾಗಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಿ ಆರ್ಥಿಕವಾಗಿ ಅವರ ಸ್ವಾವಲಂಬನೆಯ ಜೀವನವನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ಇದು ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮಹಿಳೆಯರಿಗಾಗಿ ಲಭ್ಯವಿದ್ದು, ಸೀಮಿತ ಅವಧಿಗೆ ನೀಡುವ ಯೋಜನೆಯಾಗಿದೆ.
ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ (agriculture insurance company of India), ವತಿಯಿಂದ ಬೇಸಿಗೆಯಲ್ಲಿ ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಹಾಗೂ ಆರ್ಥಿಕ ಸಮಸ್ಯೆ ಉಂಟಾದರೆ ಅದನ್ನು ನಿವಾರಿಸುವ ಸಲುವಾಗಿ 4000 ವಿಮೆ ಹಣ ದೊರೆಯುತ್ತದೆ. ಇದು ಸೀಮಿತ ಅವಧಿಯದ್ದಾಗಿದ್ದು, ಮಾರ್ಚ್ 2024 ರಿಂದ ಜೂನಿಯರ್ 2024ರ ವರೆಗೆ ಮಹಿಳೆಯರಿಗೆ ಲಭ್ಯವಾಗುತ್ತದೆ.
ಬಾಡಿಗೆ ಮನೆಯಲ್ಲಿ ಇರುವವರಿಗೆ ವಸತಿ ಯೋಜನೆ! ಉಚಿತ ಮನೆಗೆ ಅರ್ಜಿ ಸಲ್ಲಿಸಿ
ಸೀಮಿತ ಅವದಿಗೆ 4,000 ಪಡೆಯಬಹುದು!
ಈ ಇನ್ಸೂರೆನ್ಸ್ ಸೀಮಿತ ಅವಧಿಯದ್ದು ಅಂದರೆ ಬೇಸಿಗೆ ಕಾಲದಲ್ಲಿ ಹೊರಗಡೆ ಗದ್ದೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದ ಹಾಗೆ ಅನಾರೋಗ್ಯ ಕಾಣಿಸಿಕೊಳ್ಳಬಹುದು ಅಥವಾ ಬಿಸಿಲಿನ ಬೇಗೆಗೆ ಕೆಲಸ ಮಾಡಲು ಸಾಧ್ಯವಾಗದೇ ಇರಬಹುದು.
ಆಗ ಆರ್ಥಿಕವಾಗಿ ಮತ್ತು ದೈಹಿಕವಾಗಿ ತೊಂದರೆ ಅನುಭವಿಸಬೇಕಾಗುತ್ತದೆ. ಇದನ್ನು ಪರಿಗಣಿಸಿರುವ ಸರ್ಕಾರ ಹೊಸ ಇನ್ಸೂರೆನ್ಸ್ ಯೋಜನೆ (Insurance Scheme) ಜಾರಿಗೆ ತಂದಿದ್ದು ಈ ಮೂಲಕ ಮಹಿಳೆಯರು ಕೇವಲ ಇನ್ನೂರು ರೂಪಾಯಿಗಳನ್ನು ಪಾವತಿ ಮಾಡಿದರೆ 4000ಗಳ ವಿಮಾ ಭದ್ರತೆ ಸಿಗುತ್ತದೆ. ಮತ್ತು ಈ ಹಣವನ್ನು ಮಾರ್ಚ್ 2024 ರಿಂದ ಜೂನ್ 2024ರ ವರೆಗೆ ಪಡೆದುಕೊಳ್ಳಬಹುದು.
ಕಡಿಮೆ ಬಂಡವಾಳ ಹಾಕಿ ಈ ಬಿಸಿನೆಸ್ ಮಾಡಿದ್ರೆ ದಿನಕ್ಕೆ 8,000 ಆದಾಯ ಫಿಕ್ಸ್
ಗ್ರಾಮೀಣ ಭಾಗದ ಮಹಿಳೆಯರಿಗೆ ಮೀಸಲು?
ಮಹಾತ್ಮ ಗಾಂಧಿ ನ್ಯಾಷನಲ್ ರೂರಲ್ ಎಂಪ್ಲಾಯ್ಮೆಂಟ್ ಆಕ್ಟ್, ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರಿಗಾಗಿಯೇ ಜಾರಿಗೆ ತರಲಾಗಿದೆ. ಅದರಲ್ಲೂ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಮಹಿಳೆಯರಿಗೆ ಆರ್ಥಿಕ ಭದ್ರತೆಯನ್ನು ನೀಡುವ ಸಲುವಾಗಿ ಜಾರಿಗೆ ಬಂದಿರುವ ಯೋಜನೆಯಾಗಿದೆ.
ಬೇಸಿಗೆ ಕಾಲದಲ್ಲಿ ಆರ್ಥಿಕ ನೆರವು ನೀಡುವಂತಹ ಯೋಜನೆಯಲ್ಲಿ ಹಳ್ಳಿ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರು ಆದಷ್ಟು ಹೂಡಿಕೆ ಮಾಡಿ ಪ್ರಯೋಜನ ಪಡೆದುಕೊಳ್ಳುವುದು ಒಳ್ಳೆಯದು.
ಸತ್ತ ವ್ಯಕ್ತಿಯ ಬ್ಯಾಂಕ್ ಅಕೌಂಟ್ ಹಣ ತೆಗೆಯೋದು ಹೇಗೆ! ಬಂತು ಹೊಸ ನಿಯಮ
Government to give 4,000 rupees to Such women by this new Scheme