ಈ ಒಂದು ಕೆಲಸ ಮಾಡದೆ ಇದ್ರೆ ತಕ್ಷಣ ಸ್ಟಾಪ್ ಆಗುತ್ತೆ ಗ್ಯಾಸ್ ಸಬ್ಸಿಡಿ ಹಣ! ಹೊಸ ರೂಲ್ಸ್
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (Pradhan mantri Ujjwala Yojana) ಅಡಿ ಬಡ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ (free gas connection) ನೀಡಲಾಗಿದೆ. ಹಾಗೂ ಸಬ್ಸಿಡಿ ದರದಲ್ಲಿ ಗ್ಯಾಸ್ (subsidy gas cylinder) ಸಿಲಿಂಡರ್ ನೀಡಲಾಗುತ್ತದೆ
ಈ ಒಂದು ಯೋಜನೆಯಿಂದ ಲಕ್ಷಾಂತರ ಮಹಿಳೆಯರಿಗೆ ಉಪಯುಕ್ತವಾಗಿದೆ, ಯಾಕೆಂದರೆ ಸೌದೆ ಒಲೆ ಉರಿಸಿ ಅಸ್ತಮಾ ಮೊದಲಾದ ರೋಗಗಳನ್ನ ತಂದುಕೊಳ್ಳುತ್ತಿದ್ದ ಮಹಿಳೆಯರಿಗೆ ಗ್ಯಾಸ್ ಅನ್ನು ಸಬ್ಸಿಡಿ (subsidy) ದರದಲ್ಲಿ ನೀಡುವ ಮೂಲಕ ಅಂತಹ ಮಹಿಳೆಯರ ಆರೋಗ್ಯದಲ್ಲಿ (health) ಸುಧಾರಣೆ ತರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ.
ಆಸ್ತಿ ಖರೀದಿ ಹಾಗೂ ಮಾರಾಟಕ್ಕೆ ಇನ್ಮುಂದೆ ಹೊಸ ರೂಲ್ಸ್! ಪ್ರತ್ಯೇಕ ನಿಯಮ ಜಾರಿಗೆ
ಸಬ್ಸಿಡಿ ದರದಲ್ಲಿ ಹೆಚ್ಚಳ!
ಇತ್ತೀಚಿನ ದಿನಗಳಲ್ಲಿ ಹಣದುಬ್ಬರ ಸಮಸ್ಯೆ ದೇಶದ ಪ್ರಜೆಗಳನ್ನು ಕಾಡುತ್ತಿದೆ ಎನ್ನಬಹುದು, ಇದರ ಜೊತೆಗೆ ಗ್ಯಾಸ್ ಸಿಲೆಂಡರ್ ದರವು ಕೂಡ ಇಳಿಕೆ ಕಂಡಿರಲಿಲ್ಲ ಆದರೆ ಕಳೆದ ಎರಡು ತಿಂಗಳ ಹಿಂದೆ ಕೇಂದ್ರ ಸರ್ಕಾರ 200 ರೂಪಾಯಿಗಳಷ್ಟು ಗ್ಯಾಸ್ ಸಿಲಿಂಡರ್ ದರವನ್ನು ಇಳಿಕೆ ಮಾಡಿದೆ. ಹಾಗಾಗಿ ಸಾವಿರದ ಗಡಿ ದಾಟಿದ ಎಲ್ ಪಿ ಜಿ ಸಿಲಿಂಡರ್ ದರ ಸುಮಾರು 900 ರೂಪಾಯಿಗಳಿಗೆ ಜನರಿಗೆ ಲಭ್ಯವಾಗುವಂತೆ ಆಗಿದೆ.
ಅದೇ ರೀತಿ ಉಜ್ವಲ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ (Ujjwala Yojana for women) ನೀಡಲಾಗುವ ಗ್ಯಾಸ್ ಸಿಲೆಂಡರ್ ಸಬ್ಸಿಡಿ ದರವನ್ನು ಕೂಡ ಜಾಸ್ತಿ ಮಾಡಲಾಗಿದೆ, ಈ ಮೂಲಕ ರೂ.300 ಗಳ ಸಬ್ಸಿಡಿ ಸಿಗುತ್ತದೆ. ಅಂದ್ರೆ ಒಂದು ಸಿಲಿಂಡರ್ ಅನ್ನು 603 ರೂಪಾಯಿಗಳಿಗೆ ಮಹಿಳೆಯರು ಪಡೆದುಕೊಳ್ಳಬಹುದು. ಈ ದರ ಇನ್ನಷ್ಟು ಇಳಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನವೆಂಬರ್ 1ರಿಂದ ದೇಶಾದ್ಯಂತ ಹೊಸ ರೂಲ್ಸ್! ಹೊಸ ನಿಯಮಗಳನ್ನು ತಿಳಿದುಕೊಳ್ಳಿ
ಈ ಕೆಲಸ ಮಾಡದಿದ್ರೆ ಸಿಗುವುದಿಲ್ಲ ಸಬ್ಸಿಡಿ!
ಉಜ್ವಲ ಯೋಜನೆಯ ಅಡಿಯಲ್ಲಿ ಯಾರು ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ತೆಗೆದುಕೊಂಡಿದ್ದು ಸಬ್ಸಿಡಿ ದರದಲ್ಲಿ ಸಿಲಿಂಡರ್ ಪಡೆದುಕೊಳ್ಳುತ್ತಿದ್ದೀರೋ ಅಂತವರು ಈ ವಿಷಯದ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು.
ದೇಶದ ಬಡವರಿಗಾಗಿಯೇ ಜಾರಿಗೆ ತಂದಿರುವ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಸಾಕಷ್ಟು ಮಹಿಳೆಯರಿಗೆ ಸಬ್ಸಿಡಿ ಸಿಲಿಂಡರ್ ಸಿಗುತ್ತಿದೆ. ಹೀಗೆ ಸಬ್ಸಿಡಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡಲಾಗುತ್ತದೆ. ಆದರೆ ಈಗ ಸರ್ಕಾರ ಮಹತ್ವದ ಆದೇಶ ಒಂದನ್ನು ಹೊರಡಿಸಿದ್ದು ಯಾರು ತಮ್ಮ ಖಾತೆಯ ಜೊತೆಗೆ ಆಧಾರ್ ಕಾರ್ಡ್ ಲಿಂಕ್ (Aadhaar Card link) ಮಾಡಿಕೊಳ್ಳುವುದಿಲ್ಲವೋ ಅಂತವರಿಗೆ ಯಾವುದೇ ಕಾರಣಕ್ಕೂ ಇನ್ನು ಮುಂದೆ ಸಬ್ಸಿಡಿ ಸಿಗುವುದಿಲ್ಲ.
ಗೂಗಲ್ ಪೇ ನಿಂದ ಪಡೆಯಿರಿ ₹15,000 ಸಾಲ, ಯಾವುದೇ ಗ್ಯಾರಂಟಿ ಕೊಡುವ ಅಗತ್ಯವಿಲ್ಲ
ಹೌದು, ಸರ್ಕಾರ ಉಜ್ವಲ ಯೋಜನೆಯಲ್ಲೂ ಕೂಡ ಯಾವುದೇ ರೀತಿಯ ವಂಚನೆ ಆಗಬಾರದು ಎನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದೆ, ಆದರೆ ಇಲ್ಲಿಯೂ ಕೂಡ ಸಾಕಷ್ಟು, ವಂಚನೆ ಆಗುವ ಸಾಧ್ಯತೆ ಇದ್ದು ಪಾರದರ್ಶಕತೆ (transparency) ಯನ್ನು ಕಾಪಾಡಿಕೊಳ್ಳಲು ಫಲಾನುಭವಿಗಳ ಖಾತೆಯ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಎನ್ನುವ ಆದೇಶವನ್ನು ಕೇಂದ್ರ ಸರ್ಕಾರ (Central government) ಹೊರಡಿಸಿದೆ.
ಹಾಗಾಗಿ ಇದುವರೆಗೆ ಬ್ಯಾಂಕ್ (Bank ) ನಲ್ಲಿ ಇರುವ ನಿಮ್ಮ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ ತಕ್ಷಣವೇ ಬ್ಯಾಂಕ್ ಗೆ ಹೋಗಿ ಈ ಕೆಲಸ ಮಾಡಿಸಿಕೊಳ್ಳಿ. ಇಲ್ಲವಾದರೆ ನವೆಂಬರ್ ತಿಂಗಳಿನ ಗ್ಯಾಸ್ ಸಬ್ಸಿಡಿ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ ಎಂಬುದನ್ನು ನೆನಪಿಡಿ.
the gas subsidy money will stop immediately if not linked Aadhaar with Bank Account